ನಿಗೂಢ ಕೊಲೆ ರಹಸ್ಯ ಬಯಲು…ಪ್ರಿಯಕರ ಅಂದರ್…ಅಕ್ರಮ ಸಂಭಂಧ ಹಿನ್ನಲೆ ಕೊಲೆ…ಸಾಲ ಹಿಂದಿರುಗಿಸುವಂತೆ ಒತ್ತಡ ಹೇರಿದ್ದಕ್ಕೆ ಹತ್ಯೆ…

ನಿಗೂಢ ಕೊಲೆ ರಹಸ್ಯ ಬಯಲು…ಪ್ರಿಯಕರ ಅಂದರ್…ಅಕ್ರಮ ಸಂಭಂಧ ಹಿನ್ನಲೆ ಕೊಲೆ…ಸಾಲ ಹಿಂದಿರುಗಿಸುವಂತೆ ಒತ್ತಡ ಹೇರಿದ್ದಕ್ಕೆ ಹತ್ಯೆ…

ನಂಜನಗೂಡು,ಏ18,Tv10 ಕನ್ನಡ
ಮಹಿಳೆಯ ನಿಗೂಢ ಕೊಲೆ ರಹಸ್ಯ ಭೇಧಿಸುವಲ್ಲಿ ನಂಜನಗೂಡು ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ.ಅಕ್ರಮ ಸಂಭಂದ ಇರಿಸಿಕೊಂಡಿದ್ದ ಪ್ರಿಯತಮ ಅಂದರ್ ಆಗಿದ್ದಾನೆ.ಸಾಲವಾಗಿ ಕೊಟ್ಟ ಹಣ ವಾಪಸ್ ಕೇಳಿದ ಪ್ರಿಯತಮೆಯನ್ನ ಪ್ರಿಯಕರ ಬರ್ಭರವಾಗಿ ಕೊಲೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.ಮಳವಳ್ಳಿಯ ನಿವಾಸಿ ಶ್ಯಾಂಪ್ರಸಾದ್ ಬಂಧಿತ ಆರೋಪಿ.ಪ್ರಿಯಕರನ ಕೈಲಿ ಹತ್ಯೆಗೊಳಗಾದವಳು ಕನಕಪುರದ ನಿವಾಸಿ ಮಂಜುಳ(40).

ಎರಡು ದಿನಗಳ ಹಿಂದೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಬಳಿ ಇರುವ ಹದಿನಾರುಕಾಲಿನ ಮಂಟಪದ ಬಳಿ ಅಪರಿಚಿತ ಮಹಿಳೆ ಶವ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಪೊಲೀಸರು ಮೃತ ಮಹಿಳೆಯ ಮಾಹಿತಿ ಜಾಲಾಡಿದಾಗ ಕನಕಪುರದ ಮಂಜುಳಾ ಎಂದು ತಿಳಿದುಬಂತು.ಮೂಲತಃ ಮಳವಳ್ಳಿ ತಾಲೂಕಿನ ಮಂಜುಳಾ ವಿವಾಹಿತಳು.ಮಹದೇವಾಚಾರಿ ಎಂಬುವರನ್ನ ವಿವಾಹವಾಗಿದ್ದ ಮಂಜುಳಾ ಎರಡು ಮಕ್ಕಳ ತಾಯಿ.ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಜುಳಾಗೆ ಶ್ಯಾಂಪ್ರಸಾದ್ ಪರಿಚಯವಾಯಿತು.ಸ್ನೇಹ ಪ್ರಣಯಕ್ಕೆ ತಿರುಗಿ ಅಕ್ರಮ ಸಂಭಂಧಕ್ಕೆ ದಾರಿಯಾಯಿತು.ಈ ವಿಚಾರ ಪತಿ ಮಹದೇವಾಚಾರಿಗೆ ತಿಳಿದು ಗಲಾಟೆ ನಡೆದಿದೆ.ಶ್ಯಾಂಪ್ರಸಾದ್ ಸಹವಾಸ ಬಿಡುವಂತೆ ಪತಿ ಮನವಿ ಮಾಡಿದ್ದಾರೆ.3 ಲಕ್ಷ ಸಾಲ ಕೊಟ್ಟಿದ್ದೀನಿ ವಾಪಸ್ ತಗೊಂಡು ಸಹವಾಸ ಬಿಡ್ತೀನಿ ಅಂತ ಮಾತು ಕೊಟ್ಟಿದ್ದಾರೆ.ನಂತರ ಮಹದೇವಾಚಾರಿ ತನ್ನ ಪತ್ನಿ ಹಾಗೂ ಮಕ್ಕಳ ಸಮೇತ ಕನಕಪುರದಲ್ಲಿ ನೆಲೆಸಿದ್ದಾರೆ.ಹೀಗಿದ್ದೂ ಇಬ್ಬರ ನಡುವೆ ಅಕ್ರಮ ಸಂಭಂಧ ಮುಂದುವರೆದಿದೆ.ಏಪ್ರಿಲ್ 8 ರಂದು ದೇವಸ್ಥಾನಕ್ಕೆ ಎಂದು ಮನೆ ಬಿಟ್ಟ ಮಂಜುಳಾ ಮನೆಗೆ ಹಿಂದಿರುಗಿಲ್ಲ.ಪ್ರಿಯಕರನ ಜೊತೆ ಹೋಗಿದ್ದಾಳೆಂದು ಖಚಿತಪಡಿಸಿಕೊಂಡ ಪತಿ ಮೌನಕ್ಕೆ ಶರಣಾಗಿದ್ದಾರೆ.ಏಪ್ರಿಲ್ 15 ರಂದು ಬೆಳಿಗ್ಗೆ ಹದಿನಾರುಕಾಲು ಮಂಟಪದ ಬಳಿ ಮಂಜುಳಾ ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ.ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಠಾಣೆ ಪೊಲೀಸರು ತನಿಖೆ ಆರಂಭಿಸಿ ಆರೋಪಿಯನ್ನ ಬಂಧಿಸಿದ್ದಾರೆ.ಹಣ ಹಿಂದಿರುಗಿಸುವಂತೆ ಒತ್ತಡ ಹೇರಿದ್ದ ಪತ್ನಿಯನ್ನ ಶ್ಯಾಮ್ ಪ್ರಸಾದ್ ಕೊಲೆ ಮಾಡಿರುವುದಾಗಿ ಪತಿ ಮಹದೇವಾಚಾರಿ ದೂರು ನೀಡಿದ್ದಾರೆ.ಅಕ್ರಮ ಸಂಭಂಧಕ್ಕೆ ಹಾತೊರೆದು ಹಣ ಕಳೆದುಕೊಂಡ ಮಂಜುಳಾ ಪ್ರಾಣವನ್ನೂ ಕಳೆದುಕೊಂಡಿದ್ದಾಳೆ…

Spread the love

Related post

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ… ಮೈಸೂರು,ಜು13,Tv10 ಕನ್ನಡ ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಜಾನ್ಸನ್…
ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ… ಮೈಸೂರು,ಜುಲೈ11,Tv10 ಕನ್ನಡ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ…
ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ…

ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ…

ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ… ಮಂಡ್ಯ,ಆ7,Tv10 ಕನ್ನಡ ಸಕ್ಕರೆನಾಡು ಮಂಡ್ಯದಲ್ಲಿ ಮತ್ತೊಂದು ಕೊಲೆಯಾಗಿದೆ.ಕೆ ಆರ್ ಎಸ್ ನಲ್ಲಿ ಮಲಗಿದ್ದ ವ್ಯಕ್ತಿ ತಲೆ…

Leave a Reply

Your email address will not be published. Required fields are marked *