
272 ಮನೆಗಳಿಗೆ ಹಕ್ಕುಪತ್ರ ವಿತರಣೆ…
- MysorePolitics
- March 13, 2023
- No Comment
- 172

272 ಮನೆಗಳಿಗೆ ಹಕ್ಕುಪತ್ರ ವಿತರಣೆ…

ಮೈಸೂರು,ಮಾ13,Tv10 ಕನ್ನಡ
ಚಾಮರಾಜ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂಖ್ಯೆ 18 ರ ಮಂಜುನಾಥಪುರ ಪ್ರದೇಶದಲ್ಲಿ ಕಳೆದ 30-40 ವರ್ಷಗಳಿಂದ ವಾಸವಾಗಿರುವ ಒಟ್ಟು 272 ನಿವಾಸಿಗಳಿಗೆ ಇಂದು ಹಕ್ಕುಪತ್ರ ವಿತರಿಸಲಾಯಿತು. ಮನೆಗಳಿಗೆ ಯಾವುದೇ ದಾಖಲೆ ಇಲ್ಲದೆ ಹಲವು ವರ್ಷಗಳಿಂದ ಪರಿತಪಿಸುತ್ತಿದ್ದರು. ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಸರ್ಕಾರದ ಮಟ್ಟದಲ್ಲಿ ಶಾಸಕ ಎಲ್.ನಾಗೇಂದ್ರ ಅವಿರತವಾಗಿ ಶ್ರಮಿಸಿ ಹಕ್ಕು ಪತ್ರವನ್ನು ಕೊಡಿಸುವಲ್ಲಿ ಸಪಾಲರಾಗಿದ್ದಾರೆ. ಇಂದು ಎಲ್ಲಾ ಕುಟುಂಬಗಳಿಗೆ ಶಾಸಕರು ಹಕ್ಕು ಪತ್ರವನ್ನು ವಿತರಣೆ ಮಾಡಿದರು…
ಈ ವೇಳೆ ಮಹಾನಗರ ಪಾಲಿಕೆ ಸದಸ್ಯರಾದ ಬೀ.ವಿ. ರವೀಂದ್ರ, ಚಿಕವೆಂಕಟು, EE Slum Board ಹರೀಶ್,JE ಝಾನ್ಸಿ ರಾಯ್, ಚಾಮರಾಜ ಕ್ಷೇತ್ರದ ಅಧ್ಯಕ್ಷರಾದ ಸೋಮಶೇಖರ ರಾಜು, ಆಶ್ರಯ ಸಮಿತಿ ಸದಸ್ಯ ಮಹೇಶ್, ಅನೂಜ್ ಸಾರಸ್ವತ, ಭಾ.ಜ.ಪ ಮುಖಂಡರುಗಳಾದ, ನಂಜಪ್ಪ, ಶ್ರೀನಿವಾಸ್ ಗೌಡ, ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ಹರೀಶ್, ಗೋವಿಂದ, ಗುರು, ರಮೇಶ್, ಕವಿತಾ, ನಾಗರತ್ನ, ಗಿರೀಶ್, ಮಂಜು, ರಾಮಸ್ವಾಮಿ, ಸುಬ್ರಮಣ್ಯ ಮುಂತಾದವರು ಹಾಜರಿದ್ದರು…