ಶಾಲಾ ಬಾಲಕಿ ಅಪಹರಣ ಯತ್ನ…ಹುಲ್ಲಹಳ್ಳಿ ಠಾಣೆಯಲ್ಲಿ ದೂರು ದಾಖಲು…
- TV10 Kannada Exclusive
- August 19, 2023
- No Comment
- 210

ಶಾಲಾ ಬಾಲಕಿ ಅಪಹರಣ ಯತ್ನ…ಹುಲ್ಲಹಳ್ಳಿ ಠಾಣೆಯಲ್ಲಿ ದೂರು ದಾಖಲು…

ನಂಜನಗೂಡು,ಆ19,Tv10 ಕನ್ನಡ
ನಂಜನಗೂಡಿನ ಹುಲ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿ ಅಪಹರಣ ಯತ್ನ ನಡೆದಿದೆ. ಎರಡನೇ ತರಗತಿಯ ಅನುಷಾ ಎಂಬಾಕೆಯನ್ನ ಅಪಹರಿಸುವ ಯತ್ನ ನಡೆದಿದೆ. ಶೌಚಾಲಯಕ್ಕೆ ತೆರಳಿದ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಅಪಹರಿಸಲು ಯತ್ನಿಸಿದ್ದಾರೆ. ಬಾಲಕಿಯ ಬಾಯಿಗೆ ಬಟ್ಟೆ ತುರುಕಿ ಅಪಹರಿಸಲು ಯತ್ನಿಸಿದಾಗ ಕಿರುಚಾಡಿದ್ದಾಳೆ.ಅನುಷಾ ಕಿರುಚಾಡಿದ ಶಬ್ದಕ್ಕೆ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರುಗಳು ದೌಡಾಯಿಸಿದಾಗ ಬಾಲಕಿಯನ್ನ ದುಷ್ಕರ್ಮಿಗಳು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಘಟನೆಯನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆಯ ಹೋಬಳಿಯ ಅಧ್ಯಕ್ಷ ಜವರ ನಾಯಕ ಘಟನೆಯನ್ನ ಖಂಡಿಸಿದ್ದಾರೆ. ಶಾಲೆಯ ಹಿಂಭಾಗ ಕಾಂಪೌಂಡ್ ಸಂಪೂರ್ಣ ಶಿಥಿಲ ಗೊಂಡಿದ್ದು ಮತ್ತು ಅತಿ ಹೆಚ್ಚು ಮರ ಗಿಡಗಂಟೆಗಳು ಬೆಳೆದಿದ್ದು ವಿಧ್ಯಾರ್ಥಿಗಳಿಗೆ ರಕ್ಷಣೆ ಇಲ್ಲ ಎಂದು ಆರೋಪಿಸಿದ್ದಾರೆ. ಗಿಡಗಂಟೆಗಳನ್ನು ತೆರೆವುಗೊಳಿಸಿ ಕಾಂಪೌಂಡ್ ನಿರ್ಮಿಸಲು ಒತ್ತಾಯಿಸಿದ್ದಾರೆ.ಈ ಸಂಭಂಧ ಶಾಲೆಯ ಮುಖ್ಯ ಶಿಕ್ಷಕರುಗಳು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ…