ದಸರಾ ಸಂಭ್ರಮ…ಸಚಿವ ಎಸ್.ಟಿ.ಸೋಮಶೇಖರ್ ರಿಂದ ಮಕ್ಕಳ ಚಿತ್ರಕಲಾ ಸ್ಪರ್ಧೆ,ಕರಕುಶಲ ಪ್ರಾತ್ಯಕ್ಷಿಕೆ ಉದ್ಘಾಟನೆ…

ದಸರಾ ಸಂಭ್ರಮ…ಸಚಿವ ಎಸ್.ಟಿ.ಸೋಮಶೇಖರ್ ರಿಂದ ಮಕ್ಕಳ ಚಿತ್ರಕಲಾ ಸ್ಪರ್ಧೆ,ಕರಕುಶಲ ಪ್ರಾತ್ಯಕ್ಷಿಕೆ ಉದ್ಘಾಟನೆ…

ದಸರಾ ಸಂಭ್ರಮ…ಸಚಿವ ಎಸ್.ಟಿ.ಸೋಮಶೇಖರ್ ರಿಂದ ಮಕ್ಕಳ ಚಿತ್ರಕಲಾ ಸ್ಪರ್ಧೆ,ಕರಕುಶಲ ಪ್ರಾತ್ಯಕ್ಷಿಕೆ ಉದ್ಘಾಟನೆ…

ಮೈಸೂರು,ಅ1,Tv10 ಕನ್ನಡ
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ‘’ಕರಕುಶಲ ಪ್ರಾತ್ಯಕ್ಷಿಕೆ ಮತ್ತು ಮಕ್ಕಳ ಚಿತ್ರಕಲಾ ಸ್ಪರ್ಧೆ’’ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಉದ್ಘಾಟಿಸಿದರು.
ಮಕ್ಕಳ ಪ್ರತಿಭೆಯನ್ನು ಗುರುತಿಸುವುದಕ್ಕೆ ದಸರಾ ಚಿತ್ರಕಲಾ ಪ್ರದರ್ಶನವು ಉತ್ತಮ ವೇದಿಕೆಯಾಗಿದೆ. ಪೋಷಕರು ಹಾಗೂ ಶಿಕ್ಷಕರಿಗೂ ಮಕ್ಕಳ ಚಿತ್ರಕಲಾ ಪ್ರದರ್ಶನವು ಸಂತೋಷನ್ನುಂಟು ಮಾಡಲಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. 1 ರಿಂದ 4 ವಯೋಮಿತಿ ಗೆ(ಪ್ರಾಣಿ,ಪಕ್ಷಿ,ಪರಿಸರ)5-7ರವರೆಗೆ(ಮೈಸೂರಿನ ಸುಂದರ ತಾಣಗಳು,ಸ್ಮಾರಕಗಳು, ಸಾಧಕರು),8-10ರವರೆಗೆ(75ನೇ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ)ಹೀಗೆ ಮೂರು ವಿಭಾಗದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬಳಿಕ ಕಲಾಮಂದಿರ ಆವರಣದಲ್ಲಿ ಆಯೋಜಿಸಿದ್ದ ಕಿನ್ನಾಳ ಕಲೆ, ಕೌದಿ ಮತ್ತು ಕಸೂತಿ ಕಲೆ, ಕುಂಬಾರಿಕೆ, ಇನ್ಲೆ ಕಲೆ ಚರಕದಿಂದ ನೂಲುವಿಕೆ, ಕೈಮಗ್ಗದ ನೇಕಾರಿಕೆ, ವರ್ಲಿ ಕಲೆ, ಚನ್ನಪಟ್ಟಣ ಗೊಂಬೆ ತಯಾರಿಕೆ, ಬಿದಿರು ಬೆತ್ತದ ಬುಟ್ಟಿ ಹೆಣಿಗೆ, ಮದರಂಗಿ ಕಲೆ, ವ್ಯಂಗ್ಯ ಚಿತ್ರಕಲೆ, ಸೂಕ್ಷ್ಮ ಕಲೆ ಪ್ರದರ್ಶನ ಕರಕುಶಲ ಪ್ರಾತ್ಯಕ್ಷಿಕೆ ಮಳಿಗೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು. ಮಳಿಗೆಗಳಿಗೆ ಭೇಟಿ ನೀಡಿ, ಚರಕದಿಂದ ತಯಾರಿಸಿದ 23 ಟವೆಲ್‌ಗಳು ಸೇರಿದಂತೆ ಗೊಂಬೆಗಳು, ಮಣ್ಣಿನ ದೀಪಗಳು, ಬಿದಿರಿನಿಂದ ತಯಾರಿಸಿದ ಕೀ ಬಂಚ್‌ಗಳನ್ನು ಖರೀದಿಸಿ ಸಮಿತಿಯ ಸದಸ್ಯರಿಗೆ ಉಡುಗೊರೆಯಾಗಿ ನೀಡಿದರು.

ಈ ಸಂದರ್ಭ ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್, ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು…

Spread the love

Related post

ಹಳೇ ವೈಷಮ್ಯ.. ಯುವಕನಿಗೆ ಚಾಕು ಇರಿತ…

ಹಳೇ ವೈಷಮ್ಯ.. ಯುವಕನಿಗೆ ಚಾಕು ಇರಿತ…

ಹಳೇ ವೈಷಮ್ಯ.. ಯುವಕನಿಗೆ ಚಾಕು ಇರಿತ… ಹುಣಸೂರು,ಅ18,Tv10 ಕನ್ನಡ ಹಳೇ ವೈಷಮ್ಯ ಹಿನ್ನಲೆ ಯುವಕನಿಗೆ ಚಾಕುವಿನಿಂದ ಇರಿದ ಘಟನೆ ಹುಣಸೂರು ತಾಲ್ಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.ಕೃಷಿ ಕೂಲಿ ಕಾರ್ಮಿಕ…
ರಾಬರಿ ಪ್ರಕರಣ…ಆರೋಪಿ ಅಂದರ್…ಮೈಸೂರು ಗ್ರಾಮಾಂತರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ರಾಬರಿ ಪ್ರಕರಣ…ಆರೋಪಿ ಅಂದರ್…ಮೈಸೂರು ಗ್ರಾಮಾಂತರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ಮೈಸೂರು,ಅ17,Tv10 ಕನ್ನಡ ಬಾಡಿಗೆ ನೆಪದಲ್ಲಿ ಚಾಲಕನಿಗೆ ಹಲ್ಲೆ ನಡೆಸಿ ಆಟೋ,ನಗದು ಹಾಗೂ ಮೊಬೈಲ್ ದೋಚಿ ಪರಾರಿಯಾದ ಪ್ರಮುಖ ಆರೋಪಿಯನ್ನ ಬಂಧಿಸುವಲ್ಲಿ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.ಆರೋಪಿಯಿಂದ ಆಟೋ…
ಮುಡಾ ಅಧ್ಯಕ್ಷ ಕೆ.ಮರಿಗೌಡ ರಾಜಿನಾಮೆ…ಆಡಳಿತಾಧಿಕಾರಿ ನೇಮಕಕ್ಕೆ ನಿರ್ಧಾರ…

ಮುಡಾ ಅಧ್ಯಕ್ಷ ಕೆ.ಮರಿಗೌಡ ರಾಜಿನಾಮೆ…ಆಡಳಿತಾಧಿಕಾರಿ ನೇಮಕಕ್ಕೆ ನಿರ್ಧಾರ…

ಮೈಸೂರು,ಅ16,Tv10 ಕನ್ನಡ ಮುಡಾದ ಅಧ್ಯಕ್ಷ ಕೆ ಮರೀಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ಬೆಂಗಳೂರಿನ ನಗರಾಭಿವೃದ್ಧಿ ಸಚಿವಾಲಯದಲ್ಲಿ ರಾಜೀನಾಮೆ ನೀಡಿದ್ದಾರೆ.ಮುಡಾಗೆ ಆಡಳಿತಾಧಿಕಾರಿ ನೇಮಕಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ…

Leave a Reply

Your email address will not be published. Required fields are marked *