ದೇವಸ್ಥಾನಕ್ಕೆ ನೋ ಎಂಟ್ರಿ…ಅಸ್ಪೃಶ್ಯತೆ ಆಚರಣೆ ಹಿನ್ನಲೆ…ನಿವೃತ್ತ ಶಿಕ್ಷಕ ಸೇರಿದಂತೆ 8 ಮಂದಿ ವಿರುದ್ದ ಅಟ್ರಾಸಿಟಿ ಕೇಸ್…

ದೇವಸ್ಥಾನಕ್ಕೆ ನೋ ಎಂಟ್ರಿ…ಅಸ್ಪೃಶ್ಯತೆ ಆಚರಣೆ ಹಿನ್ನಲೆ…ನಿವೃತ್ತ ಶಿಕ್ಷಕ ಸೇರಿದಂತೆ 8 ಮಂದಿ ವಿರುದ್ದ ಅಟ್ರಾಸಿಟಿ ಕೇಸ್…

ದೇವಸ್ಥಾನಕ್ಕೆ ನೋ ಎಂಟ್ರಿ…ಅಸ್ಪೃಶ್ಯತೆ ಆಚರಣೆ ಹಿನ್ನಲೆ…ನಿವೃತ್ತ ಶಿಕ್ಷಕ ಸೇರಿದಂತೆ 8 ಮಂದಿ ವಿರುದ್ದ ಅಟ್ರಾಸಿಟಿ ಕೇಸ್…

ಪಿರಿಯಾಪಟ್ಟಣ,ನ7,Tv10 ಕನ್ನಡ
21 ನೇ ಶತಮಾನದ ರಾಕೆಟ್ ಯುಗದಲ್ಲಿ ಇದ್ದರೂ ಅಸ್ಪೃಶ್ಯತೆ ಆಚರಣೆ ಪಿಡುಗು ನಿಂತಿಲ್ಲ.ದಲಿತರ ಮೇಲೆ ನಿರಂತರ ದಬ್ಬಾಳಿಕೆ ಮುಂದುವರೆಯುತ್ತಲೇ ಇದೆ.ದೇವಸ್ಥಾನದಲ್ಲಿ ಪೂಜೆ ಮಾಡಲು ತೆರಳಿದ ದಲಿತ ವ್ಯಕ್ತಿಯನ್ನ ಪ್ರವೇಶಿಸದಂತೆ ತಡೆದು ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ ಪ್ರಕರಣವೊಂದು ಪಿರಿಯಾಪಟ್ಟಣ ತಾಲೂಕಿನ ಬೆಕ್ಕರೆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಸಂಪ್ರದಾಯದಂತೆ ಪೂಜೆ ನೆರವೇರಿಸಲು ತೆರಳಿದ ವ್ಯಕ್ತಿಯನ್ನ ಎಳೆದಾಡಿ ಅವ್ಯಾಚ ಶಬ್ದಗಳಿಂದ ನಿಂದಸಿ ದೇವಸ್ಥಾನಕ್ಕೆ ಪ್ರವೇಶಿಸಂತೆ ನಿರ್ಬಂಧಿಸಿದ್ದಾರೆ.ಪ್ರಕರಣಕ್ಕೆ ಸಂಭಂಧಿಸಿದಂತೆ ನಿವೃತ್ತ ಶಿಕ್ಷಕ ಸೇರಿದಂತೆ 8 ಮಂದಿ ವಿರುದ್ದ FIR ದಾಖಲಾಗಿದೆ.

ಬೆಕ್ಕರೆ ಗ್ರಾಮದ ಮಹದೇವ ಎಂಬುವರು ಶ್ರೀ ಬಾಲಚಂದ್ರ ಬಸವೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 25 ರಂದು ಪೂಜೆ ಸಲ್ಲಿಸಲು ತೆರಳಿದಾಗ ನಿವೃತ್ತ ಶಿಕ್ಷಕರಾದ ಬಸವೇಗೌಡ ಎಂಬುವರು ಪ್ರವೇಶವನ್ನ ನಿರಾಕರಿಸಿದ್ದಾರೆ.ಇದನ್ನ ಪ್ರಶ್ನಿಸಿದಾಗ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ.ಬಸವೇಗೌಡ ರವರಿಗೆ ಮರಳೀಧರ್,ಪ್ರಸನ್ನ,ರವಿಕುಮಾರ್,ಚಂದ್ರಶೇಖರ್,ಬಸವರಾಜ್,ಮಹದೇವ ಹಾಗೂ ನವೀನ ಸಾಥ್ ನೀಡಿದ್ದಾರೆ.ದಲಿತ ಜನಾಂಗದ ಮಹದೇವ ರವರ ಮೇಲೆ ದೌರ್ಜನ್ಯ ನಡೆಸಿದ ನಿವೃತ್ತ ಶಿಕ್ಷಕ ಸೇರಿದಂತೆ 8 ಮಂದಿ ವಿರುದ್ದ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *