ದಸರಾ ಮಹೋತ್ಸವ 2022…ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಮೈಸೂರಿಗರಿಗೆ ಇಲ್ಲ ಸ್ಥಾನ…
- MysoreTV10 Kannada Exclusive
- September 26, 2022
- No Comment
- 107
ದಸರಾ ಮಹೋತ್ಸವ 2022…ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಮೈಸೂರಿಗರಿಗೆ ಇಲ್ಲ ಸ್ಥಾನ…
ಮೈಸೂರು,ಸೆ26,Tv10 ಕನ್ನಡ
ಎರಡು ವರ್ಷಗಳ ನಂತರ ಅದ್ದೂರಿ ದಸರಾಗೆ ಚಾಲನೆ ದೊರೆತಿದೆ.ಮೊದಲಬಾರಿಗೆ ರಾಷ್ಟ್ರಪತಿಗಳು ದಸರಾ ಉದ್ಘಾಟಿಸಿದ್ದಾರೆ.ರಾಷ್ಟ್ರಪತಿಗಳ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಮೈಸೂರಿಗರಿಗೇ ಸ್ಥಾನ ಇಲ್ಲವಾದಂತಾಗಿದೆ.ಸ್ಥಳೀಯ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಬೇಕಾದ್ದು ಶಿಷ್ಟಾಚಾರ.ಮೊದಲಬಾರಿಗೆ ದೇಶದ ಮೊದಲಪ್ರಜೆ ದಸರಾ ಉದ್ಘಾಟಿಸಿದ ಕಾರ್ಯಕ್ರಮಕ್ಕೆ ಸ್ಥಳೀಯ ಜನಪ್ರತಿನಿಧಿಗಳು ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡಿಲ್ಲ.ಹೊರಗಿನವರಿಗೇ ಸ್ಥಾನ ಕಲ್ಪಿಸಿರುವುದು ಚರ್ಚೆಗೆ ಗ್ರಾಸವಾಗಿದೆ.ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ,ಸಂಸದ ಪ್ರತಾಪ್ ಸಿಂಹ,ಮೈಸೂರು ಮೇಯರ್ ಶಿವಕುಮಾರ್ ಗೂ ಸಹ ಕಾರ್ಯಕ್ರಮದ ವೇದಿಕೆ ಹಂಚಿಕೊಳ್ಳುವ ಭಾಗ್ಯ ದೊರೆತಿಲ್ಲ.ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಶಿಷ್ಟಾಚಾರ ಅನುಸರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.ರಾಜ್ಯ ಸರ್ಕಾರದ ಪಾತ್ರ ಏನೂ ಇಲ್ಲವೆಂದು ತಿಳಿಸಿದ್ದಾರೆ…