
KRS:ಚಿರತೆ ಆಯ್ತು…ಇದೀಗ ನಾಯಿ ಹಾವಳಿ…15 ಪ್ರವಾಸಿಗರಿಗೆ ಕಚ್ಚಿದ ನಾಯಿ…
- TV10 Kannada Exclusive
- August 21, 2023
- No Comment
- 147

ಮಂಡ್ಯ : ಚಿರತೆ ಬಳಿಕ KRS ನಲ್ಲಿ

KRS:ಚಿರತೆ ಆಯ್ತು…ಇದೀಗ ನಾಯಿ ಹಾವಳಿ…15 ಪ್ರವಾಸಿಗರಿಗೆ ಕಚ್ಚಿದ ನಾಯಿ…
ಮಂಡ್ಯ,ಆ21,Tv10 ಕನ್ನಡ
ಕೆಲವು ದಿನಗಳ ಹಿಂದಷ್ಟೆ KRS ನಲ್ಲಿ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿದ್ದ ಕೆ.ಆರ್.ಎಸ್.ನಲ್ಲಿ ಇದೀಗ ನಾಯಿ ಹಾವಳಿ ಪ್ರವಾಸಿಗರನ್ನ ಬೆಚ್ಚಿ ಬೀಳಿಸಿದೆ.ಬೃಂದಾವನದ ಸೊಬಗು ನೊಡಲು ಬಂದ 15 ನಾಯಿ ಜನಕ್ಕೆ ಕಚ್ಚಿದೆ.
ನಿನ್ನೆ ರಾತ್ರಿ KRS ನ ಬೃಂದಾವನದಲ್ಲಿ ಘಟನೆ ನಡೆದಿದೆ.
ವೀಕೆಂಡ್ ಹಿನ್ನೆಲೆ ನಿನ್ನೆ KRS ಗೆ ಪ್ರವಾಸಿಗರ ದಂಡು ಹರಿದು ಬಂದಿತ್ತು.ಧ್ವನಿ ಬೆಳಕು ಕಾರಂಜಿಯನ್ನ ಪ್ರವಾಸಿಗರು ನೋಡುತ್ತಿದ್ದ ವೇಳೆ ನಾಯಿ
ಏಕಾ ಏಕಿ ನುಗ್ಗಿ
ಸುಮಾರು 15 ಜನರಿಗೆ ಕಡಿದಿದೆ.ನಾಯಿ ದಾಳಿಯಿಂದ ಪ್ರವಾಸಿಗರು ದಿಕ್ಕೆಟ್ಟು ಓಡಿದ್ದಾರೆ.ನಾಯಿ ಅವಂತಾರದಿಂದ ದಿಬ್ಬಂದಿಗಳು ಅರ್ಧಕ್ಕೆ ಪ್ರವಾಸಿಗರನ್ನ ಹೊರಕ್ಕೆ ಕಳಿಸಿದ್ದಾರೆ.ಚಿರತೆ ಆತಂಕದಿಂದ ಹೊರಬಂದ ಪ್ರವಾಸಿಗರಿಗೆ ನಾಯಿ ಕಾಟ ಶುರುವಾಗಿದೆ…