TV10 Kannada Exclusive

ಯದುವೀರ್ ಗೆ ತುಲಾಭಾರ…ಗೋವುಗಳಿಗೆ ಪೂಜೆ ಸಲ್ಲಿಸಿ ಹುಟ್ಟುಹಬ್ಬ ಆಚರಣೆ…

ಮೈಸೂರು,ಮಾ24,Tv10 ಕನ್ನಡ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಗೆ ಹುಟ್ಟುಹಬ್ಬವನ್ನ ಇಂದು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಪಿಂಜರ್ ಫೋಲ್‌ನಲ್ಲಿ ವಿಶೇಷವಾಗಿ ಆಚರಿಸಲಾಯಿತು. ಗೋವುಗಳಿಗೆ ಪೂಜೆ ಸಲ್ಲಿಸಿ ಹಾಗೂ ತುಲಾಭಾರ ಮಾಡುವ ಮೂಲಕ ಆಚರಿಸಲಾಯಿತು.ಶಾಸಕ ಶ್ರೀವತ್ಸ ಸೇರಿದಂತೆ ಹಲವು ಬಿಜೆಪಿ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…
Read More

ಮದುವೆ ಆಗುವಂತೆ ಒತ್ತಾಯಿಸಿ ಪ್ರೇಯಸಿಯನ್ನ ಕೊಂದ ಆರೋಪ ಸಾಬೀತು…ಹಂತಕನಿಗೆ ಜೀವಾವಧಿ ಶಿಕ್ಷೆ…

ಮೈಸೂರು,ಮಾ22,Tv10 ಕನ್ನಡ ಮದುವೆ ಆಗುವಂತೆ ಒತ್ತಾಯಿಸುತ್ತಿದ್ದ ಪ್ರೇಯಸಿಯ ಉಸಿರುಗಟ್ಟಿಸಿ ಕೊಲೆಗೈದ ಆರೋಪ ಸಾಬೀತಾದ ಹಿನ್ನಲೆ ಹಂತಕನಿಗೆ ಮೈಸೂರು ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.ನಂಜನಗೂಡು ತಾಲೂಕು ಹುಲ್ಲಹಳ್ಳಿ ಹೋಬಳಿಯ ಹಾಡ್ಯಾ ಗ್ರಾಮದ ನಾಗೇಶ್ ಶಿಕ್ಷೆಗೆ ಒಳಗಾದ ಹಂತಕ.ಮೈಸೂರಿನ 3 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಭಾಗ್ಯ ರವರು ತೀರ್ಪು ನೀಡಿದ್ದಾರೆ.2019 ರಲ್ಲಿ ಲಕ್ಷ್ಮಿ ಎಂಬಾಕೆಯನ್ನ ಕೊಲೆ ಮಾಡಿದ ಆರೋಪ
Read More

ಪ್ಲಾಸ್ಟಿಕ್ ಚೀಲದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ…ಕಪಿಲಾ ನದಿ ದಂಡೆಯಲ್ಲಿ ಗೋಚರ…

ನಂಜನಗೂಡು,ಮಾ22,Tv10 ಕನ್ನಡ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಶವ ಪತ್ತೆಯಾಗಿದೆ.ನಂಜನಗೂಡಿನ ಕಪಿಲಾ ನದಿಯಲ್ಲಿ ಪತ್ತೆಯಾಗಿದೆ.ಸುಮಾರು 40 ರಿಂದ 45 ವರ್ಷ ವಯಸ್ಸಿನ ಅಪರಿಚಿತ ಪುರುಷನನ್ನ ಬೇರೆಡೆ ಕೊಲೆ ಮಾಡಿ ನದಿಯಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಕೈಯಲ್ಲಿ ರೇಖಾ ಎನ್ನುವ ಹಚ್ಚೆ ಹಾಕಲಾಗಿದೆ. ಕಳೆದ ಎರಡು ದಿನಗಳ ಹಿಂದೆ ದುಷ್ಕರ್ಮಿಗಳು ಅಪರಿಚಿತ ವ್ಯಕ್ತಿಯನ್ನು ಕೊಲೆಗೈದು, ಮೊದಲು ಬೆಡ್ ಶೀಟ್ ನಲ್ಲಿ ಸುತ್ತಿ ನಂತರ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಕಪಿಲಾ ನದಿಯ
Read More

ತೆರೆದ ಸಂಪಿಗೆ ಬಿದ್ದು ಮಗು ಸಾವು…ಅಂಗನವಾಡಿ ಕೇಂದ್ರದಲ್ಲಿ ಘಟನೆ…

ಎಚ್.ಡಿ.ಕೋಟೆ,ಮಾ22,Tv10 ಕನ್ನಡ ಎಚ್.ಡಿ.ಕೋಟೆ ತಾಲೋಕಿನ ಅಂತರಸಂತೆ ಸಮೀಪದ ಬಂಗ್ಲಿಹುಂಡಿ : ಅಂಗನವಾಡಿಯಲ್ಲಿ ಬಾಯ್ತೆರೆದಿದ್ದ ನೀರಿನ ಸಂಪಿಗೆ ಬಿದ್ದು ಮಗುವೊಂದು ಸಾವನ್ನಪ್ಪಿರುವ ಮನಕಲಕುವ ಘಟನೆ ನಡೆದಿದೆ. ಸ್ವಾಮಿ ಮತ್ತು ಅಂಜು ದಂಪತಿಗಳ ಪುತ್ರಿ ಸನ್ನಿಧಿ (3) ಮೃತದುರ್ದೈವಿ.ಸಂಜೆ ಎಂದಿನಂತೆ ಆಟವಾಡುತ್ತಿದ್ದ ವೇಳೆ ಅಂಗನವಾಡಿ ಕೇಂದ್ರದ ಸಂಪಿನ ಬಳಿ ಹೋಗಿದೆ. ಸಂಪಿನ ಬಾಗಿಲು ತೆರೆದಿದ್ದ ಪರಿಣಾಮ ಆಯತಪ್ಪಿ ಮಗು ಸಂಪಿನ ಒಳಗೆ ಬಿದ್ದಿದೆ.ಕತ್ತಲಾಗುತ್ತಿದ್ದರು ಮಗು ಮನೆಗೆ ಬಾರದಿದ್ದನ್ನು ಕಂಡು ಗಾಬರಿಗೊಂಡ ಪೋಷಕರು ಹುಡುಕಾಟ
Read More

ಚರಂಡಿ ವಿಚಾರಕ್ಕೆ ಕಿರಿಕ್…ಮಹಿಳೆ ಮನೆಗೆ ನುಗ್ಗಿ ಹಲ್ಲೆ…ವಿಡಿಯೋ ವೈರಲ್…

ನಂಜನಗೂಡು,ಮಾ21,Tv10 ಕನ್ನಡ ಚರಂಡಿ ಸ್ವಚ್ಛಗೊಳಿಸುವ ವಿಚಾರದಲ್ಲಿ ಮಹಿಳೆಯೊಬ್ಬರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ನಂಜನಗೂಡು ತಾಲೂಕು ಚೆನ್ನಪಟ್ಟಣ ಗ್ರಾಮದಲ್ಲಿ ನಡೆದಿದೆ.ಹುರಾ ಗ್ರಾಮಪಂಚಾಯ್ತಿ ಅಧ್ಯಕ್ಷೆ ತಾಯಮ್ಮ,ಈಕೆಯ ಗಂಡ ಸೋಮಣ್ಣ ಹಾಗೂ ಮಗ ಶಿವರಾಜು ಎಂಬುವರು ಪಕ್ಕದ ಮನೆಯಲ್ಲಿ ವಾಸವಿದ್ದ ಮಮತಾ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದೆ.ಸಧ್ಯ ಹಲ್ಲೆ ನಡೆಸಲು ಮನೆ ನುಗ್ಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ…
Read More

ಸುಳ್ಳುಜಾತಿ ಪ್ರಮಾಣ ಪತ್ರ ಆರೋಪ ಸಾಬೀತು…ಪೊಲೀಸ್ ಪೇದೆಗೆ 2 ವರ್ಷ ಜೈಲು..10 ಸಾವಿರ ದಂಡ ವಿಧಿಸಿ ತೀರ್ಪು…

ಮೈಸೂರು,ಮಾ21,Tv10 ಕನ್ನಡ ಸುಳ್ಳುಜಾತಿ ಪ್ರಮಾಣ ಪತ್ರ ನೀಡಿ ಪೇದೆ ಕೆಲಸ ಗಿಟ್ಟಿಸಿಕೊಂಡಿದ್ದ ಪೊಲೀಸಪ್ಪನಿಗೆ ಬೆಂಗಳೂರು ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.ರಮೇಶ್ ಎಂಬಾತನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.ಪರಿಷಿಷ್ಠ ಜಾತಿಗೆ ಸೇರದಿದ್ದರೂ ತಾನು ಪರಿಶಿಷ್ಠ ಜಾತಿಯವನೆಂದು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಗಿಟ್ಟಿಸಿಕೊಂಡಿದ್ದ ರಮೇಶ್ ಮೇಲೆ ಬೆಂಗಳೂರು 70 ನೇ ಅಪರ ಸಿಟಿ ಸಿವಿಲ್ ಹಾಗೂ
Read More

ಸಾಲ ವಸೂಲಿಗೆ ಕಿರುಕುಳ…ಪತ್ನಿಯನ್ನ ಅಡಮಾನ ಇಡುವಂತೆ ಧಂಕಿ…ಬೈಕ್ ಸಮೇತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ…

ಕೆ.ಆರ್.ನಗರ,ಮಾ21,Tv10 ಕನ್ನಡ ಸಾಲ ವಸೂಲಿಗಾಗಿ ಪತ್ನಿಯ ಬಗ್ಗೆ ಹಗುರವಾಗಿ ನಿಂದಿಸಿದ ಹಿನ್ನಲೆ ಮನನೊಂದ ವ್ಯಕ್ತಿ ಬೈಕ್ ಸಮೇತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕೆ.ಆರ್.ನಗರ ತಾಲೂಕು ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯ ಹರವೆ ಗ್ರಾಮದಲ್ಲಿ ನಡೆದಿದೆ.ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹರವೆ ಗ್ರಾಮದ ಹರೀಶ್ (40) ಮೃತ ದುರ್ದೈವಿ.ಹುಣಸೂರಿನ ರವಿ@ವಾಲೆ ರವಿ ಹಾಗೂ ಆತನ ತಮ್ಮ ಚಿನ್ನಸ್ವಾಮಿ ವಿರುದ್ದ ಕೊಲೆ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಹುಣಸೂರು
Read More

ಕಾಗಿನೆಲೆ ಶಿವಾನಂದಪುರಿ ಶ್ರೀಗಳ ಆಶೀರ್ವಾದ ಪಡೆದ ಯದುವೀರ್,ಬಾಲರಾಜ್…ಮೈಸೂರು,ಮಾ20,Tv10 ಕನ್ನಡ

ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜ್ ಅವರು ಕಾಗಿನೆಲೆ ಕನಕ ಗುರುಪೀಠದ ಮೈಸೂರು ಶಾಖಾ ಅಧ್ಯಕ್ಷರಾದ ಶ್ರೀ ಶಿವಾನಂದ ಪುರಿ ಸ್ವಾಮೀಜಿಗಳ ಆಶೀರ್ವಾದ ಪಡೆದರು.ಸಿದ್ದರ್ಥನಗರದ ಶಾಖಾ ಮಠಕ್ಕೆ ಭೇಟಿ ನೀಡಿದ ಇಬ್ಬರು ಅಭ್ಯರ್ಥಿಗಳು ಶ್ರೀಗಳಿಗೆ ಫಲ ತಾಂಬೂಲ ನೀಡಿ ಆಶೀರ್ವಾದ ಪಡೆದರು.ಇದೆ ವೇಳೆ ಮಾತನಾಡಿದ ಶ್ರೀಗಳು ಅಭ್ಯರ್ಥಿಗಳು ಮಠಕ್ಕೆ ಬಂದು
Read More

ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ದಂಧೆ ಮೇಲೆ ವಿಜಯನಗರ ಠಾಣೆ ಪೊಲೀಸರ ದಾಳಿ…ರಾಜಾಸ್ಥಾನ್ ಮೂಲದ ನಾಲ್ವರ ಬಂಧನ…95 ಗ್ಯಾಸ್ ಸಿಲಿಂಡರ್ ವಶ…

ಮೈಸೂರು,ಮಾ20,Tv10 ಕನ್ನಡ ಗೃಹಬಳಕೆ ಸಿಲಿಂಡರ್ ಗಳಿಂದ ವಾಣಿಜ್ಯ ಸಿಲಿಂಡರ್ ಗಳಿಗೆ ಅಕ್ರಮವಾಗಿ ರೀಫಿಲ್ಲಿಂಗ್ ಮಾಡುತ್ತಿದ್ದ ದಂಧೆ ಮೇಲೆ ವಿಜಯನಗರ ಠಾಣೆ ಪೊಲೀಸರು ದಾಳಿ ನಡೆಸಿ ರಾಜಾಸ್ಥಾನ್ ಮೂಲದ ನಾಲ್ವರನ್ನ ಬಂಧಿಸಿದ್ದಾರೆ.ಬಂಧಿತರಿಂದ ವಿವಿದ ಗ್ಯಾಸ್ ಕಂಪನಿಯ ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ 95 ಸಿಲಿಂಡರ್ ಗಳನ್ನ ವಶಪಡಿಸಿಕೊಂಡಿದ್ದಾರೆ.ಅಲ್ಲದೆ ಗ್ಯಾಸ್ ರೀಫಿಲ್ಲಿಂಗ್ ಗಾಗಿ ಬಳಸುತ್ತಿದ್ದ 12 ರಾಡ್ ಗಳು ಮತ್ತು ಎರಡು ವಾಹನಗಳನ್ನೂ ಸಹ ವಶಕ್ಕೆ ಪಡೆದಿದ್ದಾರೆ.ರಾಜಾಸ್ಥಾನ್ ನ ಸುನಿಲ್ ಕುಮಾರ್,ದಿನೇಶ್,ಕೈಲಾಸ್,ಸುಭಾಷ್ ಭಿಷ್ಣೋಯಿ
Read More

ಮನೆ ಹಿಂಬಾಗಿಲು ಮೀಟಿ ನಗದು ಚಿನ್ನಾಭರಣ ಕಳುವು…ಹಾಡುಹಗಲೇ ಒಂಟಿ ಮನೆಯಲ್ಲಿ ಕೃತ್ಯ…

ಹುಣಸೂರು,ಮಾ20,Tv10 ಕನ್ನಡ ಮನೆ ಹಿಂಬಾಗಿಲು ಮೀಟಿದ ಖದೀಮರು 1.09 ಲಕ್ಷ ನಗದು ಹಾಗೂ 13 ಗ್ರಾಂ ಚಿನ್ನ ಮತ್ತು ಬೆಳ್ಳಿ ಕಾಲು ಚೈನು ದೋಚಿ ಪರಾರಿಯಾಗಿದ್ದಾರೆ. ಹುಣಸೂರಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ದಲ್ಲಾಳ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.ಹಾಡುಹಗಲೇ ಒಂಟಿ ಮನೆಯಲ್ಲಿ ಖದೀಮರು ಕೈಚಳಕ ತೋರಿಸಿದ್ದಾರೆ.ತಿಮ್ಮೇಗೌಡ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.ಇಂದು ಬೆಳಿಗ್ಗೆ ಸುಮಾರು 11 ಗಂಟೆ ವೇಳೆಯಲ್ಲಿ ಮನೆಯ ಮುಂಬಾಗಿಲು ಬೀಗ ಹಾಕಿದ ತಿಮ್ಮೇಗೌಡರು ದೇವಸ್ಥಾನಕ್ಕೆ ತೆರಳಿದ್ದಾರೆ.ಮನೆಗೆ ಹಿಂದಿರುಗುವಷ್ಟರಲ್ಲಿ
Read More