ನನ್ನ ಗೆಲುವನ್ನ ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್,ಖರ್ಗೆ ರವರಿಗೆ ಅರ್ಪಿಸುತ್ತೇನೆ…ನೂತನ ಶಾಸಕ ಹರೀಶ್ ಗೌಡ…

ಮೈಸೂರು,ಮೇ18,Tv10 ಕನ್ನಡ
ನನ್ನ ಗೆಲುವನ್ನ ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್,ಮಲ್ಲಿಕಾರ್ಜುನ ಖರ್ಗೆ ರವರಿಗೆ ಅರ್ಪಿಸುತ್ತೇನೆ ಎಂದು ಚಾಮರಾಜ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಪ್ರತಿನಿಧಿಸಿ ನೂತನವಾಗಿ ಆಯ್ಕೆಯಾದ ಹರೀಶ್ ಗೌಡ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಶಾಸಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದರು.ನನ್ನ ಕ್ಷೇತ್ರದ ಜನರ ಅಲ್ಲದೇ ವಿವಿಧ ಭಾಗದ ಜನರು ನನಗೆ ಬೆಂಬಲೆ ಸೂಚಿಸಿದ್ದಾರೆ.
ನನ್ನನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಹಾಗೂ ಖರ್ಗೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.
ನನ್ನ ಗೆಲುವನ್ನ ಈ ಮೂವರಿಗೆ ಅರ್ಪಿಸುತ್ತೆನೆ.
ನನಗೆ ೨೦-೨೫ ದಿನ ಮಾತ್ರ ಅವಕಾಶ ಇತ್ತು.
ಎಲ್ಲರೂ ನನ್ನ ಪರವಾಗಿ ಕೆಲಸ ಮಾಡಿದ್ದಾರೆ.
ನಾನು ಶಾಸಕ ನಾದ ನಂತರ ಏನು ಕೆಲಸ ಮಾಡುತ್ತೇನೆ ಎಂದು ಹೇಳಿದ್ದ ಅದನ್ನು ಪೂರ್ಣಗೊಳಿಸುತ್ತೇನೆ.
ಆಶ್ರಯ ಮನೆಗೆಳನ್ನ ೨೦ ವರ್ಷಗಳಿಂದ ನೀಡಿಲ್ಲ.ಅವುಗಳನ್ನು ನೀಡಲು ನಾನು ಕಟುಬದ್ದನಾಗಿ ಇರುತ್ತೇನೆ.ನನ್ನ ಎಲ್ಲಾ ವಾಗ್ದನಗಳನ್ನು ನಾನು ಪೂರೈಸುತ್ತೇನೆ.
ನನ್ನ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ.ಇದು ಕಾಂಗ್ರೆಸ್ ಹಾಗೂ ಜೆಡಿಎಸ್ ನ ಭದ್ರಕೊಟೆ.ಇಲ್ಲಿ ಗೆದ್ರೆ ಕಾಂಗ್ರೆಸ್ ಜೆಡಿಎಸ್ ಮಾತ್ರ ಗೆಲ್ಲಬೇಕಿತ್ತು.
ಕಳೆದ ಬಾರಿಯ ಗೊಂದಲದಿಂದ ಬಿಜೆಪಿ ಗೆದ್ದಿತ್ತು ಎಂದು ತಮ್ಮ ಗೆಲುವಿನ ಕಾರಣ ತಿಳಿಸಿದರು.
ಚುನಾವಣೆಗಾಗಿ ಯಾರಿಂದಲೂ ಹಣ ಪಡೆದಿಲ್ಲ.ನಾನು ಪಕ್ಷ ನೀಡಿದ ಹಣದಲ್ಲಿ ಚುನಾವಣೆ ಮಾಡಿದ್ದೀನಿ.
ಯಾವ ಪಬ್, ಬಾರ್ ಹುಕ್ಕ ಬಾರ್, ಜೂಜು ಅಡ್ಡೆಗಳಿಂದ ಹಣ ಪಡೆದಿಲ್ಲ.ನನಗೆ ಮೂರು ಪಕ್ಷದ ಕಾರ್ಯಕರ್ತರು ನನಗೆ ಸಹಾಯ ಮಾಡಿದ್ದಾರೆ.
ಎಲ್ಲರೂ ನನಗೆ ಬೆಂಬಲವಾಗಿ ನಿಂತರು ಎಂದು ಸ್ಪಷ್ಟಪಡಿಸಿದರು…

Spread the love

Related post

ಕೆಆರ್ ಎಸ್ ಜಲಾಶಯದಿಂದ 1.30 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ…ನದಿಪಾತ್ರದ ಜನತೆಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ…

ಕೆಆರ್ ಎಸ್ ಜಲಾಶಯದಿಂದ 1.30 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ…ನದಿಪಾತ್ರದ ಜನತೆಗೆ…

ಮಂಡ್ಯ,ಜು27,Tv10 ಕನ್ನಡಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆ ಕೆ.ಆರ್.ಎಸ್ ಜಲಾಶಯದಿಂದ 1,30,000 ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತದೆ.ಹೀಗಾಗಿಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿನ ಕಾವೇರಿ ನದಿ ಪಾತ್ರದ ತಗ್ಗು…
ಚಾಮುಂಡಿ ಬೆಟ್ಟ ಹತ್ತುವ ಮಹಿಳೆಯರಿಗೆ ಬಾಗಿನ…ಶ್ರೀ ದುರ್ಗಾ ಫೌಂಡೇಷನ್ ನಿಂದ ಕಾರ್ಯಕ್ರಮ…

ಚಾಮುಂಡಿ ಬೆಟ್ಟ ಹತ್ತುವ ಮಹಿಳೆಯರಿಗೆ ಬಾಗಿನ…ಶ್ರೀ ದುರ್ಗಾ ಫೌಂಡೇಷನ್ ನಿಂದ ಕಾರ್ಯಕ್ರಮ…

ಮೈಸೂರು,ಜು27,Tv10 ಕನ್ನಡಚಾಮುಂಡೇಶ್ವರಿ ದೇವಿ ವರ್ದಂತಿ ಅಂಗವಾಗಿ ಬೆಟ್ಟಕ್ಕೆ ಮೆಟ್ಟಿಲು ಮಾರ್ಗವಾಗಿ ತೆರಳುವಮಹಿಳೆಯರಿಗೆ ಬೆಟ್ಟದ ಪಾದದಲ್ಲಿ ಅರಿಶಿಣ, ಕುಂಕುಮ, ಬಳೆಗಳೊಂದಿಗೆ ಬಾಗಿನ ನೀಡುವ ಕಾರ್ಯಕ್ರಮ ನೆರವೇರಿತು. ಶ್ರೀ ದುರ್ಗಾ ಫೌಂಡೇಶನ್…
ಮುಡಾ ನಗರ ಯೋಜಕ ಸದಸ್ಯ ಶೇಷ ಅಮಾನತು ಆದೇಶ ರದ್ದು…ನಗರಾಭಿವೃದ್ದಿ ಕಾರ್ಯದರ್ಶಿಗೆ 5 ಸಾವಿರ ದಂಡ…

ಮುಡಾ ನಗರ ಯೋಜಕ ಸದಸ್ಯ ಶೇಷ ಅಮಾನತು ಆದೇಶ ರದ್ದು…ನಗರಾಭಿವೃದ್ದಿ ಕಾರ್ಯದರ್ಶಿಗೆ…

ಮೈಸೂರು,ಜು27,Tv10 ಕನ್ನಡನಕ್ಷೆ ಅನುಮೋದನೆ ಹಾಗೂ ಇನ್ನಿತರ ಕೆಲಸಗಳಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಆರೋಪದ ಮೇಲೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಗರ ಯೋಜಕ ಸದಸ್ಯ ಶೇಷ ರವರ ಅಮಾನತು ಆದೇಶವನ್ನ…

Leave a Reply

Your email address will not be published. Required fields are marked *