ಸ್ನೇಹಿತನ ಕೊಲೆ ಪ್ರಕರಣ…ಆರೋಪಿ ತಾಯಿ ಆತ್ಮಹತ್ಯೆ…ತಂದೆ ಹೃದಯಾಘಾತದಿಂದ ಸಾವು…
- Crime
- August 22, 2023
- No Comment
- 183

ಮೈಸೂರು,ಆ22,Tv10 ಕನ್ನಡ

ಚಾಕುವಿನಿಂದ ಇರಿದು ಸ್ನೇಹಿತನ ಕೊಲೆ ಮಾಡಿದ್ದ ಆರೋಪಿಯ ತಾಯಿ ಅವಮಾನ ತಾಳದೆ ಆತ್ಮಹತ್ಯೆ ಮಾಡಿಕೊಂಡರೆ ಜೈಲಿನಲ್ಲಿದ್ದ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ವಿದ್ಯಾನಗರದಲ್ಲಿ ಬಾಲರಾಜ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು.ಪ್ರಕರಣಕ್ಕೆ ಸಂಭಂಧಿಸಿದಂತೆ ತೇಜಸ್,ಸಂಜಯ್,ಕಿರಣ್,ಸಾಮ್ರಾಟ್ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿತ್ತು.ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ತೇಜಸ್ ತಾಯಿ ಇಂದ್ರಾಣಿ
ಆಘಾತದಿಂದ ಆತ್ಮಹತ್ಯೆ(35) ಮಾಡಿಕೊಂಡಿದ್ದಾರೆ.
ತೇಜಸ್ ತಾಯಿ ಇಂದ್ರಾಣಿ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡರೆ ಇಂದ್ರಾಣಿ ಪತಿ ಸಾಮ್ರಾಟ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಬಾಲರಾಜ್ ಕೊಲೆ ಪ್ರಕರಣದಲ್ಲಿ ಸಾಮ್ರಾಟ್ ಸಹ ಆರೋಪಿಯಾಗಿದ್ದರು.
ಸಾಮ್ರಾಟ್ ಮತ್ತೊಬ್ಬ ಆರೋಪಿ ತೇಜಸ್ ತಂದೆ ಆಗಿದ್ದಾರೆ.
ಸಾಮ್ರಾಟ್ಗೆ ಜೈಲಿನಲ್ಲಿ ಹೃದಯಾಘಾತ ಸಾವನ್ನಪ್ಪಿದ್ದಾರೆ.ನಜರಬಾದ್ ಹಾಗೂ
ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…