ಏಳು ದೇವರುಗಳ ಒಲಿಸಿಕೊಂಡ ದೇವಮಾನವ ಗುಡ್ಡಪ್ಪ ಸೂಸೈಡ್…ಲಕ್ಷಲಕ್ಷ ಸಾಲ ಕೊಟ್ಟ ಭಕ್ತರು ಅತಂತ್ರ…ಕಣ್ಣೀರಲ್ಲಿ ಮುಳುಗಿರುವ ಸಾಲ ಕೊಟ್ಟ ಭಕ್ತವೃಂದ…

  • Crime
  • August 29, 2023
  • No Comment
  • 429

ಏಳು ದೇವರುಗಳ ಒಲಿಸಿಕೊಂಡ ದೇವಮಾನವ ಗುಡ್ಡಪ್ಪ ಸೂಸೈಡ್…ಲಕ್ಷಲಕ್ಷ ಸಾಲ ಕೊಟ್ಟ ಭಕ್ತರು ಅತಂತ್ರ…ಕಣ್ಣೀರಲ್ಲಿ ಮುಳುಗಿರುವ ಸಾಲ ಕೊಟ್ಟ ಭಕ್ತವೃಂದ…

ಬನ್ನೂರು,ಆ29,Tv10 ಕನ್ನಡ

ದೇವರ ಹೆಸರಿನಲ್ಲಿ ಭಕ್ತರಿಗೆ ಲಕ್ಷಾಂತರ ಹಣಕ್ಕೆ ಪಂಗನಾಮ ಹಾಕಿ ರಾತ್ರೋರಾತ್ರಿ ಎಸ್ಕೇಪ್ ಆಗಿದ್ದ ಏಳುದೇವರ ಒಲಿಸಿಕೊಂಡಿದ್ದ ದೇವಮಾನವ ಗುಡ್ಡಪ್ಪ ಆತ್ಮಹತ್ಯೆಗೆ ಶರಣಾಗಿದ್ದಾನೆ.ಗುಡ್ಡಪ್ಪನ ಮಾತಿಗೆ ಮರುಳಾಗಿ ಲಕ್ಷಾಂತರ ಸಾಲ ಕೊಟ್ಟ ಭಕ್ತರು ಅತಂತ್ರಕ್ಕೆ ಸಿಲುಕಿದ್ದಾರೆ. ಲಕ್ಷಾಂತರ ಹಣಕ್ಕೆ ಉಂಡೆನಾಮ ಹಾಕಿಸಿಕೊಂಡ ಭಕ್ತರು ಕಣ್ಣೀರಿನಲ್ಲಿ ಮುಳುಗಿದ್ದಾರೆ.

ಬನ್ನೂರಿನ ರಂಗಸಮುದ್ರದ ರಾಜಾಪರಮೇಶ್ವರಿ ನಾಲೆ ದಂಡೆಯಲ್ಲಿ ನಿರ್ಮಿಸಲಾದ ಜಲ್ ಜಲ್ ಶಾಂತಿ ಮಾದಪ್ಪ ದೇವಸ್ಥಾನದ ಗುಡ್ಡಪ್ಪ ವಿಜಯ್ ಕುಮಾರ್ ಆತ್ಮಹತ್ಯೆಗೆ ಶರಣಾದವರು.ಜಲ್ ಜಲ್ ಮಾದಪ್ಪ,ಗಂಗಾಮಾತೆ,ಗಿರಿಜಾಮಾತೆ,ಲಕ್ಷ್ಮೀದೇವಿ,ಕರಿಮಾರಮ್ಮ,ಬೆಟ್ಟಳ್ಳಿ ಮಾರಮ್ಮ ಹಾಗೂ ಮುನೇಶ್ವರ ದೇವರುಗಳು ಒಂದೇ ದಿನ ಗುಡ್ಡಪ್ಪನ ಮೈಮೇಲೆ ಬರುತ್ತಿತ್ತು.ಈ ವೇಳೆ ಭಕ್ತರಿಗೆ ಹಣ ನೀಡುವಂತೆ ಆಜ್ಞೆ ಮಾಡುತ್ತಿದ್ದ.ಅಲ್ಲದೆ ದೇವಸ್ಥಾನದಲ್ಲಿ ಹುತ್ತ ನಿರ್ಮಿಸಿ ನಿಧಿ ಇರುವುದಾಗಿ ಆಸೆ ಹುಟ್ಟಿಸಿ ಭಕ್ತರಿಂದ ಲಕ್ಷಾಂತರ ಹಣ ಸಾಲ ಪಡೆದಿದ್ದ.ಸರ್ಕಾರದ ಗಮನಕ್ಕೆ ಹೋದ್ರೆ ನಿಧಿಯನ್ನ ವಶಪಡಿಸಿಕೊಳ್ಳುತ್ತೆ ಎಂಬ ಸಬೂಬು ಹೇಳಿ ಹಣ ಹಿಂದಿರುಗಿಸದೆ ಸತಾಯಿಸುತ್ತಿದ್ದ.ಲಕ್ಷ ಲಕ್ಷಗಳಲ್ಲಿ ಹಣ ಕೊಟ್ಟ ಭಕ್ತರಾದ ಮಹದೇವಮ್ಮ,ಶಿವಮ್ಮ,ಜಯಮ್ಮ,ವಡ್ಗಲ್ಲೇಗೌಡ,ನಾರಾಯಣ,ಅಶ್ವಿನಿ,ಆನಂದ್,ಸುನಂದ,ಮೋಹನ್ ಲಾಲ್ ಎಂಬುವರು ಪೊಲೀಸರ ಮೊರೆ ಹೋಗಿದ್ದರು.ಪೊಲೀಸರ ವಿಚಾರಣೆ ಹಾಗೂ ಸಾಲಗಾರ ಭಕ್ತರ ಒತ್ತಡಕ್ಕೆ ಹೆದರಿದ ಗುಡ್ಡಪ್ಪ ವಿಜಯ್ ಕುಮಾರ್ ಕಳೆದ ವರ್ಷ ನಾಪತ್ತೆಯಾದ. ಗುಡ್ಡಪ್ಪನ ಪತ್ತೆಗಾಗಿ ಭಕ್ತರು ಹುಡುಕಾಟದಲ್ಲಿದ್ದಾಗಲೇ ಶಾಕಿಂಗ್ ನ್ಯೂಸ್ ತಲುಪಿದೆ.ಮಂಡ್ಯದ ಹೊಸೂರುಕಾಲೋನಿ ಹಳ್ಳಿಯ ತೋಟದ ಮನೆಯೊಂದರಲ್ಲಿ ಗುಡ್ಡಪ್ಪ ವಿಜಯ್ ಕುಮಾರ್ ನೇಣಿಗೆ ಶರಣಾಗಿದ್ದಾನೆ.ರಂಗಸಮುದ್ರದಿಂದ ನಾಪತ್ತೆಯಾದ ಏಳುದೇವರ ಒಲಿಸಿಕೊಂಡ ಗುಡ್ಡಪ್ಪ ವಿಜಯ್ ಕುಮಾರ್ ಖಾಸಗಿ ವ್ಯಕ್ತಿಯೊಬ್ಬರ ತೋಟದ ಮನೆ ಸೇರಿಕೊಂಡು ಹಸುಗಳನ್ನ ಸಾಕುತ್ತಾ ತೋಟದ ನಿರ್ವಹಣೆಯಲ್ಲಿ ಮುಳುಗಿದ್ದ.ಜುಲೈ 13 ರಂದು ವಿಜಯ್ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾನೆ.ನಿಧಿ ಆಸೆಗೆ ಲಕ್ಷಾಂತರ ಹಣ ನೀಡಿ ವಂಚನೆಗೆ ಒಳಗಾದ ಭಕ್ತರು ಕಣ್ಣೀರಿನಲ್ಲಿ ಮುಳುಗಿದ್ದಾರೆ.ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಜಲ್ ಜಲ್ ಶಾಂತಿ ಮಾದಪ್ಪ ದೇವಾಲಯವೂ ಅನಾಥವಾಗಿದೆ.ಹಣ ಕಳೆದುಕೊಂಡು ಕಣ್ಣೀರಿನಲ್ಲಿ ಮುಳುಗಿರುವ ಭಕ್ತರ ಪರಿಸ್ಥಿತಿ ಶೋಚನೀಯವಾಗಿದೆ…

Spread the love

Related post

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ… ಮೈಸೂರು,ಜು13,Tv10 ಕನ್ನಡ ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಜಾನ್ಸನ್…
ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ… ಮೈಸೂರು,ಜುಲೈ11,Tv10 ಕನ್ನಡ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ…
ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ…

ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ…

ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ… ಮಂಡ್ಯ,ಆ7,Tv10 ಕನ್ನಡ ಸಕ್ಕರೆನಾಡು ಮಂಡ್ಯದಲ್ಲಿ ಮತ್ತೊಂದು ಕೊಲೆಯಾಗಿದೆ.ಕೆ ಆರ್ ಎಸ್ ನಲ್ಲಿ ಮಲಗಿದ್ದ ವ್ಯಕ್ತಿ ತಲೆ…

Leave a Reply

Your email address will not be published. Required fields are marked *