ಹುಟ್ಟುಹಬ್ಬ ಆಚರಿಸಬೇಡಿ ಅಂದಿದ್ದಕ್ಕೆ ಗಲಾಟೆ…ಓರ್ವನಿಗೆ ಚಾಕು ಇರಿತ…
- CrimeMysore
- June 5, 2023
- No Comment
- 97

ಮೈಸೂರು,ಜೂ5,Tv10 ಕನ್ನಡ
ಹುಟ್ಟುಹಬ್ಬ ಆಚರಿಸವ ವಿಚಾರದಲ್ಲಿ ಶುರುವಾದ ಗಲಾಟೆಯಲ್ಲಿ ಓರ್ವ ಯುವಕನಿಗೆ ಚಾಕು ಇರಿದ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಪಟ್ಟಣದ ನೀಲಕಂಠನಗರದಲ್ಲಿ ಘಟನೆ ನಡೆದಿದೆ.
ಪ್ರಸಾದ್ (22) ಚಾಕು ಇರಿತಕ್ಕೊಳಗಾದ ಯುವಕ.
ಹುಟ್ಟುಹಬ್ಬ ಆಚರಿಸುತ್ತಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಇಲ್ಲಿ ಹುಟ್ಟುಹಬ್ಬ ಆಚರಿಸಬೇಡಿ ಅಂತಾ ಗಲಾಟೆ ನಡೆದಿದೆ.ನಂತರ ಆಕ್ಷೇಪ ವ್ಯಕ್ತಪಡಿಸಿದ ಪ್ರಸಾದ್ ಮೇಲೆ ಜಗಳ ತೆಗೆದು ಚಾಕು ಇರಿದಿದ್ದಾರೆಂದು ಆರೋಪ ಮಾಡಲಾಗಿದೆ.ಘಟನೆಗೆ ಸಂಭಂಧಿಸಿದಂತೆ
5 ಜನರ ವಿರುದ್ದ ಎಫ್ಐರ್ ದಾಖಲಾಗಿದೆ.
ಶೋಹೆಬ್, ಶಹೇನಸಾ, ಸಲ್ಮಾನ್, ಇಲ್ಲು ಹಾಗೂ ಜಾಫರ್ ವಿರುದ್ದ ಪ್ರಕರಣ ದಾಖಲಾಗಿದೆ.
ಗಾಯಾಳು ಪ್ರಸಾದ್ಗೆ ನಂಜನಗೂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…