ಗಣಪತಿ ಸಚ್ಚಿದಾನಂದ ಸ್ವಾಮೀಜಿಗೆ ಪ್ರಧಾನಿ ಮೋಧಿ ವಿಶೇಷ ಸಂದೇಶ…ಸಹಸ್ರ ಚಂದ್ರ ದರ್ಶನಕ್ಕೆ ಶುಭಹಾರೈಕೆ…

ಗಣಪತಿ ಸಚ್ಚಿದಾನಂದ ಸ್ವಾಮೀಜಿಗೆ ಪ್ರಧಾನಿ ಮೋಧಿ ವಿಶೇಷ ಸಂದೇಶ…ಸಹಸ್ರ ಚಂದ್ರ ದರ್ಶನಕ್ಕೆ ಶುಭಹಾರೈಕೆ…

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗೆ ಪ್ರಧಾನಿ ಮೋಧಿ ವಿಶೇಷ ಸಂದೇಶ…ಸಹಸ್ರ ಚಂದ್ರ ದರ್ಶನಕ್ಕೆ ಶುಭಹಾರೈಕೆ…

ಮೈಸೂರು,ಫೆ7,Tv10 ಕನ್ನಡ
ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80 ನೇ ವರ್ಷದ ಅಂಗವಾಗಿ ನಡೆದ ಸಹಸ್ರ ಚಂದ್ರ ದರ್ಶನ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋಧಿ ರವರು ವಿಶೇಷ ಸಂದೇಶ ನೀಡಿದ್ದಾರೆ. ಸ್ವಾಮೀಜಿಯವರಿಗೆ ಮೋದೀಜಿ ರವರು ಸಂದೇಶ ಪತ್ರ ರವಾನಿಸಿದ್ದಾರೆ. ಸ್ವಾಮೀಜಿಯವರ 80 ನೇ ವರ್ಷವನ್ನು ಆಚರಿಸುತ್ತಿರುವ ಆಚರಣೆಗಳ ಬಗ್ಗೆ ತಿಳಿದುಕೊಳ್ಳುವುದು ನನಗೆ ಅತ್ಯಂತ ಸಂತೋಷದಾಯಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ.ಈ ಸಂತೋಷದ ಸಂದರ್ಭದಲ್ಲಿ ಸ್ವಾಮೀಜಿ ಅವರಿಗೆ ಶುಭಾಶಯಗಳು ಮತ್ತು ಹೃತ್ಪೂರ್ವಕ ಅಭಿನಂದನೆಗಳು ಎಂದು ಮೋದಿಯವರು ಸಂದೇಶ ಕಳುಹಿಸಿದ್ದಾರೆ.
ಅವಧೂತ ದತ್ತ ಪೀಠವು ಸ್ವಾಮಿಯವರಿಗೆ ಸಹಸ್ರ ಚಂದ್ರ ದರ್ಶನ ಮತ್ತು ಅತಿರುದ್ರ ಮಹಾ ಯಾಗದಂತಹ ಪವಿತ್ರ ಆಚರಣೆಗಳನ್ನು ನಡೆಸುವುದರ ಜೊತೆಗೆ ರಾಷ್ಟ್ರದ ಶಾಂತಿ , ಪ್ರಗತಿ ಮತ್ತು ಸಮೃದ್ಧಿಯನ್ನು ಬಯಸುವ ಉಪಕ್ರಮವು ಶ್ಲಾಘನೀಯವಾಗಿದೆ ಎಂದು ತಿಳಿಸಿದ್ದಾರೆ.
ವಿಶೇಷವಾಗಿ “ಸಹಸ್ರ ಚಂದ್ರ ದರ್ಶನ” ಅಂದರೆ ಒಬ್ಬರು ಜೀವನದಲ್ಲಿ ಒಂದು ಸಾವಿರ ಹುಣ್ಣಿಮೆಗಳನ್ನು ನೋಡುವುದು.ಇದು ಸಮಾಜವನ್ನು ಮಾರ್ಗದರ್ಶಿಸಲು ದಶಕಗಳಿಂದ ಸಂಗ್ರಹಿಸಲ್ಪಟ್ಟ ಅನುಭವದ ಗುರುತು ಕೂಡ ಆಗಿದೆ. ನಮ್ಮ ಋಷಿ ಮುನಿಗಳು ಮತ್ತು ಸಂತರು ನೀಡಿದ ಮಾರ್ಗದರ್ಶನವು ಮನುಕುಲಕ್ಕೆ ಸ್ಫೂರ್ತಿ ನೀಡುತ್ತಲೇ ಇದೆ.
ಅಂತೆಯೇ, ಸಾರ್ವತ್ರಿಕ ಭ್ರಾತೃತ್ವದ ಆದರ್ಶವನ್ನು ಸುತ್ತುವರೆದಿರುವ ತಮ್ಮ ಬೋಧನೆಗಳ ಮೂಲಕ, ಸ್ವಾಮೀಜಿ ಪ್ರತಿ ಜೀವಿಯಲ್ಲಿ ದೈವತ್ವವನ್ನು ಹುಡುಕುವಂತೆ ಪ್ರೇರೇಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾನವೀಯತೆಯನ್ನು ಅಭ್ಯಾಸ ಮಾಡುವ ಆದರ್ಶವು ಸ್ವಾಮೀಜಿ ಅವರ ಬೋಧನೆಗಳ ತಿರುಳಾಗಿದೆ.ಸ್ವಾಮೀಜೀ ಮತ್ತು ಪೀಠದವರು ತೊಡಗಿಸಿಕೊಂಡಿರುವ ವಿವಿಧ ಸಾಮಾಜಿಕ ಕಾರ್ಯಗಳು, ಪಕ್ಷಿಗಳನ್ನು ನೋಡಿಕೊಳ್ಳುವ ಶುಕ ವನದಿಂದ ಹಿಡಿದು ಜನರ ಸೇವೆಗಳು ಸಮಾಜದ ಮೇಲೆ ಪ್ರಭಾವ ಬೀರುತ್ತವೆ ಮತ್ತು ಸೇವೆಯ ಸಂದೇಶವನ್ನು ಹರಡುತ್ತಲೇ ಇರುತ್ತವೆ.
ಶ್ರೀ ಗಣಪತಿ ಸಚ್ಚಿಂದಾನಂದ ಸ್ವಾಮೀಜಿಯವರ 80 ನೇ ವರ್ಷದ ಸಂಭ್ರಮಾಚರಣೆಯ ಶುಭಾಶಯಗಳು ಎಂದು ನರೇಂದ್ರ ಮೋದಿಯವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.ಜನರಿಗೆ ಮಾರ್ಗದರ್ಶನ ನೀಡಲು, ಸಮಾಜಕ್ಕೆ ಸೇವೆ ಸಲ್ಲಿಸಲು ಮತ್ತು ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಲು ಸ್ವಾಮೀಜಿ ಅವರಿಗೆ ದೀರ್ಘಾಯುಷ್ಯವನ್ನು ಭಗವಂತ ನೀಡಲಿ ಅವರು ಪ್ರಾರ್ಥಿಸಿದ್ದಾರೆ…

Spread the love

Related post

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಮಂಡ್ಯ,ಜೂ30,Tv10 ಕನ್ನಡ ಕೆ.ಆರ್.ಎಸ್.ಡ್ಯಾಂ ಒಡಲನ್ನು ತುಂಬಿದ ಕಾವೇರಿ ಮಾತೆಗೆ ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ.ಈ ಹಿನ್ನೆಲೆ ಕೆ ಆರ್.ಎಸ್.ನವವಧುವಿನಂತೆ ಶೃಂಗಾರಗೊಂಡಿದೆ.ಕನ್ನಡ ಬಾವುಟದಿಂದ ಕಂಗೊಳಿಸುತ್ತಿದೆ.ಹಸಿರು ತೋರಣ, ಹೂಗಳ ಮೂಲಕ…
ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ ಪುರೋಹಿತ ಹಲ್ಲೆ…

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ…

ಮೈಸೂರು,ಜೂ29,Tv10 ಕನ್ನಡ ಟ್ರಸ್ಟ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ ಪುರೋಹಿತನೊಬ್ಬ ಮತ್ತೊಬ್ಬ ಪುರೋಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಚಾಮುಂಡಿಪುರಂ ಬಳಿ ನಡೆದಿದೆ.ಗೀತಾಮೃತ…
ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…

Leave a Reply

Your email address will not be published. Required fields are marked *