
ರೋಹಿಣಿ ಸಿಂಧೂರಿ ಅಭಿಮಾನಿಗಳಿಂದ ಪ್ರತಿಭಟನೆ…ಮೈಸೂರಗ್ಗು,ದಿಂಬು,ಲೋಟ,ತಟ್ಟೆ ಸಹಿತ ಬೀದಿಗಿಳಿದು ಆಕ್ರೋಷ…
- TV10 Kannada Exclusive
- February 27, 2023
- No Comment
- 122
ಮೈಸೂರು,ಫೆ27,Tv10 ಕನ್ನಡ
ರೋಹಿಣಿ ಸಿಂಧೂರಿ ರೂಪಾ ನಡುವಿನ ಜಟಾಪಟಿ ಪ್ರತಿಭಟನೆ ಮಾರ್ಗ ಹಿಡಿದಿದೆ.ರೋಹಿಣಿ ಸಿಂಧೂರಿ ಅಭಿಮಾನಿಗಳು ಬೀದಿಗಿಳಿದು ರೂಪಾ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದಾರೆ. ರಗ್ಗು, ದಿಂಬು, ಲೋಟ, ತಟ್ಟೆ ಸಹಿತ ಬೀದಿಗಿಳಿದು ವಿನೂತನವಾಗಿ ಪ್ರತಿಭಟಿಸಿದ್ದಾರೆ.
ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಅನುಮತಿ ಪಡೆಯದೇ ಪ್ರತಿಭಟನೆಗಿಳಿದ ರೋಹಿಣಿ ಸಿಂಧೂರಿ ಅಭಿಮಾನಿಗಳನ್ನ ಪೊಲೀಸರು ಜಾಗ ಖಾಲಿ ಮಾಡಿಸಿದ್ದಾರೆ.
ರೋಹಿಣಿ ಪರ ಜೈಕಾರ ಕೂಗಿದ ಅಭಿಮಾನಿಗಳು
ಐಪಿಎಸ್ ಅಧಿಕಾರಿ ರೂಪ ವಿರುದ್ಧ ದಿಕ್ಕಾರ ಘೋಷಣೆ ಕೂಗಿದ್ದಾರೆ.
ರೋಹಿಣಿಯವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.ಲೋಟ, ದಿಂಬು, ಚಂಬು ಹೊತ್ತೊಯ್ದಿದ್ದಾರೆ ಎಂದು ಆರೋಪ ಮಾಡಿದ್ದಾರೆ.ಅದು ನಿಜವಾಗಿದ್ದರೆ ಆ ಎಲ್ಲಾ ಪದಾರ್ಥಗಳನ್ನ ನಾವೇ ಕೊಡುತ್ತೇವೆ ಎಂದು ಎಟಿಐ ಮುಂದೆ ವಸ್ತುಗಳನ್ನ ತಂದಿಟ್ಟ
ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.
ಅನುಮತಿ ಇಲ್ಲದ ಕಾರಣ ಪ್ರತಿಭಟನೆಗೆ ತಂದಿದ್ದ ತಟ್ಟೆ, ಲೋಟಗಳ ಜೊತೆಗೆ ಅಭಿಮಾನಿಗಳನ್ನ ವಾಪಸ್ಸು ಕಳುಹಿಸಿದ್ದಾರೆ.
ಅನುಮತಿ ಪತ್ರ ತೋರಿಸುವಂತೆ
ಪೊಲೀಸರ ಪ್ರಶ್ನೆಗೆ ತಬ್ಬಿಬ್ಬಾಗಿ ಪ್ರತಿಭಟನಾಕಾರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ…