ಬೈಕ್ ಟಿಪ್ಪರ್ ನಡುವೆ ಅಪಘಾತ…ದಿ. ಪಾರ್ವತಮ್ಮ ರಾಜ್ಕುಮಾರ್ ತಮ್ಮನ ಪುತ್ರ ನಟ ಸೂರಜ್ ಗೆ ಗಾಯ…
- CrimeMysore
- June 25, 2023
- No Comment
- 93
ನಂಜನಗೂಡು,ಜೂ25,Tv10 ಕನ್ನಡ
ಬೈಕ್ ಹಾಗೂ ಟಿಪ್ಪರ್ ಅಪಘಾತದಲ್ಲಿ ದಿ.ಪಾರ್ವತಮ್ಮ ರಾಜ್ ಕುಮಾರ್ ರವರ ಸಹೋದರನ ಪುತ್ರ ಸೂರಜ್ ಗೆ ಗಂಭೀರ ಗಾಯವಾಗಿದೆ. ಸೂರಜ್ ಬಲಗಾಲನ್ನು ವೈದ್ಯರು ತೆಗೆದಿದ್ದಾರೆ ಎಂದು ಹೇಳಲಾಗಿದೆ.ಬೈಕ್ ನಲ್ಲಿ ಊಟಿಗೆ ತೆರಳುತ್ತಿದ್ದಾಗ ಮೈಸೂರು ನಂಜನಗೂಡು ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಹಿರಿಕಾಟಿ ಗೇಟ್ ಬಳಿ ಅಪಘಾತ ಸಂಭವಿಸಿದೆ.ಸದ್ಯ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸೂರಜ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೂರಜ್ ಬಲಗಾಲಿನ ಮಂಡಿಯವರೆಗೆ ಕಾಲನ್ನು ವೈದ್ಯರು ಕತ್ತರಿಸಿ ತೆಗೆದಿದ್ದಾರೆ ಎನ್ನಲಾಗಿದೆ.ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ…