ದೇವಸ್ಥಾನಕ್ಕೆ ನೋ ಎಂಟ್ರಿ…ಅಸ್ಪೃಶ್ಯತೆ ಆಚರಣೆ ಹಿನ್ನಲೆ…ನಿವೃತ್ತ ಶಿಕ್ಷಕ ಸೇರಿದಂತೆ 8 ಮಂದಿ ವಿರುದ್ದ ಅಟ್ರಾಸಿಟಿ ಕೇಸ್…
- TV10 Kannada Exclusive
- November 7, 2022
- No Comment
- 174
ದೇವಸ್ಥಾನಕ್ಕೆ ನೋ ಎಂಟ್ರಿ…ಅಸ್ಪೃಶ್ಯತೆ ಆಚರಣೆ ಹಿನ್ನಲೆ…ನಿವೃತ್ತ ಶಿಕ್ಷಕ ಸೇರಿದಂತೆ 8 ಮಂದಿ ವಿರುದ್ದ ಅಟ್ರಾಸಿಟಿ ಕೇಸ್…
ಪಿರಿಯಾಪಟ್ಟಣ,ನ7,Tv10 ಕನ್ನಡ
21 ನೇ ಶತಮಾನದ ರಾಕೆಟ್ ಯುಗದಲ್ಲಿ ಇದ್ದರೂ ಅಸ್ಪೃಶ್ಯತೆ ಆಚರಣೆ ಪಿಡುಗು ನಿಂತಿಲ್ಲ.ದಲಿತರ ಮೇಲೆ ನಿರಂತರ ದಬ್ಬಾಳಿಕೆ ಮುಂದುವರೆಯುತ್ತಲೇ ಇದೆ.ದೇವಸ್ಥಾನದಲ್ಲಿ ಪೂಜೆ ಮಾಡಲು ತೆರಳಿದ ದಲಿತ ವ್ಯಕ್ತಿಯನ್ನ ಪ್ರವೇಶಿಸದಂತೆ ತಡೆದು ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ ಪ್ರಕರಣವೊಂದು ಪಿರಿಯಾಪಟ್ಟಣ ತಾಲೂಕಿನ ಬೆಕ್ಕರೆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಸಂಪ್ರದಾಯದಂತೆ ಪೂಜೆ ನೆರವೇರಿಸಲು ತೆರಳಿದ ವ್ಯಕ್ತಿಯನ್ನ ಎಳೆದಾಡಿ ಅವ್ಯಾಚ ಶಬ್ದಗಳಿಂದ ನಿಂದಸಿ ದೇವಸ್ಥಾನಕ್ಕೆ ಪ್ರವೇಶಿಸಂತೆ ನಿರ್ಬಂಧಿಸಿದ್ದಾರೆ.ಪ್ರಕರಣಕ್ಕೆ ಸಂಭಂಧಿಸಿದಂತೆ ನಿವೃತ್ತ ಶಿಕ್ಷಕ ಸೇರಿದಂತೆ 8 ಮಂದಿ ವಿರುದ್ದ FIR ದಾಖಲಾಗಿದೆ.
ಬೆಕ್ಕರೆ ಗ್ರಾಮದ ಮಹದೇವ ಎಂಬುವರು ಶ್ರೀ ಬಾಲಚಂದ್ರ ಬಸವೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 25 ರಂದು ಪೂಜೆ ಸಲ್ಲಿಸಲು ತೆರಳಿದಾಗ ನಿವೃತ್ತ ಶಿಕ್ಷಕರಾದ ಬಸವೇಗೌಡ ಎಂಬುವರು ಪ್ರವೇಶವನ್ನ ನಿರಾಕರಿಸಿದ್ದಾರೆ.ಇದನ್ನ ಪ್ರಶ್ನಿಸಿದಾಗ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ.ಬಸವೇಗೌಡ ರವರಿಗೆ ಮರಳೀಧರ್,ಪ್ರಸನ್ನ,ರವಿಕುಮಾರ್,ಚಂದ್ರಶೇಖರ್,ಬಸವರಾಜ್,ಮಹದೇವ ಹಾಗೂ ನವೀನ ಸಾಥ್ ನೀಡಿದ್ದಾರೆ.ದಲಿತ ಜನಾಂಗದ ಮಹದೇವ ರವರ ಮೇಲೆ ದೌರ್ಜನ್ಯ ನಡೆಸಿದ ನಿವೃತ್ತ ಶಿಕ್ಷಕ ಸೇರಿದಂತೆ 8 ಮಂದಿ ವಿರುದ್ದ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ…