ಟಿಂಬರ್ ಮರ್ಚೆಂಟ್ ಮನೆಗೆ ಕನ್ನ…47 ಲಕ್ಷ ನಗದು…100 ಗ್ರಾಂ ಚಿನ್ನ ಕಳುವು…ವಾಚ್ ಮನ್ ಇದ್ದರೂ ಕಳ್ಳರ ಕೈಚಳಕ…

ಮೈಸೂರು,ಜೂ12,Tv10 ಕನ್ನಡ
ಟಿಂಬರ್ ಮರ್ಚೆಂಟ್ ಮಾಲೀಕರ ಮನೆಯಲ್ಲಿ 47 ಲಕ್ಷ ನಗದು 100 ಗ್ರಾಂ ಚಿನ್ನಾಭರಣ ಕಳುವು ಮಾಡಿದ ಘಟನೆ ಮೈಸೂರಿನ ದೇವನೂರು ಬಡಾವಣೆಯಲ್ಲಿ ನಡೆದಿದೆ.ಮೊಮ್ಮೊಗಳ ಮದುವೆಗಾಗಿ ಬೆಂಗಳೂರಿಗೆ ಇಡೀ ಕುಟುಂಬ ತೆರಳಿದ್ದ ವೇಳೆ ಹೊಂಚು ಹಾಕಿದ ಕಳ್ಳರು ಲೀಲಾಜಾಲವಾಗಿ ಕೃತ್ಯವೆಸಗಿದ್ದಾರೆ.ವಾಚ್ ಮನ್ ಇದ್ದರೂ ಖದೀಮರು ತಮ್ಮ ಕೈಚಳಕ ತೋರಿದ್ದಾರೆ.ಸಿಸಿ ಕ್ಯಾಮರಾ ಸ್ವಿಚ್ ಆಫ್ ಮಾಡಿರುವ ಖದೀಮರು ಕೃತ್ಯವೆಸಗಿದ್ದಾರೆ.

ಸೈಯದ್ ಮುಕ್ತಾರ್ ಅಹಮದ್ ರವರಿಗೆ ಸೇರಿದ ಮನೆಯಲ್ಲಿ ಕೃತ್ಯ ನಡೆದಿದೆ.ಜೂನ್ 7 ರಂದು ಮುಕ್ತಾರ್ ರವರ ಮೊದಲ ಮಗಳ ಮಗಳು(ಮೊಮ್ಮೊಗಳು) ಮದುವೆಗಾಗಿ ಇಡೀ ಕುಟುಂಬ ಬೆಂಗಳೂರಿಗೆ ತೆರಳಿದೆ.ಮೂರಂತಸ್ತಿನ ಮನೆಯ ಮೊದಲ ಅಂತಸ್ತಿನಲ್ಲಿರುವ ಮುಕ್ತಾರ್ ಕೊಠಡಿಯ ಬೀರುವಿನಲ್ಲಿ ಹಣ ಹಾಗೂ ಒಡವೆಗಳನ್ನ ಇಡಲಾಗಿತ್ತು.ವಾಚ್ ಮನ್ ಗೆ ಮನೆ ಜವಾಬ್ದಾರಿ ಬಿಟ್ಟು ಮುಕ್ತಾರ್ ಮೊಮ್ಮಗಳ ಮದುವೆಗೆ ತೆರಳಿದ್ದರು.ಶನಿವಾರ ರಾತ್ರಿ ಪಕ್ಕದ ಮನೆಯವರು ಮುಕ್ತಾರ್ ರವರಿಗೆ ಫೋನ್ ಮಾಡಿ ನಿಮ್ಮ ಮನೆ ಮೊದಲ ಮಹಡಿ ಬಾಗಿಲು ತೆರೆದುಕೊಂಡಿದ್ದು ಗಾಳಿಗೆ ಹಾರಾಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.ಕೂಡಲೇ ಮೈಸೂರಿಗೆ ಧಾವಿಸಿ ಪರಿಶೀಲನೆ ನಡೆಸಿದಾಗ ಬೀರುವಿನಲ್ಲಿದ್ದ 47 ಲಕ್ಷ ನಗದು,4 ಲಕ್ಷ ಮೌಲ್ಯದ 100 ಗ್ರಾಂ ಒಡವೆ ಹಾಗೂ 4 ಸಾವಿರ ಮೌಲ್ಯದ ಒಂದು ಟೈಟಾನ್ ವಾಚ್ ಕಳುವಾಗಿರುವುದು ಬೆಳಕಿಗೆ ಬಂದಿದೆ.ಖದೀಮರು ಸಿಸಿ ಕ್ಯಾಮರಾ ಸ್ವಿಚ್ ಆಫ್ ಮಾಡಿದ್ದಾರೆಂದು ಹೇಳಲಾಗಿದೆ.ವಾಚ್ ಮನ್ ಇದ್ದರೂ ಕೃತ್ಯ ನಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ.

ಘಟನೆ ನಡೆದ ಸ್ಥಳಕ್ಕೆ ಬೆರಳಚ್ಚು ತಜ್ಞರು ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಖದೀಮರ ಸೆರೆಗೆ ಜಾಲ ಬೀಸಿದ್ದಾರೆ…

Spread the love

Related post

ಗೋವುಗಳಿಗೆ ಪೂಜೆ ಸಲ್ಲಿಸು ಮೇವು ವಿತರಿಸಿ ಗಣಪತಿ ಸಚ್ಚಿದಾನಂದಸ್ವಾಮಿಗಳ ಹುಟ್ಟು ಹಬ್ಬ ಆಚರಣೆ…

ಗೋವುಗಳಿಗೆ ಪೂಜೆ ಸಲ್ಲಿಸು ಮೇವು ವಿತರಿಸಿ ಗಣಪತಿ ಸಚ್ಚಿದಾನಂದಸ್ವಾಮಿಗಳ ಹುಟ್ಟು ಹಬ್ಬ…

ಗೋವುಗಳಿಗೆ ಪೂಜೆ ಸಲ್ಲಿಸು ಮೇವು ವಿತರಿಸಿ ಗಣಪತಿ ಸಚ್ಚಿದಾನಂದಸ್ವಾಮಿಗಳ ಹುಟ್ಟು ಹಬ್ಬ ಆಚರಣೆ… ಮೈಸೂರು,ಮೇ26,Tv10 ಕನ್ನಡ ಶ್ರೀಗಣಪತಿ ಸಚ್ಚಿದಾನಂದ ಶ್ರೀಗಳ 84 ನೇ ಹುಟ್ಟುಹಬ್ಬ ಆಶ್ರಮದಲ್ಲಿ ಸಂಭ್ರಮದಿಂದ ನೆರವೇರುತ್ತಿದೆ.ವಿವಿಧ…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಚಿವರಾದ ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ, ಬೈರತಿ ಸುರೇಶ್, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಹಿರಿಯ ಕಾಂಗ್ರೆಸ್ ಮುಖಂಡರೂ ಹರಿಯಾಣ ಉಸ್ತುವಾರಿ ಬಿ.ಕೆ.ಹರಿಪ್ರಸಾದ್ ಮತ್ತು ಕಾನೂನು ಸಲಹೆಗಾರರಾದ ಪೊನ್ನಣ್ಣ ಸೇರಿ ಹಲವು ಪ್ರಮುಖರ ಜೊತೆಗೆ ದೆಹಲಿಯ ಕನ್ನಡ ಭವನದಲ್ಲಿ ಬೆಳಗಿನ ಉಪಹಾರ ಸವಿದರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಚಿವರಾದ ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ, ಬೈರತಿ…

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಚಿವರಾದ ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ, ಬೈರತಿ ಸುರೇಶ್, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಹಿರಿಯ ಕಾಂಗ್ರೆಸ್ ಮುಖಂಡರೂ ಹರಿಯಾಣ ಉಸ್ತುವಾರಿ ಬಿ.ಕೆ.ಹರಿಪ್ರಸಾದ್ ಮತ್ತು ಕಾನೂನು ಸಲಹೆಗಾರರಾದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯ AICC ಕಚೇರಿಯ ಇಂದಿರಾ ಭವನದಲ್ಲಿ AICC ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯ AICC ಕಚೇರಿಯ ಇಂದಿರಾ ಭವನದಲ್ಲಿ AICC…

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯ AICC ಕಚೇರಿಯ ಇಂದಿರಾ ಭವನದಲ್ಲಿ AICC ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿ ಮಾತುಕತೆ…

Leave a Reply

Your email address will not be published. Required fields are marked *