ಅಣ್ಣ ‘ಕೈ’ ಅಭ್ಯರ್ಥಿ… ಜೆಡಿಎಸ್ ಬೆಂಬಲಕ್ಕೆ ನಿಂತ ತಂಗಿ…ಏನಾಗಿದೆ ಅನಿಲ್ ಚಿಕ್ಕಮಾದು ಕುಟುಂಬದಲ್ಲಿ…?

ಅಣ್ಣ ‘ಕೈ’ ಅಭ್ಯರ್ಥಿ… ಜೆಡಿಎಸ್ ಬೆಂಬಲಕ್ಕೆ ನಿಂತ ತಂಗಿ…ಏನಾಗಿದೆ ಅನಿಲ್ ಚಿಕ್ಕಮಾದು ಕುಟುಂಬದಲ್ಲಿ…?

ಹುಣಸೂರು,ಏ28,Tv10 ಕನ್ನಡ
ಹೆಚ್.ಡಿ.ಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅನಿಲ್ ಚಿಕ್ಕಮಾದು ಎರಡನೇ ಬಾರಿಯ ಗೆಲುವಿಗಾಗಿ ಹರಸಾಹಸ ನಡೆಸುತ್ತಿದ್ದರೆ ಇತ್ತ ಹುಣಸೂರಿನಲ್ಲಿ ಸಹೋದರಿ ರಂಜಿತಾ ಚಿಕ್ಕಮಾದು ಜಿಟಿಡಿ ಪುತ್ರ ಜೆಡಿಎಸ್ ಅಭ್ಯರ್ಥಿ ಹರೀಶ್ ಗೌಡ ಪರ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ.ಚಿಕ್ಕಮಾದು ಮಕ್ಕಳು ಅಣ್ಣತಂಗಿಯರಲ್ಲಿ ವಿಭಿನ್ನ ಅಭಿಪ್ರಾಯ ರಾಜಕೀಯ ಪಂಡಿತರಿಗೆ ಹುಬ್ಬೇರಿಸುವಂತಾಗಿದೆ.ಹೆಚ್.ಡಿ.ಕೋಟೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಅನಿಲ್ ಚಿಕ್ಕಮಾದು ಗೆಲುವಿಗಾಗಿ ರಾತ್ರಿ ಹಗಲು ಮತದಾರರ ಮನೆಬಾಗಿಲು ತಟ್ಟಿ ಮನವಿ ಮಾಡುತ್ತಿದ್ದರೆ.ಇತ್ತ ರಂಜಿತಾ ಚಿಕ್ಕಮಾದು ಹಗಲಿರುಳೆನ್ನದೆ ಜಿ.ಡಿ.ಹರೀಶ್ ಗೌಡ ಗೆಲುವಿಗಾಗಿ ಪ್ರಚಾರದಲ್ಲಿ ಕಸರತ್ತು ನಡೆಸುತ್ತಿದ್ದಾರೆ.ಅನಿಲ್ ಚಿಕ್ಜಮಾದು ರವರು ಗೆಲುವಿನ ಮೂಲಕ ಸಿದ್ದರಾಮಯ್ಯ ಕೈ ಬಲಪಡಿಸಿ ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವ ಕನಸು ಕಾಣುತ್ತಿದ್ದರೆ ಸಹೋದರಿ ರಂಜಿತಾ ಚಿಕ್ಕಮಾದು ಮಾತ್ರ ಹರೀಶ್ ಗೌಡ ಕೈ ಬಲಪಡಿಸಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ.ಹರೀಶ್ ಗೌಡರ ಪ್ರಚಾರದಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ರಂಜಿತಾ ಚಿಕ್ಕಮಾದು ಕಾಂಗ್ರೆಸ್ ಗೆ ಸಡ್ಡುಹೊಡೆದು ಜೆಡಿಎಸ್ ಆಶ್ರಯ ಪಡೆದಿದ್ದಾರೆ.ಕಾಂಗ್ರೆಸ್ ನಲ್ಲಿ ಟಿಕೆಟ್ ದೊರೆತು ಎರಡನೇ ಬಾರಿಗೆ ಶಾಸಕನಾಗುವ ಪ್ರಯತ್ನದಲ್ಲಿರುವ ಅನಿಲ್ ಚಿಕ್ಕಮಾದು ಪರ ಸಹೋದರಿ ಇದುವರೆಗೆ ಪ್ರಚಾರಕ್ಕೆ ಬಂದಿಲ್ಲ.ಒಂದೇ ಕುಟುಂಬದಲ್ಲಿ ಅಣ್ಣತಂಗಿಯರ ದ್ವಂದ್ವ ನಿಲುವು ಅಚ್ಚರಿಗೆ ಕಾರಣವಾಗಿದೆ.ಇದು ಇಬ್ಬರ ನಡುವಿನ ಭಿನ್ನಾಭಿಪ್ರಾಯದ ಸೂಚನೆಯೇ ಎಂಬ ಪ್ರಶ್ನೆ ರಾಜಕೀಯ ಪಂಡಿತರನ್ನ ಕಾಡುತ್ತಿದೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *