ನಂಜನಗೂಡು ರಸ್ತೆ ಟೋಲ್ ಪ್ಲಾಜಾ ಸ್ಥಳಾಂತರಿಸುವಂತೆ ರೈತಸಂಘ ಆಗ್ರಹ…ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ವರಿಷ್ಠಾಧಿಕಾರಿಗೆ ಮನವಿ…
- MysoreTV10 Kannada Exclusive
- June 21, 2023
- No Comment
- 104

ನಂಜನಗೂಡು ರಸ್ತೆ ಟೋಲ್ ಪ್ಲಾಜಾ ಸ್ಥಳಾಂತರಿಸುವಂತೆ ರೈತಸಂಘ ಆಗ್ರಹ…ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ವರಿಷ್ಠಾಧಿಕಾರಿಗೆ ಮನವಿ…
ಮೈಸೂರು,ಜೂ21,Tv10 ಕನ್ನಡ
ಮೈಸೂರು-ನಂಜನಗೂಡು ನ್ಯಾಷನಲ್ ಹೈವೇ ಕೆ.ಎನ್.ಹುಂಡಿ ಬಳಿ ಇರುವ ಟೋಲ್ ಪ್ಲಾಜಾ ವನ್ನ ಸ್ಥಳಾಂತರಿಸುವಂತೆ ಹಾಗೂ ಇಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ರೈತ ಪರ್ವ ಸಂಘಟನೆ ವತಿಯಿಂದ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.ಹೆಸರಿಗೆ ನ್ಯಾಷನಲ್ ಹೈವೇ ಎನಿಸಿಕೊಂಡರೂ ನಿಯಮಾನುಸಾರ ವಾಹನ ಸವಾರರಿಗೆ ನೀಡಬೇಕಾದ ಸೌಲಭ್ಯ ಕಲ್ಪಿಸದೆ ಟೋಲ್ ಸಂಗ್ರಹ ಮಾಡುತ್ತಿದ್ದಾರೆಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.ಹೈವೇ ರಸ್ತೆ ತನ್ನ ಗುಣಮಟ್ಟ ಕಳೆದುಕೊಂಡಿದೆ ಈ ಹಿನ್ನಲೆ ಕೂಡಲೇ ಸಂಭಂಧ ಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ…