ನಿಗೂಢ ಕೊಲೆ ರಹಸ್ಯ ಬಯಲು…ಪ್ರಿಯಕರ ಅಂದರ್…ಅಕ್ರಮ ಸಂಭಂಧ ಹಿನ್ನಲೆ ಕೊಲೆ…ಸಾಲ ಹಿಂದಿರುಗಿಸುವಂತೆ ಒತ್ತಡ ಹೇರಿದ್ದಕ್ಕೆ ಹತ್ಯೆ…

ನಿಗೂಢ ಕೊಲೆ ರಹಸ್ಯ ಬಯಲು…ಪ್ರಿಯಕರ ಅಂದರ್…ಅಕ್ರಮ ಸಂಭಂಧ ಹಿನ್ನಲೆ ಕೊಲೆ…ಸಾಲ ಹಿಂದಿರುಗಿಸುವಂತೆ ಒತ್ತಡ ಹೇರಿದ್ದಕ್ಕೆ ಹತ್ಯೆ…

ನಂಜನಗೂಡು,ಏ18,Tv10 ಕನ್ನಡ
ಮಹಿಳೆಯ ನಿಗೂಢ ಕೊಲೆ ರಹಸ್ಯ ಭೇಧಿಸುವಲ್ಲಿ ನಂಜನಗೂಡು ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ.ಅಕ್ರಮ ಸಂಭಂದ ಇರಿಸಿಕೊಂಡಿದ್ದ ಪ್ರಿಯತಮ ಅಂದರ್ ಆಗಿದ್ದಾನೆ.ಸಾಲವಾಗಿ ಕೊಟ್ಟ ಹಣ ವಾಪಸ್ ಕೇಳಿದ ಪ್ರಿಯತಮೆಯನ್ನ ಪ್ರಿಯಕರ ಬರ್ಭರವಾಗಿ ಕೊಲೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.ಮಳವಳ್ಳಿಯ ನಿವಾಸಿ ಶ್ಯಾಂಪ್ರಸಾದ್ ಬಂಧಿತ ಆರೋಪಿ.ಪ್ರಿಯಕರನ ಕೈಲಿ ಹತ್ಯೆಗೊಳಗಾದವಳು ಕನಕಪುರದ ನಿವಾಸಿ ಮಂಜುಳ(40).

ಎರಡು ದಿನಗಳ ಹಿಂದೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಬಳಿ ಇರುವ ಹದಿನಾರುಕಾಲಿನ ಮಂಟಪದ ಬಳಿ ಅಪರಿಚಿತ ಮಹಿಳೆ ಶವ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಪೊಲೀಸರು ಮೃತ ಮಹಿಳೆಯ ಮಾಹಿತಿ ಜಾಲಾಡಿದಾಗ ಕನಕಪುರದ ಮಂಜುಳಾ ಎಂದು ತಿಳಿದುಬಂತು.ಮೂಲತಃ ಮಳವಳ್ಳಿ ತಾಲೂಕಿನ ಮಂಜುಳಾ ವಿವಾಹಿತಳು.ಮಹದೇವಾಚಾರಿ ಎಂಬುವರನ್ನ ವಿವಾಹವಾಗಿದ್ದ ಮಂಜುಳಾ ಎರಡು ಮಕ್ಕಳ ತಾಯಿ.ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಜುಳಾಗೆ ಶ್ಯಾಂಪ್ರಸಾದ್ ಪರಿಚಯವಾಯಿತು.ಸ್ನೇಹ ಪ್ರಣಯಕ್ಕೆ ತಿರುಗಿ ಅಕ್ರಮ ಸಂಭಂಧಕ್ಕೆ ದಾರಿಯಾಯಿತು.ಈ ವಿಚಾರ ಪತಿ ಮಹದೇವಾಚಾರಿಗೆ ತಿಳಿದು ಗಲಾಟೆ ನಡೆದಿದೆ.ಶ್ಯಾಂಪ್ರಸಾದ್ ಸಹವಾಸ ಬಿಡುವಂತೆ ಪತಿ ಮನವಿ ಮಾಡಿದ್ದಾರೆ.3 ಲಕ್ಷ ಸಾಲ ಕೊಟ್ಟಿದ್ದೀನಿ ವಾಪಸ್ ತಗೊಂಡು ಸಹವಾಸ ಬಿಡ್ತೀನಿ ಅಂತ ಮಾತು ಕೊಟ್ಟಿದ್ದಾರೆ.ನಂತರ ಮಹದೇವಾಚಾರಿ ತನ್ನ ಪತ್ನಿ ಹಾಗೂ ಮಕ್ಕಳ ಸಮೇತ ಕನಕಪುರದಲ್ಲಿ ನೆಲೆಸಿದ್ದಾರೆ.ಹೀಗಿದ್ದೂ ಇಬ್ಬರ ನಡುವೆ ಅಕ್ರಮ ಸಂಭಂಧ ಮುಂದುವರೆದಿದೆ.ಏಪ್ರಿಲ್ 8 ರಂದು ದೇವಸ್ಥಾನಕ್ಕೆ ಎಂದು ಮನೆ ಬಿಟ್ಟ ಮಂಜುಳಾ ಮನೆಗೆ ಹಿಂದಿರುಗಿಲ್ಲ.ಪ್ರಿಯಕರನ ಜೊತೆ ಹೋಗಿದ್ದಾಳೆಂದು ಖಚಿತಪಡಿಸಿಕೊಂಡ ಪತಿ ಮೌನಕ್ಕೆ ಶರಣಾಗಿದ್ದಾರೆ.ಏಪ್ರಿಲ್ 15 ರಂದು ಬೆಳಿಗ್ಗೆ ಹದಿನಾರುಕಾಲು ಮಂಟಪದ ಬಳಿ ಮಂಜುಳಾ ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ.ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಠಾಣೆ ಪೊಲೀಸರು ತನಿಖೆ ಆರಂಭಿಸಿ ಆರೋಪಿಯನ್ನ ಬಂಧಿಸಿದ್ದಾರೆ.ಹಣ ಹಿಂದಿರುಗಿಸುವಂತೆ ಒತ್ತಡ ಹೇರಿದ್ದ ಪತ್ನಿಯನ್ನ ಶ್ಯಾಮ್ ಪ್ರಸಾದ್ ಕೊಲೆ ಮಾಡಿರುವುದಾಗಿ ಪತಿ ಮಹದೇವಾಚಾರಿ ದೂರು ನೀಡಿದ್ದಾರೆ.ಅಕ್ರಮ ಸಂಭಂಧಕ್ಕೆ ಹಾತೊರೆದು ಹಣ ಕಳೆದುಕೊಂಡ ಮಂಜುಳಾ ಪ್ರಾಣವನ್ನೂ ಕಳೆದುಕೊಂಡಿದ್ದಾಳೆ…

Spread the love

Related post

ಗುಡ್ ಲಕ್ ಇಂಡಿಯಾ…ಬ್ಲಾಕ್ ಕ್ಯಾಪ್ಸ್ ಗೆ ಮಣಿಸಿ ಗೆದ್ದು ಬರಲಿ ಬ್ಲೂ ಬಾಯ್ಸ್…ಅಭಿಮಾನಿಗಳ ಮುಖದ ಮೇಲೆ ರಾರಾಜಿಸಿದ ತ್ರಿವಣ ಧ್ವಜ…ಮೈಸೂರಿನಲ್ಲಿ ಹರಿದುಬಂದ ವಿಶಸ್ ಮಹಾಪೂರ…

ಗುಡ್ ಲಕ್ ಇಂಡಿಯಾ…ಬ್ಲಾಕ್ ಕ್ಯಾಪ್ಸ್ ಗೆ ಮಣಿಸಿ ಗೆದ್ದು ಬರಲಿ ಬ್ಲೂ…

ಗುಡ್ ಲಕ್ ಇಂಡಿಯಾ…ಬ್ಲಾಕ್ ಕ್ಯಾಪ್ಸ್ ಗೆ ಮಣಿಸಿ ಗೆದ್ದು ಬರಲಿ ಬ್ಲೂ ಬಾಯ್ಸ್…ಅಭಿಮಾನಿಗಳ ಮುಖದ ಮೇಲೆ ರಾರಾಜಿಸಿದ ತ್ರಿವಣ ಧ್ವಜ…ಮೈಸೂರಿನಲ್ಲಿ ಹರಿದುಬಂದ ವಿಶಸ್ ಮಹಾಪೂರ… ಮೈಸೂರು,ಮಾ8,Tv10 ಕನ್ನಡ ವಿಶ್ವಕಪ್…
ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ ಆರೋಪ…

ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ…

ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ ಆರೋಪ… ನಂಜನಗೂಡು,ಮಾ8,Tv10 ಕನ್ನಡ ನಂಜನಗೂಡು ಕಪಿಲಾ ನದಿ ಪಾತ್ರದ ಭಾರಿ ಮರಗಳ ಮಾರಣಹೋಮವಾಗಿದೆ.ಶ್ರೀಕಂಠೇಶ್ವರನ ದೇವಾಲಯ ಸಮೀಪ…
ಅಮಾನತಿನಲ್ಲಿರುವ ಎಂಡಿಎ ವಿಶೇಷ ತಹಸೀಲ್ದಾರ್ ರಾಜಶೇಖರ್ ಪರ ಭರ್ಜರಿ ಬ್ಯಾಂಟಿಂಗ್…ಶಿಸ್ತುಕ್ರಮ ವಹಿಸಲು ಮೀನಾಮೇಷ…ಸರ್ಕಾರದ ಪತ್ರಕ್ಕೂ ಡೋಂಟ್ ಕೇರ್…ಪ್ರಾಧಿಕಾರದ ಕಾನೂನು ಶಾಖೆ ಬಣ್ಣಬಯಲು…ಶಿಸ್ತುಕ್ರಮ ಕೈಗೊಂಡ ವರದಿ ಸಲ್ಲಿಸುವಂತೆ ಪ್ರಾಧಿಕಾರಕ್ಕೆ ಖಡಕ್ ವಾರ್ನಿಂಗ್…

ಅಮಾನತಿನಲ್ಲಿರುವ ಎಂಡಿಎ ವಿಶೇಷ ತಹಸೀಲ್ದಾರ್ ರಾಜಶೇಖರ್ ಪರ ಭರ್ಜರಿ ಬ್ಯಾಂಟಿಂಗ್…ಶಿಸ್ತುಕ್ರಮ ವಹಿಸಲು…

ಅಮಾನತಿನಲ್ಲಿರುವ ಎಂಡಿಎ ವಿಶೇಷ ತಹಸೀಲ್ದಾರ್ ರಾಜಶೇಖರ್ ಪರ ಭರ್ಜರಿ ಬ್ಯಾಂಟಿಂಗ್…ಶಿಸ್ತುಕ್ರಮ ವಹಿಸಲು ಮೀನಾಮೇಷ…ಸರ್ಕಾರದ ಪತ್ರಕ್ಕೂ ಡೋಂಟ್ ಕೇರ್…ಪ್ರಾಧಿಕಾರದ ಕಾನೂನು ಶಾಖೆ ಬಣ್ಣಬಯಲು…ಶಿಸ್ತುಕ್ರಮ ಕೈಗೊಂಡ ವರದಿ ಸಲ್ಲಿಸುವಂತೆ ಪ್ರಾಧಿಕಾರಕ್ಕೆ ಖಡಕ್…

Leave a Reply

Your email address will not be published. Required fields are marked *