ನಿಗೂಢ ಕೊಲೆ ರಹಸ್ಯ ಬಯಲು…ಪ್ರಿಯಕರ ಅಂದರ್…ಅಕ್ರಮ ಸಂಭಂಧ ಹಿನ್ನಲೆ ಕೊಲೆ…ಸಾಲ ಹಿಂದಿರುಗಿಸುವಂತೆ ಒತ್ತಡ ಹೇರಿದ್ದಕ್ಕೆ ಹತ್ಯೆ…

ನಿಗೂಢ ಕೊಲೆ ರಹಸ್ಯ ಬಯಲು…ಪ್ರಿಯಕರ ಅಂದರ್…ಅಕ್ರಮ ಸಂಭಂಧ ಹಿನ್ನಲೆ ಕೊಲೆ…ಸಾಲ ಹಿಂದಿರುಗಿಸುವಂತೆ ಒತ್ತಡ ಹೇರಿದ್ದಕ್ಕೆ ಹತ್ಯೆ…

ನಂಜನಗೂಡು,ಏ18,Tv10 ಕನ್ನಡ
ಮಹಿಳೆಯ ನಿಗೂಢ ಕೊಲೆ ರಹಸ್ಯ ಭೇಧಿಸುವಲ್ಲಿ ನಂಜನಗೂಡು ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ.ಅಕ್ರಮ ಸಂಭಂದ ಇರಿಸಿಕೊಂಡಿದ್ದ ಪ್ರಿಯತಮ ಅಂದರ್ ಆಗಿದ್ದಾನೆ.ಸಾಲವಾಗಿ ಕೊಟ್ಟ ಹಣ ವಾಪಸ್ ಕೇಳಿದ ಪ್ರಿಯತಮೆಯನ್ನ ಪ್ರಿಯಕರ ಬರ್ಭರವಾಗಿ ಕೊಲೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.ಮಳವಳ್ಳಿಯ ನಿವಾಸಿ ಶ್ಯಾಂಪ್ರಸಾದ್ ಬಂಧಿತ ಆರೋಪಿ.ಪ್ರಿಯಕರನ ಕೈಲಿ ಹತ್ಯೆಗೊಳಗಾದವಳು ಕನಕಪುರದ ನಿವಾಸಿ ಮಂಜುಳ(40).

ಎರಡು ದಿನಗಳ ಹಿಂದೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಬಳಿ ಇರುವ ಹದಿನಾರುಕಾಲಿನ ಮಂಟಪದ ಬಳಿ ಅಪರಿಚಿತ ಮಹಿಳೆ ಶವ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಪೊಲೀಸರು ಮೃತ ಮಹಿಳೆಯ ಮಾಹಿತಿ ಜಾಲಾಡಿದಾಗ ಕನಕಪುರದ ಮಂಜುಳಾ ಎಂದು ತಿಳಿದುಬಂತು.ಮೂಲತಃ ಮಳವಳ್ಳಿ ತಾಲೂಕಿನ ಮಂಜುಳಾ ವಿವಾಹಿತಳು.ಮಹದೇವಾಚಾರಿ ಎಂಬುವರನ್ನ ವಿವಾಹವಾಗಿದ್ದ ಮಂಜುಳಾ ಎರಡು ಮಕ್ಕಳ ತಾಯಿ.ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಜುಳಾಗೆ ಶ್ಯಾಂಪ್ರಸಾದ್ ಪರಿಚಯವಾಯಿತು.ಸ್ನೇಹ ಪ್ರಣಯಕ್ಕೆ ತಿರುಗಿ ಅಕ್ರಮ ಸಂಭಂಧಕ್ಕೆ ದಾರಿಯಾಯಿತು.ಈ ವಿಚಾರ ಪತಿ ಮಹದೇವಾಚಾರಿಗೆ ತಿಳಿದು ಗಲಾಟೆ ನಡೆದಿದೆ.ಶ್ಯಾಂಪ್ರಸಾದ್ ಸಹವಾಸ ಬಿಡುವಂತೆ ಪತಿ ಮನವಿ ಮಾಡಿದ್ದಾರೆ.3 ಲಕ್ಷ ಸಾಲ ಕೊಟ್ಟಿದ್ದೀನಿ ವಾಪಸ್ ತಗೊಂಡು ಸಹವಾಸ ಬಿಡ್ತೀನಿ ಅಂತ ಮಾತು ಕೊಟ್ಟಿದ್ದಾರೆ.ನಂತರ ಮಹದೇವಾಚಾರಿ ತನ್ನ ಪತ್ನಿ ಹಾಗೂ ಮಕ್ಕಳ ಸಮೇತ ಕನಕಪುರದಲ್ಲಿ ನೆಲೆಸಿದ್ದಾರೆ.ಹೀಗಿದ್ದೂ ಇಬ್ಬರ ನಡುವೆ ಅಕ್ರಮ ಸಂಭಂಧ ಮುಂದುವರೆದಿದೆ.ಏಪ್ರಿಲ್ 8 ರಂದು ದೇವಸ್ಥಾನಕ್ಕೆ ಎಂದು ಮನೆ ಬಿಟ್ಟ ಮಂಜುಳಾ ಮನೆಗೆ ಹಿಂದಿರುಗಿಲ್ಲ.ಪ್ರಿಯಕರನ ಜೊತೆ ಹೋಗಿದ್ದಾಳೆಂದು ಖಚಿತಪಡಿಸಿಕೊಂಡ ಪತಿ ಮೌನಕ್ಕೆ ಶರಣಾಗಿದ್ದಾರೆ.ಏಪ್ರಿಲ್ 15 ರಂದು ಬೆಳಿಗ್ಗೆ ಹದಿನಾರುಕಾಲು ಮಂಟಪದ ಬಳಿ ಮಂಜುಳಾ ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ.ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಠಾಣೆ ಪೊಲೀಸರು ತನಿಖೆ ಆರಂಭಿಸಿ ಆರೋಪಿಯನ್ನ ಬಂಧಿಸಿದ್ದಾರೆ.ಹಣ ಹಿಂದಿರುಗಿಸುವಂತೆ ಒತ್ತಡ ಹೇರಿದ್ದ ಪತ್ನಿಯನ್ನ ಶ್ಯಾಮ್ ಪ್ರಸಾದ್ ಕೊಲೆ ಮಾಡಿರುವುದಾಗಿ ಪತಿ ಮಹದೇವಾಚಾರಿ ದೂರು ನೀಡಿದ್ದಾರೆ.ಅಕ್ರಮ ಸಂಭಂಧಕ್ಕೆ ಹಾತೊರೆದು ಹಣ ಕಳೆದುಕೊಂಡ ಮಂಜುಳಾ ಪ್ರಾಣವನ್ನೂ ಕಳೆದುಕೊಂಡಿದ್ದಾಳೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *