
ಮಹಿಳೆಯರ ಹಬ್ಬದ ದಿನದಂದೇ ಗೃಹಿಣಿ ಅನುಮಾನಾಸ್ಪದ ಸಾವು…ಪತಿ,ಅತ್ತೆ,ನಾದಿನಿ ಮೇಲೆ ಕೊಲೆ ಆರೋಪ…
- Crime
- January 15, 2023
- No Comment
- 142
ಮಹಿಳೆಯರ ಹಬ್ಬದ ದಿನದಂದೇ ಗೃಹಿಣಿ ಅನುಮಾನಾಸ್ಪದ ಸಾವು…ಪತಿ,ಅತ್ತೆ,ನಾದಿನಿ ಮೇಲೆ ಕೊಲೆ ಆರೋಪ…
ತಲಕಾಡು,ಜ15,Tv10 ಕನ್ನಡ
ಮಹಿಳೆಯರ ಹಬ್ಬವೆಂದೇ ಪರಿಗಣಿಸಲಾದ ಸಂಕ್ರಾಂತಿ ದಿನದಂದು ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತಲಕಾಡಿನ ಮೇದಿನಿ ಗ್ರಾಮದಲ್ಲಿ ನಡೆದಿದೆ.ಪತಿ,ಅತ್ತೆ ಹಾಗೂ ನಾದಿನಿ ಹೊಡೆದು ಕೊಲೆ ಮಾಡಿದ್ದಾರೆಂದು ಮೃತಳ ತಂದೆ ಆರೋಪಿಸಿ ದೂರು ನೀಡಿದ್ದಾರೆ.ಚಾಮರಾಜನಗರ ಜಿಲ್ಲೆಯ ಹನ್ನೂರಿನ ಕಾವ್ಯ(32) ಮೃತ ದುರ್ದೈವಿ.ಮೇದಿನ ಗ್ರಾಮದ ಶಂಕರ್ ಎಂಬಾತನನ್ನ 16 ವರ್ಷಗಳ ಹಿಂದೆ ವಿವಾಹವಾಗಿದ್ದ ಕಾವ್ಯ ಮೂರು ಮಕ್ಕಳ ತಾಯಿಯಾಗಿದ್ದರು.ಕಾರಣವಿಲ್ಲದೆ ಕಾವ್ಯಾಳಿಗೆ ಪತಿ,ಅತ್ತೆ,ನಾದಿನಿ ಕಿರುಕುಳ ಕೊಡುತ್ತಿದ್ದರು.ಹಬ್ಬದ ದಿನದಂದು ಕಾವ್ಯ ಮೃತಪಟ್ಟಿದ್ದಾಳೆ.ಕಾವ್ಯಳನ್ನ ಪತಿ ಶಂಕರ್,ಅತ್ತೆ,ನಾದಿನಿ ಸೇರಿ ಕೊಲೆ ಮಾಡಿದ್ದಾರೆಂದು ಕಾವ್ಯಾ ತಂದೆ ವೀರಣ್ಣ ಆರೋಪಿಸಿ ದೂರು ನೀಡಿದ್ದಾರೆ.ಆರೋಪಿಗಳು ನಾಪತ್ತೆಯಾಗಿದ್ದಾರೆ.ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…