ಮೈಸೂರು: ಯುವಕನ ಕೊಲೆ…ತಂದೆಯ ಎದುರೇ ಚಾಕು ಹಾಕಿದ ಚೆಡ್ಡಿ ದೋಸ್ತಿಗಳು…
- CrimeMysore
- August 20, 2023
- No Comment
- 181

ಮೈಸೂರು,ಆ20,Tv10 ಕನ್ನಡ
ಕ್ಷುಲ್ಲಕ ಕಾರಣಕ್ಕೆ ಮೈಸೂರಿನಲ್ಲಿ ಯುವಕನ ಕೊಲೆಯಾಗಿದೆ.ಮೈಸೂರಿನ
ವಿದ್ಯಾನಗರ ಬಡಾವಣೆಯ ನಾಲ್ಕನೇ ಕ್ರಾಸ್ನಲ್ಲಿ ಘಟನೆ ನಡೆದಿದೆ.ಮೈಸೂರು ರೇಸ್ ಕೋರ್ಸ್ ಬುಕ್ಕಿಯ ಜೊತೆ ಕೆಲಸ ಮಾಡುತ್ತಿದ್ದ
ಬಾಲರಾಜ್ (28) ಕೊಲೆಯಾದ ದುರ್ದೈವಿ.ನಾಲ್ಕು ಜನರಿಂದ ಕೃತ್ಯ ನಡೆದಿದೆ.
ನಾಲ್ವರ ವಿರುದ್ದ ಎಫ್ ಐ ಅರ್ ದಾಖಲಾಗಿದೆ.
ತೇಜಸ್,ಸಂಜಯ್, ಕಿರಣ್,ಸಾಮ್ರಾಟ್, ವಿರುದ್ದ ಎಫ್ ಐ ಆರ್ ದಾಖಲಾಗಿದೆ.ಚಿಕ್ಕ ವಯಸ್ಸಿನಿಂದ ಮೃತ ಹಾಗೂ ಆರೋಪಿಗಳು ಸ್ನೇಹಿತರು.ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ.ಎಲ್ಲರೂ ಒಂದೇ ರಸ್ತೆ ನಿವಾಸಿಗಳು.ಕ್ಷುಲ್ಲಕ ಕಾರಣಕ್ಕೆ ಬಾಲರಾಜ್ ಮನೆ ಮುಂದೆ ಬಂದು ಕ್ಯಾತೆ ತೆಗೆದಿದ್ದಾರೆ.ಮಾತಿನ ಚಕಮಕಿ ನಡೆಯುತ್ತಿದ್ದ ವೇಳೆ ಮೃತನ ತಂದೆ ಜಗಳ ಬಿಡಿಸಲು ಯತ್ನಿಸಿದ್ದಾರೆ.ಈ ವೇಳೆ ಆರೋಪಿಗಳು ಚಾಕುವಿನಿಂದ ಇರಿದಿದ್ದಾರೆ.ಬಾಲರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…