ಬುದ್ದಿಮಾಂದ್ಯಳ ಮೇಲೆ ಅತ್ಯಾಚಾರ…ಆರೋಪಿ ಪರಾರಿ…
- Mysore
- July 31, 2023
- No Comment
- 57
ನಂಜನಗೂಡು,ಜು31,Tv10 ಕನ್ನಡ
ಮನೆಯಲ್ಲಿ ಒಂಟಿಯಾಗಿದ್ದ ಬುದ್ದಿಮಾಂದ್ಯಳ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿದ ಘಟನೆ ನಂಜನಗೂಡು ತಾಲೂಕಿನ ಮಾಡ್ರಳ್ಳಿ ಗ್ರಾಮದಲ್ಲಿ ನಡೆದಿದೆ.ಕೃತ್ಯವೆಸಗಿದ ಆರೋಪಿ ಗಿರೀಶ್ ಎಂಬಾತ ಪರಾರಿಯಾಗಿದ್ದಾನೆ.ನೊಂದ ಬುದ್ದಿಮಾಂದ್ಯಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.ತಂದೆ ಇಲ್ಲದ ಬುದ್ದಿಮಾಂದ್ಯಳನ್ನ ತಾಯಿ ಆಶ್ರಯದಲ್ಲಿ ಬೆಳೆಯುತ್ತಿದ್ದಾಳೆ.ತಸಯಿ ಕೂಲಿ ಕೆಲಸಕ್ಕೆ ತೆರಳಿದ ಸಂಧರ್ಭ ನೋಡಿದ ಗಿರೀಶ್ ಮನೆಗೆ ನುಗ್ಗಿ ಅತ್ಯಾಚಾರ ಮಾಡಿದ್ದಾನೆ.ಕೆಲಸಕ್ಕೆ ಹೋಗಿದ್ದ ತಾಯಿ ಮನೆಗೆ ಹಿಂದಿರುಗುವ ವೇಳೆ ಆರೋಪಿ ಗಿರೀಶ್ ಕೃತ್ಯವೆಸಗಿ ಪರಾರಿಯಾಗಿದ್ದಾನೆ.ಈ ಸಂಭಂಧ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿ ಗಿರೀಶ್ ಬಂಧನಕ್ಕೆ ಕವಲಂದೆ ಠಾಣಾ ಪೊಲೀಸರು ಜಾಲ ಬೀಸಿದ್ದಾರೆ…