ಏ30 ರಂದು ಮೈಸೂರಿನಲ್ಲಿ ಪ್ರಧಾನಿ ನ.ಮೋ.ರೋಡ್ ಶೋ…ಮಾಹಿತಿ ನೀಡಿದ ಶಾಸಕ ಎಸ್.ಎ.ರಾಮದಾಸ್…

ಏ30 ರಂದು ಮೈಸೂರಿನಲ್ಲಿ ಪ್ರಧಾನಿ ನ.ಮೋ.ರೋಡ್ ಶೋ…ಮಾಹಿತಿ ನೀಡಿದ ಶಾಸಕ ಎಸ್.ಎ.ರಾಮದಾಸ್…

ಮೈಸೂರು, ಏ.28,Tv10 ಕನ್ನಡ ಚುನಾವಣೆ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 30ರಂದು ಮೈಸೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ.ಮೋಧಿ ಕಾರ್ಯಕ್ರಮದ ಕುರಿತಂತೆ ಶಾಸಕ ಎಸ್.ಎ.ರಾಮದಾಸ್ ಮಾಹಿತಿ ನೀಡಿದ್ದಾರೆ.ಸಂಜೆ ಮೋಧಿ ರವರು ಮೈಸೂರಿಗೆ ಆಗಮಿಸಲಿದ್ದು, ಅವರನ್ನು ಮೈಸೂರು ಶೈಲಿಯಲ್ಲಿ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಗುವುದು.ಮೈಸೂರಿನ ಸಂಪ್ರದಾಯದಂತೆ ನಾದ ಸ್ವರ, ಪೂರ್ಣಕುಂಭದೊಂದಿಗೆ ಪ್ರಧಾನಿ ಮೋದಿಯವರನ್ನ ಅದ್ದೂರಿಯಾಗಿ ಸ್ವಾಗತ ಮಾಡಲಾಗುತ್ತದೆ. ಜೊತೆಗೆ ದಸರಾ ಸಾಂಪ್ರದಾಯಿಕ ಮಾದರಿಯಲ್ಲಿ ಮೈಸೂರಿನ ಸಂಪ್ರದಾಯದ ಉಡುಗೆ ತೊಡುಗೆಗಳ ಮೂಲಕ ಅವರನ್ನ ಸ್ವಾಗತಿಸಿ, ಮೋದಿ ಅವರಿಗೆ ಮೈಸೂರು ಸಿಲ್ಕ್ ವಸ್ತ್ರ, ಮೈಸೂರು ವಿಳ್ಳೆದೆಲೆ, ಗೊಂಬೆ, ಗಂಧದ ಕಡ್ಡಿ ಸೇರಿದಂತೆ ಮೈಸೂರಿನ ಹಲವು ಪದಾರ್ಥಗಳನ್ನು ನೀಡಲಾಗುವುದೆಂದರು.
ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಪ್ರಧಾನಿ ಮೋದಿ ಮೈಸೂರಿನ ಗನ್ ಹೌಸ್ ಸರ್ಕಲ್ ನಿಂದ ರೋಡ್ ಶೋ ಆರಂಭಿಸಲಿದ್ದಾರೆ. ಗನ್ ಹೌಸ್ ನಿಂದ ಪಾಠಶಾಲೆ, ಕೆ.ಆರ್ ಸರ್ಕಲ್, ಸಯ್ಯಾಜಿರಾವ್ ರಸ್ತೆ ಮೂಲಕ ಮಿಲೇನಿಯಂ ಸರ್ಕಲ್ ವರೆಗೂ ರೋಡ್ ಶೋ ನಡೆಯಲಿದೆ ಎಂದು ತಿಳಿಸಿದರು.
ಮಾರ್ಗ ಮಧ್ಯೆ ಮೋದಿಯವರ ಜೀವನದ ಯಶೋಗಾಥೆ ಸಾರುವ ಕಟೌಟ್ ಗಳನ್ನ ಅಳವಡಿಸಲಾಗುತ್ತದೆ. ಈ ರಾಲಿ ಕೇವಲ ರೋಡ್ ಶೋ ಮಾಡಿ ಹೋಗುವಂತದ್ದಲ್ಲ. ಅವರು ನಡೆದು ಬಂದ ಹಾದಿಯನ್ನೂ ತೋರಿಸುವ ಪ್ರಯತ್ನ ನಡೆಯುತ್ತದೆ ಎಂದರು.
ಸೀನಿಯರ್ ಸಿಟಿಜನ್ ಗೂ ಕೂಡ ಕುಳಿತು ನೋಡಲು ಕುರ್ಚಿಗಳ ವ್ಯವಸ್ಥೆ ಮಾಡಲಾಗುತ್ತದೆ. ಐದು ಸ್ಥಳಗಳಲ್ಲಿ ಸೀನಿಯರ್ ಸಿಟಿಜನ್ಸ್ ಕೂರಲು ವ್ಯವಸ್ಥೆ ಮಾಡಲಾಗುತ್ತದೆ.
ಒಟ್ಟು 4 ಕಿ.ಮೀ ರೋಡ್ ಶೋ ನಡೆಯಲಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದು ಶಾಸಕ ರಾಮದಾಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ, ಅಭ್ಯರ್ಥಿ ಶ್ರೀವತ್ಸ, ಮುಖಂಡರುಗಲಾದ ರವಿಶಂಕರ್, ಯಶಸ್ವಿನಿ ಸೋಮಶೇಖರ್, ಹೆಚ್. ವಿ. ರಾಜೀವ್ ಉಪಸ್ಥಿತರಿದ್ದರು…

Spread the love

Related post

ಕಾಂಗ್ರೆಸ್ ಮುಖಂಡೆ ಭೀಕರ ಕೊಲೆ…ಪತಿಯಿಂದಲೇ ಕೃತ್ಯ…

ಕಾಂಗ್ರೆಸ್ ಮುಖಂಡೆ ಭೀಕರ ಕೊಲೆ…ಪತಿಯಿಂದಲೇ ಕೃತ್ಯ…

ಕಾಂಗ್ರೆಸ್ ಮುಖಂಡೆ ಭೀಕರ ಕೊಲೆ…ಪತಿಯಿಂದಲೇ ಕೃತ್ಯ… ಬನ್ನೂರು,ಮೇ21,Tv10 ಕನ್ನಡ ಮೈಸೂರು ಜಿಲ್ಲೆಯ ಬನ್ನೂರಿನ ತುರಗನೂರಿನಲ್ಲಿ ಕಾಂಗ್ರೆಸ್ ಮುಖಂಡೆಯ ಭೀಕರ ಕೊಲೆಯಾಗಿದೆ. ಪತಿಯಿಂದ ಕೃತ್ಯ ನಡೆದಿದೆ. ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿದ್ದವಿದ್ಯಾ…
ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ…ಸಾವಿರಾರು ಭಕ್ತರು ಭಾಗಿ…

ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ…ಸಾವಿರಾರು ಭಕ್ತರು…

ಮೈಸೂರು,ಮೇ19,Tv10 ಕನ್ನಡ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇಂದು ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಸಾಂಗವಾಗಿ ನೆರವೇರಿತು.ಮೈಸೂರು ಸೇರಿದಂತೆ‌ ರಾಜ್ಯ,ಹೊರ ರಾಜ್ಯಗಳಿಂದ ಬಂದಿದ್ದ ಸಾವಿರಕ್ಕೂ ಹೆಚ್ಚು ದಂಪತಿಗಳು…
ಸಾಲ ವಸೂಲಿಗೆ ಬಟ್ಟೆಬಿಚ್ಚಿನಿಂತು ಗೃಹಿಣಿಯನ್ನ ಬಾ ಎಂದು ಕರೆದ ಭೂಪ…ನೊಂದ ಮಹಿಳೆಯಿಂದ ಪ್ರಕರಣ ದಾಖಲು…

ಸಾಲ ವಸೂಲಿಗೆ ಬಟ್ಟೆಬಿಚ್ಚಿನಿಂತು ಗೃಹಿಣಿಯನ್ನ ಬಾ ಎಂದು ಕರೆದ ಭೂಪ…ನೊಂದ ಮಹಿಳೆಯಿಂದ…

ಮೈಸೂರು,ಮೇ19,Tv10 ಕನ್ನಡ ಸಾಲ ವಸೂಲಿಗೆ ಬಂದ ಕಿರಾತಕ ಮನೆ ಮುಂದೆ ಬಟ್ಟೆಬಿಚ್ಚಿನಿಂತು ಗೃಹಿಣಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಬಾ ಎಂದು ಕರೆದ ಘಟನೆ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗನಹಳ್ಳಿಯಲ್ಲಿ…

Leave a Reply

Your email address will not be published. Required fields are marked *