ದೇವಸ್ಥಾನಕ್ಕೆ ನೋ ಎಂಟ್ರಿ…ಅಸ್ಪೃಶ್ಯತೆ ಆಚರಣೆ ಹಿನ್ನಲೆ…ನಿವೃತ್ತ ಶಿಕ್ಷಕ ಸೇರಿದಂತೆ 8 ಮಂದಿ ವಿರುದ್ದ ಅಟ್ರಾಸಿಟಿ ಕೇಸ್…

ದೇವಸ್ಥಾನಕ್ಕೆ ನೋ ಎಂಟ್ರಿ…ಅಸ್ಪೃಶ್ಯತೆ ಆಚರಣೆ ಹಿನ್ನಲೆ…ನಿವೃತ್ತ ಶಿಕ್ಷಕ ಸೇರಿದಂತೆ 8 ಮಂದಿ ವಿರುದ್ದ ಅಟ್ರಾಸಿಟಿ ಕೇಸ್…

ದೇವಸ್ಥಾನಕ್ಕೆ ನೋ ಎಂಟ್ರಿ…ಅಸ್ಪೃಶ್ಯತೆ ಆಚರಣೆ ಹಿನ್ನಲೆ…ನಿವೃತ್ತ ಶಿಕ್ಷಕ ಸೇರಿದಂತೆ 8 ಮಂದಿ ವಿರುದ್ದ ಅಟ್ರಾಸಿಟಿ ಕೇಸ್…

ಪಿರಿಯಾಪಟ್ಟಣ,ನ7,Tv10 ಕನ್ನಡ
21 ನೇ ಶತಮಾನದ ರಾಕೆಟ್ ಯುಗದಲ್ಲಿ ಇದ್ದರೂ ಅಸ್ಪೃಶ್ಯತೆ ಆಚರಣೆ ಪಿಡುಗು ನಿಂತಿಲ್ಲ.ದಲಿತರ ಮೇಲೆ ನಿರಂತರ ದಬ್ಬಾಳಿಕೆ ಮುಂದುವರೆಯುತ್ತಲೇ ಇದೆ.ದೇವಸ್ಥಾನದಲ್ಲಿ ಪೂಜೆ ಮಾಡಲು ತೆರಳಿದ ದಲಿತ ವ್ಯಕ್ತಿಯನ್ನ ಪ್ರವೇಶಿಸದಂತೆ ತಡೆದು ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ ಪ್ರಕರಣವೊಂದು ಪಿರಿಯಾಪಟ್ಟಣ ತಾಲೂಕಿನ ಬೆಕ್ಕರೆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಸಂಪ್ರದಾಯದಂತೆ ಪೂಜೆ ನೆರವೇರಿಸಲು ತೆರಳಿದ ವ್ಯಕ್ತಿಯನ್ನ ಎಳೆದಾಡಿ ಅವ್ಯಾಚ ಶಬ್ದಗಳಿಂದ ನಿಂದಸಿ ದೇವಸ್ಥಾನಕ್ಕೆ ಪ್ರವೇಶಿಸಂತೆ ನಿರ್ಬಂಧಿಸಿದ್ದಾರೆ.ಪ್ರಕರಣಕ್ಕೆ ಸಂಭಂಧಿಸಿದಂತೆ ನಿವೃತ್ತ ಶಿಕ್ಷಕ ಸೇರಿದಂತೆ 8 ಮಂದಿ ವಿರುದ್ದ FIR ದಾಖಲಾಗಿದೆ.

ಬೆಕ್ಕರೆ ಗ್ರಾಮದ ಮಹದೇವ ಎಂಬುವರು ಶ್ರೀ ಬಾಲಚಂದ್ರ ಬಸವೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 25 ರಂದು ಪೂಜೆ ಸಲ್ಲಿಸಲು ತೆರಳಿದಾಗ ನಿವೃತ್ತ ಶಿಕ್ಷಕರಾದ ಬಸವೇಗೌಡ ಎಂಬುವರು ಪ್ರವೇಶವನ್ನ ನಿರಾಕರಿಸಿದ್ದಾರೆ.ಇದನ್ನ ಪ್ರಶ್ನಿಸಿದಾಗ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ.ಬಸವೇಗೌಡ ರವರಿಗೆ ಮರಳೀಧರ್,ಪ್ರಸನ್ನ,ರವಿಕುಮಾರ್,ಚಂದ್ರಶೇಖರ್,ಬಸವರಾಜ್,ಮಹದೇವ ಹಾಗೂ ನವೀನ ಸಾಥ್ ನೀಡಿದ್ದಾರೆ.ದಲಿತ ಜನಾಂಗದ ಮಹದೇವ ರವರ ಮೇಲೆ ದೌರ್ಜನ್ಯ ನಡೆಸಿದ ನಿವೃತ್ತ ಶಿಕ್ಷಕ ಸೇರಿದಂತೆ 8 ಮಂದಿ ವಿರುದ್ದ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ…

Spread the love

Related post

ನಂಜನಗೂಡು ಶಿಕ್ಷಕ ಸೇರಿದಂತೆ BEO ಲೋಕಾ ಬಲೆಗೆ…ಗೌರವ ಧನ ಬಿಡುಗಡೆ ಮಾಡಲು ಲಂಚ…

ನಂಜನಗೂಡು ಶಿಕ್ಷಕ ಸೇರಿದಂತೆ BEO ಲೋಕಾ ಬಲೆಗೆ…ಗೌರವ ಧನ ಬಿಡುಗಡೆ ಮಾಡಲು…

ನಂಜನಗೂಡು,ಮಾ28,Tv10 ಕನ್ನಡ ಗೌರವ ಧನ ಬಿಡುಗಡೆ ಮಾಡಲು ವ್ಯಕ್ತಿಯೊಬ್ಬರಿಂದ 5 ಸಾವಿರ ಲಂಚ ಪಡೆಯುತ್ತಿದ್ದ ಶಿಕ್ಷಕ ಹಾಗೂ ಬಿಇಓ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ನಂಜನಗೂಡು ಬಿಇಓ ಶಿವಲಿಂಗಯ್ಯ ಹಾಗೂ ಶಿಕ್ಷಕ…
Tv10 ಕನ್ನಡ ವಾಹಿನಿ ವರದಿ ಫಲಶೃತಿ…ಅಂಬೇಡ್ಕರ್ ವಸತಿಶಾಲೆ ಪ್ರಾಂಶುಪಾಲ ಅಮಾನತು…ಇಲಾಖಾ ವಿಚಾರಣೆಗೆ ಆದೇಶ…

Tv10 ಕನ್ನಡ ವಾಹಿನಿ ವರದಿ ಫಲಶೃತಿ…ಅಂಬೇಡ್ಕರ್ ವಸತಿಶಾಲೆ ಪ್ರಾಂಶುಪಾಲ ಅಮಾನತು…ಇಲಾಖಾ ವಿಚಾರಣೆಗೆ…

ನಂಜನಗೂಡು,ಮಾ28,Tv10 ಕನ್ನಡ ನಂಜನಗೂಡು ತಾಲೂಕು ಹದಿನಾರು ಗ್ರಾಮದ ಅಂಬೇಂಡ್ಕರ್ ವಸತಿ ಶಾಲೆ ಪ್ರಾಂಶುಪಾಲ ಪ್ರಸನ್ನ ಕುಮಾರ್ ಗೆ ಸರ್ಕಾರ ಗೇಟ್ ಪಾಸ್ ನೀಡಿದ ಕರ್ತವ್ಯ ಲೋಪ ಹಿನ್ನಲೆ ಸೇವೆಯಿಂದ…
ಲಷ್ಕರ್ ಠಾಣೆ ಪೊಲೀಸರ ಮಿಂಚಿನ ಕಾರ್ಯಾಚರಣೆ…ಆಟೋದಲ್ಲಿ ಮರೆತುಹೋಗಿದ್ದ ಚಿನ್ನಾಭರಣ ಬ್ಯಾಗ್ ಮಾಲೀಕರ ವಶಕ್ಕೆ…

ಲಷ್ಕರ್ ಠಾಣೆ ಪೊಲೀಸರ ಮಿಂಚಿನ ಕಾರ್ಯಾಚರಣೆ…ಆಟೋದಲ್ಲಿ ಮರೆತುಹೋಗಿದ್ದ ಚಿನ್ನಾಭರಣ ಬ್ಯಾಗ್ ಮಾಲೀಕರ…

ಮೈಸೂರು,ಮಾ28,Tv10 ಕನ್ನಡ ಆಟೋದಲ್ಲಿ ಮರೆತುಹೋಗಿದ್ದ ಚಿನ್ನಾಭರಣವಿದ್ದ ಬ್ಯಾಗ್ ಮಾಲೀಕರ ವಶಕ್ಕೆ ತಲುಪಿಸುವಲ್ಲಿ ಲಷ್ಕರ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.ಇನ್ಸ್ಪೆಕ್ಟರ್ ಮಹಮದ್ ಸಲೀಂ ಅಬ್ಬಾಸ್ ರವರ ಸಮಯೋಚಿತ ಕಾರ್ಯಾಚರಣೆಯಿಂದ ಚಿನ್ನದ ಬ್ಯಾಗ್…

Leave a Reply

Your email address will not be published. Required fields are marked *