ಮತ ಚಲಾಯಿಸಿ…ಹೋಟೆಲ್ ಬಿಲ್ ನಲ್ಲಿ ಶೇ50% ರಿಯಾಯಿತಿ ಪಡೆಯಿರಿ…

  • Mysore
  • May 9, 2023
  • No Comment
  • 179

ಮತ ಚಲಾಯಿಸಿ…ಹೋಟೆಲ್ ಬಿಲ್ ನಲ್ಲಿ ಶೇ50% ರಿಯಾಯಿತಿ ಪಡೆಯಿರಿ…

ಮೈಸೂರು,ಮೇ9,Tv10 ಕನ್ನಡ
ಮತದಾನದಲ್ಲಿ ಭಾಗವಹಿಸುವಂತೆ ಅರಿವು ಮೀಡಿಸಲು ಚುನಾವಣಾ ಆಯೋಗ ಸಾಕಷ್ಟು ಕಾರ್ಯಕ್ರಮಗಳನ್ನ ಕೊಟ್ಟಿದೆ.ಪ್ರಜಾಪ್ರಭುತ್ವದ ಹಕ್ಕನ್ನ ಚಲಾಯಸಲು ಹಬ್ಬದಂತೆ ಆಚರಿಸಲು ಮನವಿ ಮಾಡಿದೆ.ಚುನಾವಣಾ ಆಯೋಗಕ್ಕೆ ಹಕವು ಸಂಘಸಂಸ್ಥೆಗಳು ಸಾಥ್ ನೀಡಿವೆ.ಮೈಸೂರಿನ ಚಾಮುಂಡಿಪುರಂನಲ್ಲಿರುವ ಹೋಟೆಲ್ ಮಾಲೀಕರು ಮತದಾನ ಉತ್ತೇಜನಕ್ಕಾಗಿ ಚುನಾವಣಾ ಆಯೋಗದೊಂದಿಗೆ ಕೈ ಜೋಡಿಸಿದೆ. ಕೆಫೆ ಗುಡ್ ವೈಬ್ಸ್ ನ ಮಾಲೀಕರು ಮತದಾನ ಮಾಡಿದ ಯುವ ಸಮೂಹಕ್ಕೆ ರಿಯಾಯಿತಿ ಘೋಷಿಸಿದ್ದಾರೆ. ನಾಳೆ ಮತದಾನ ಮಾಡಿದ ಗುರುತು ತೋರಿಸಿದ 18 ರಿಂದ 30 ವರ್ಷದ ಯುವ ತರುಣ ಮತದಾರರು ತಮ್ಮ ಕೆಫೆಯಲ್ಲಿ ಯಾವುದೇ ತಿನಿಸುಗಳು ಸೇವಿಸಿದರೆ ಶೇ 50% ರಿಯಾಯಿತಿ ನೀಡುವುದಾಗಿ ತಿಳಿಸಿದ್ದಾರೆ. ಪ್ರತಿ ಗ್ರಾಹಕನಿಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಒಟ್ಟು ಬಿಲ್ಸ್ ನಲ್ಲಿ ಶೇಕಡ 50% ರಿಯಾಯಿತಿ ನೀಡಲಾಗುವುದೆಂದು ಹೇಳಿದ್ದಾರೆ.
ಮತದಾನ ನಮ್ಮ ಹಕ್ಕು
ತಪ್ಪದೇ ಮತ ಚಲಾಯಿಸಿ
ಸಮೃದ್ಧ ಭಾರತ ನಿರ್ಮಿಸೋಣ ಎಂದು ಉಲ್ಲೇಖಿಸಿರುವ ಬ್ಯಾನರ್ ವನ್ನು ಕೆಫೆ ಮುಂಬಾಗ ರಾರಾಜಿಸುತ್ತಿದೆ.
ಮತ ಚಲಾಯಿಸಿ ಬಂದವರಿಗೆ ಬಾಯಲ್ಲಿ ನೀರೂರಿಸುವ ವಿವಿಧ ಬಗೆಯ ತಿಂಡಿಗಳನ್ನು ರಿಯಾಯಿತಿಯಲ್ಲಿ ಕೊಡಲು ತಯಾರಿ ನಡೆಸಿದ್ದಾರೆ.
ಈ ಕುರಿತು ಹೋಟೆಲ್ ಮಾಲಿಕರಾದ ಸುರೇಶ್ ರವರು ಮಾತನಾಡಿ ದಿನಸಿ, ತರಕಾರಿ, ಗ್ಯಾಸಸಿಲಿಂಡರ್ ಬೆಲೆ ಗಗನಕ್ಕೇರಿರುವ ಈ ಸಂದರ್ಭದಲ್ಲಿಯೂ ಕೂಡ ನಾವು ಮತದಾನದ ಉತ್ತೇಜನಕ್ಕಾಗಿ ಚುನಾವಣಾ
ಆಯೋಗದೊಂದಿಗೆ ಕೈಜೋಡಿಸಲು ಸಜ್ಜಾಗಿದ್ದೇವೆ. ಮತದಾರರು ಒಂದು ಮತ ಚಲಾಯಿಸಿರುವ ಗುರುತು ತೋರಿಸಿ 50%ರಿಯಾಯಿತಿ ಪಡೆಯಬಹುದೆಂದು ತಿಳಿಸಿದ್ದಾರೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *