ಗಾಳಿಪಟ ಹಾರಿಸಿ ಸಂಭ್ರಮಿಸಿದ ಶಾಸಕ ಶ್ರೀವತ್ಸ…ಆರ್ಯವೈಶ್ಯ ಸಮುದಾಯದ ಕೈಟ್ ಫೆಸ್ಟಿವಲ್ ನಲ್ಲಿ ಭಾಗಿ…
- MysoreTV10 Kannada Exclusive
- July 30, 2023
- No Comment
- 66
ಮೈಸೂರು,ಜು30,Tv10 ಕನ್ನಡ
ರಾಜಕೀಯ ಜಂಜಾಟವನ್ನ ಮರೆತ ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ಇಂದು ಬಾಲ್ಯದ ದಿನಗಳನ್ನ ನೆನೆದು ಸವಿದರು.ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರ್ಯವೈಶ್ಯ ಸಮುದಾಯದ ಗಾಳಿಪಟದ ಹಬ್ಬದಲ್ಲಿ ಭಾಗಿಯಾಗುವ ಮೂಲಕ ತಮ್ಮ ಬಾಲ್ಯದ ದಿನಗಳನ್ನ ನೆನೆದರು.ಚಿಣ್ಣರಂತೆ ಗಾಳಿಪಟ ಹಾರಿಸಿ ಸಂಭ್ರಮಿಸಿದರು.
ಆರ್ಯವೈಶ್ಯ ಸಮುದಾಯದವರು ಹಮ್ಮಿಕೊಂಡಿದ್ದ ಗಾಳಿಪಟ ಹಬ್ಬ ಹಾಗೂ ಸಂತೋಷ ಕೂಟದಲ್ಲಿ ಭಾಗಿಯಾಗಿದ್ದರು.ರಾಜಕೀಯ ಒತ್ತಡಗಳನ್ನ ಬದಿಗಿಟ್ಟು ಗಾಳಿಪಟ ಹಾರಿಸಿ ಖುಷಿಪಟ್ಟರು.ಸಂತೋಷಕೂಟದ ಹಿನ್ನಲೆ ಆಯೋಜಿಸಲಾಗಿದ್ದ ಪೊಲೀಸ್ ಬ್ಯಾಂಡ್ ನ ಸಂಗೀತಕ್ಕೆ ಮನಸೋತರು.ಚಿಣ್ಣರು,ಹಿರಿಯರು ಹಾರಿಸಿದ ಗಾಳಿಪಟಗಳನ್ನ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.ಬಾನಂಗಳದಲ್ಲಿ ನೂರಾರು ಗಾಳಿಪಟಗಳು ಹಾರಾಡಿದವು…