ತ್ರಿಪುರ ಭೈರವಿ ಮಠದಲ್ಲಿ ಅಖಂಡ ಭಾರತಕ್ಕಾಗಿ ಒಂದು ದೀಪ ಕಾರ್ಯಕ್ರಮ… ವೀರಸಾವರ್ಕರ್ ಯುವ ಬಳಗದಿಂದ ಆಚರಣೆ…

ತ್ರಿಪುರ ಭೈರವಿ ಮಠದಲ್ಲಿ ಅಖಂಡ ಭಾರತಕ್ಕಾಗಿ ಒಂದು ದೀಪ ಕಾರ್ಯಕ್ರಮ… ವೀರಸಾವರ್ಕರ್ ಯುವ ಬಳಗದಿಂದ ಆಚರಣೆ…

ತ್ರಿಪುರ ಭೈರವಿ ಮಠದಲ್ಲಿ ಅಖಂಡ ಭಾರತಕ್ಕಾಗಿ ಒಂದು ದೀಪ ಕಾರ್ಯಕ್ರಮ… ವೀರಸಾವರ್ಕರ್ ಯುವ ಬಳಗದಿಂದ ಆಚರಣೆ…

ಮೈಸೂರು,ಅ25,Tv10 ಕನ್ನಡ
ಡಿ.ದೇವರಾಜ ಅರಸು ರಸ್ತೆಯ ತ್ರಿಪುರಭೈರವಿ ಮಠದ ಆವರಣದಲ್ಲಿ ವೀರಸಾವರ್ಕರ್ ಯುವ ಬಳಗದ ವತಿಯಿಂದ ಅಖಂಡ ಭಾರತಕ್ಕೆ ಒಂದು ದೀಪ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಮಯನ್ಮಾರ್, ಥಾಯ್ಲಾಂಡ್, ಕಾಂಬೋಡಿಯಾ, ವಿಯೆಟ್ನಾಂ, ಇಂಡೋನೇಷಿಯಾ, ಶ್ರೀಲಂಕಾ, ಮಾಲ್ಡೀವ್ಸ್ ಸೇರಿದಂತೆ ಅನೇಕ ದೇಶಗಳಲ್ಲಿ ಹಿಂದೂಸ್ಥಾನದ ಸಂಸ್ಕೃತಿಯು ನೆಲೆಸಿತ್ತು.ಕಾಲಾಂತರದಲ್ಲಿ ಬದಲಾವಣೆಗಳಾಗಿ ವಿವಿಧ ದೇಶಗಳಾಗಿ ಗಡಿ ಹಾಕಿಕೊಂಡಿವೆ. ಎಲ್ಲವನ್ನೂ ಮತ್ತೆ ಒಟ್ಟುಗೂಡಿಸಿ ಅಖಂಡ ಭಾರತವನ್ನಾಗಿಸುವ ಸಂಕಲ್ಪಕ್ಕಾಗಿ ದೀಪಾವಳಿಯಂದು ಅಖಂಡ ಭಾರತಕ್ಕಾಗಿ ಒಂದು ದೀಪ ಎಂಬ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಆಚರಿಸಲಾಗುತ್ತಿದೆ. ಅಖಂಡ ಭಾರತದ ಭೂಪಟದ ಮುಂದೆ ಹಣತೆಯನ್ನು ಹಚ್ಚಿ ಆರತಿ ಮಾಡಲಾಯಿತು. ಭಾರತ ಮಾತೆಗೆ ಜಯಘೋಷ ಕೂಗಿ ಅಖಂಡ ಭಾರತಕ್ಕಾಗಿ ಸಂಕಲ್ಪಿಸಲಾಯಿತು.
ನಂತರ ಮಾತನಾಡಿದ ಬಳಗದ ಅಧ್ಯಕ್ಷ ರಾಕೇಶ್ ಭಟ್ “ಹಿಂದೂಸ್ತಾನದ ಸುತ್ತಮುತ್ತಲಿನ ದೇಶಗಳಲ್ಲಿ ಭಾರತೀಯ ಹೆಸರುಗಳು, ಸಂಸ್ಕೃತಿ ಜೀವಂತವಾಗಿರುವುದನ್ನು ಈಗಲೂ ಕಾಣಬಹುದು.ಇತ್ತೀಚಿನ ದಿನಗಳಲ್ಲಿ ಹಿಂದುತ್ವ ಎಂದರೆ ಕೋಮುವಾದ, ಮೂಲಭೂತವಾದ ಮತ್ತು ಬ್ರಾಹ್ಮಣವಾದ ಎಂಬ ಸುಳ್ಳನ್ನು ಜನರ ಮನಸ್ಸಿನಲ್ಲಿ ತುಂಬಲು ಯತ್ನಿಸಲಾಗುತ್ತಿದೆ. ಆದರೆ ಸಾವರ್ಕರ್ ಅವರು ಯಾರೆಲ್ಲಾ ಭಾರತೀಯ ನೆಲದ ಸಂಸ್ಕೃತಿಯನ್ನು ಒಪ್ಪಿ ಅನುಸರಿಸಿ ಬದುಕುತ್ತಿದ್ದಾರೋ ಅವರೆಲ್ಲರೂ ಹಿಂದೂಗಳು ಎಂಬುದನ್ನು ಪ್ರತಿಪಾದಿಸಿದ್ದರು. ಸರ್ವೋಚ್ಚ ನ್ಯಾಯಾಲಯವು ಸಹ ಹಿಂದೂ ಎಂದರೆ ಬದುಕುವ ವಿಧಾನ ಎಂಬುದಾಗಿ ತಿಳಿಸಿದೆ. ಈ ಸಿದ್ಧಾಂತದ ಅಡಿಯಲ್ಲಿ ಸರ್ವ ಧರ್ಮಗಳು, ಮತಗಳು, ಜಾತಿಗಳು ಸಹಿಷ್ಣುತೆಯಿಂದ ಪರಸ್ಪರರ ಸಂಸ್ಕೃತಿಯನ್ನು ಗೌರವಿಸುತ್ತಾ ಬದುಕುವುದೇ ಆಗಿದೆ. ಹಾಗಾಗಿ ಅಖಂಡ ಭಾರತದ ನಿರ್ಮಾಣದಿಂದ ಪ್ರಪಂಚದಲ್ಲಿಯೇ ಭಾರತೀಯ ಸಂಸ್ಕೃತಿ ಮೇಳೈಸಲಿದೆ” ಎಂದರು. ಸಂದೇಶ್ ಪವಾರ್, ಟಿ.ಎಸ್. ಅರುಣ್, ಸುರೇಂದ್ರ, ಬಿ.ಸಿ.ಶಶಿಕಾಂತ್, ಅಂಬಾರಿ ಪ್ರಹ್ಲಾದರಾವ್, ಅನೂಜ್ ಸಾರಸ್ವತ್, ಶ್ರೀನಿವಾಸಪ್ರಸಾದ್, ಸುಚೇಂದ್ರ, ಉಮೇಶ್, ಸಂತೋಷ್, ಕುಮಾರ್, ಮುರಳಿ ಭಾಗವಹಿಸಿದ್ದರು…

Spread the love

Related post

ನಂಜನಗೂಡು ಶಿಕ್ಷಕ ಸೇರಿದಂತೆ BEO ಲೋಕಾ ಬಲೆಗೆ…ಗೌರವ ಧನ ಬಿಡುಗಡೆ ಮಾಡಲು ಲಂಚ…

ನಂಜನಗೂಡು ಶಿಕ್ಷಕ ಸೇರಿದಂತೆ BEO ಲೋಕಾ ಬಲೆಗೆ…ಗೌರವ ಧನ ಬಿಡುಗಡೆ ಮಾಡಲು…

ನಂಜನಗೂಡು,ಮಾ28,Tv10 ಕನ್ನಡ ಗೌರವ ಧನ ಬಿಡುಗಡೆ ಮಾಡಲು ವ್ಯಕ್ತಿಯೊಬ್ಬರಿಂದ 5 ಸಾವಿರ ಲಂಚ ಪಡೆಯುತ್ತಿದ್ದ ಶಿಕ್ಷಕ ಹಾಗೂ ಬಿಇಓ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ನಂಜನಗೂಡು ಬಿಇಓ ಶಿವಲಿಂಗಯ್ಯ ಹಾಗೂ ಶಿಕ್ಷಕ…
Tv10 ಕನ್ನಡ ವಾಹಿನಿ ವರದಿ ಫಲಶೃತಿ…ಅಂಬೇಡ್ಕರ್ ವಸತಿಶಾಲೆ ಪ್ರಾಂಶುಪಾಲ ಅಮಾನತು…ಇಲಾಖಾ ವಿಚಾರಣೆಗೆ ಆದೇಶ…

Tv10 ಕನ್ನಡ ವಾಹಿನಿ ವರದಿ ಫಲಶೃತಿ…ಅಂಬೇಡ್ಕರ್ ವಸತಿಶಾಲೆ ಪ್ರಾಂಶುಪಾಲ ಅಮಾನತು…ಇಲಾಖಾ ವಿಚಾರಣೆಗೆ…

ನಂಜನಗೂಡು,ಮಾ28,Tv10 ಕನ್ನಡ ನಂಜನಗೂಡು ತಾಲೂಕು ಹದಿನಾರು ಗ್ರಾಮದ ಅಂಬೇಂಡ್ಕರ್ ವಸತಿ ಶಾಲೆ ಪ್ರಾಂಶುಪಾಲ ಪ್ರಸನ್ನ ಕುಮಾರ್ ಗೆ ಸರ್ಕಾರ ಗೇಟ್ ಪಾಸ್ ನೀಡಿದ ಕರ್ತವ್ಯ ಲೋಪ ಹಿನ್ನಲೆ ಸೇವೆಯಿಂದ…
ಲಷ್ಕರ್ ಠಾಣೆ ಪೊಲೀಸರ ಮಿಂಚಿನ ಕಾರ್ಯಾಚರಣೆ…ಆಟೋದಲ್ಲಿ ಮರೆತುಹೋಗಿದ್ದ ಚಿನ್ನಾಭರಣ ಬ್ಯಾಗ್ ಮಾಲೀಕರ ವಶಕ್ಕೆ…

ಲಷ್ಕರ್ ಠಾಣೆ ಪೊಲೀಸರ ಮಿಂಚಿನ ಕಾರ್ಯಾಚರಣೆ…ಆಟೋದಲ್ಲಿ ಮರೆತುಹೋಗಿದ್ದ ಚಿನ್ನಾಭರಣ ಬ್ಯಾಗ್ ಮಾಲೀಕರ…

ಮೈಸೂರು,ಮಾ28,Tv10 ಕನ್ನಡ ಆಟೋದಲ್ಲಿ ಮರೆತುಹೋಗಿದ್ದ ಚಿನ್ನಾಭರಣವಿದ್ದ ಬ್ಯಾಗ್ ಮಾಲೀಕರ ವಶಕ್ಕೆ ತಲುಪಿಸುವಲ್ಲಿ ಲಷ್ಕರ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.ಇನ್ಸ್ಪೆಕ್ಟರ್ ಮಹಮದ್ ಸಲೀಂ ಅಬ್ಬಾಸ್ ರವರ ಸಮಯೋಚಿತ ಕಾರ್ಯಾಚರಣೆಯಿಂದ ಚಿನ್ನದ ಬ್ಯಾಗ್…

Leave a Reply

Your email address will not be published. Required fields are marked *