Tv10 ಕನ್ನಡ ವರದಿ ಫಲಶೃತಿ…ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ಕ್ರಿಸ್ ಮಸ್ ಟ್ರೀ ತೆರುವು…
- TV10 Kannada Exclusive
- June 6, 2023
- No Comment
- 127

Tv10 ಕನ್ನಡ ವರದಿ ಫಲಶೃತಿ…ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ಕ್ರಿಸ್ ಮಸ್ ಟ್ರೀ ತೆರುವು…

ಮೈಸೂರು,ಜೂ6,Tv10 ಕನ್ನಡ
ಮೈಸೂರು ಮಿನಿ ವಿಧಾನಸೌಧ ಆವರಣದಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ಕ್ರಿಸ್ ಮಸ್ ಟ್ರೀ ತೆರುವುಗೊಳಿಸಲಾಗಿದೆ.Tv10 ಕನ್ನಡ ವಾಹಿನಿ ಮಾಡಿದ ವರದಿಗೆ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ತೆರುವುಗೊಳಿಸಿದ್ದಾರೆ.ಇದು Tv10 ಕನ್ನಡ ವಾಹಿನಿಯ ವರದಿಯ ಫಲಶೃತಿ ಆಗಿದೆ

ಮಿನಿ ವಿಧಾನಸೌಧದ ಆವರಣದಲ್ಲಿ ಬೆಳೆದು ನಿಂತಿದ್ದ ಕ್ರಿಸ್ ಮಸ್ ಟ್ರೀ ಗೆ ಗೆದ್ದಲು ಹಿಡಿದು ಕುಸಿದು ಬೀಳುವ ಸಂಭವವಿತ್ತು.ಕಚೇರಿ ಸಮಯದಲ್ಲಿ ಮರ ಉರುಳಿಬಿದ್ದರೆ ಅನಾಹುತವಾಗುವ ಸಂಭವವಿತ್ತು.ಈ ಹಿನ್ನಲೆ ಮರವನ್ನ ತೆರುವುಗೊಳಿಸುವಂತೆ ತಹಸೀಲ್ದಾರ್ ಗಿರೀಶ್ ರವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.ಪತ್ರ ಬರೆದು 9 ದಿನಗಳಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ.ಈ ವಿಚಾರವಾಗಿ Tv10 ಕನ್ನಡ ವಾಹಿನಿಯಲ್ಲಿ ಸುದ್ದಿ ಪ್ರಸಾರ ಮಾಡಿ ಎಚ್ಚರಿಸಲಾಗಿತ್ತು.ಕೂಡಲೇ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ಮರವನ್ನ ತೆರುವುಗೊಳಿಸಿದ್ದಾರೆ.ಇದು Tv10 ಕನ್ನಡ ವರದಿ ಇಂಪ್ಯಾಕ್ಟ್…