ದೇವಾಲಯದಲ್ಲಿ ಕಳುವು…4 ಕೆ.ಜಿ ಬೆಳ್ಳಿ ಹಾಗೂ ನಗದು ದೋಚಿದ ಖದೀಮರು…
- CrimeMysore
- June 20, 2023
- No Comment
- 75
ಹೆಚ್.ಡಿ.ಕೋಟೆ,ಜೂ20,Tv10 ಕನ್ನಡ
ಹೆಚ್.ಡಿ.ಕೋಟೆ ತಾಲೂಕು ನಾಯಕನಹುಂಡಿ ಗ್ರಾಮದಲ್ಲಿರುವ ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಕಳ್ಳತನವಾಗಿದೆ.ಬೀಗ ಮುರಿದು ಪ್ರವೇಶಿಸಿರು ಖದೀಮರಯ ದೇವಸ್ಥಾನದ ಪೆಟ್ಟಿಗೆಯನ್ನ ಮುರಿದು ಸುಮಾರು 4 ಕೆ.ಜಿ.ಬೆಳ್ಳಿ ಪದಾರ್ಥ ಹಾಗೂ ಹುಂಡಿಯಲ್ಲಿದ್ದ 90 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.ಸೋಮವಾರದಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.ಹುಂಡಿಯಲ್ಲಿ ಸಾಕಷ್ಟು ಹಣ ಸಂಗ್ರಹವಾಗಿತ್ತು.ಮೂಲ ವಿಗ್ರಹವನ್ನೂ ಸಹ ಕಿತ್ತಿರುವ ಕಳ್ಳರು ನಿಧಿಗಾಗಿ ಶೋಧನೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳರ ಪತ್ತೆಗೆ ಜಾಲ ಬೀಸಲಾಗಿದೆ..