8 ತಿಂಗಳ ಗರ್ಭಿಣಿಯ ಕುತ್ತಿಗೆ ಕೊಯ್ದು ಕೊಂದ ಪಾಪಿ ಗಂಡ…ಹಣಕ್ಕಾಗಿ ಪೀಡಿಸಿ ಕೊಲೆ…ಹೆತ್ತ ತಾಯಿ ಮುಂದೆ ದಾರುಣ ಹತ್ಯೆ…

8 ತಿಂಗಳ ಗರ್ಭಿಣಿಯ ಕುತ್ತಿಗೆ ಕೊಯ್ದು ಕೊಂದ ಪಾಪಿ ಗಂಡ…ಹಣಕ್ಕಾಗಿ ಪೀಡಿಸಿ ಕೊಲೆ…ಹೆತ್ತ ತಾಯಿ ಮುಂದೆ ದಾರುಣ ಹತ್ಯೆ…

ನಂಜನಗೂಡು,ಸೆ14,Tv10 ಕನ್ನಡ

ಹಣಕ್ಕಾಗಿ ಪೀಡಿಸುತ್ತಿದ್ದ ಪತಿರಾಯ 8 ತಿಂಗಳ ಗರ್ಭಿಣಿಯಾಗಿದ್ದ ಪತ್ನಿಯ ಕುತ್ತಿಗೆಯನ್ನ ಬ್ಲೇಡ್ ನಿಂದ ಕೊಯ್ದು ಕೊಂದ ಘಟನೆ ನಂಜನಗೂಡು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮಲಾಪುರ ಹುಂಡಿಯಲ್ಲಿ ನಡೆದಿದೆ.ಹೆತ್ತ ತಾಯಿ ಮುಂದೆ ದಾರುಣವಾಗಿ ಕೊಂದ ಪಾಪಿ ಗಂಡನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಶೋಭಾ(26) ಮೃತ ದುರ್ದೈವಿ. ದಾರುಣವಾಗಿ ಹತ್ಯೆ ಮಾಡಿ ಪೊಲೀಸರ ಅತಿಥಿಯಾದ ಪತಿರಾಯ ಮಂಜು(27)
8 ವರ್ಷಗಳ ಹಿಂದೆ ಶೋಭಾ ಹಾಗೂ ಮಂಜು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು.ಒಂದು ಮಗುವಿನ ತಾಯಿ ಆಗಿದ್ದ ಶೋಭಾ ಎರಡನೇ ಮಗುವಿಗೆ 8 ತಿಂಗಳ ಗರ್ಭಿಣಿಯಾಗಿದ್ದರು.ಮದುವೆಯಾದ ಪ್ರಾರಂಭದಲ್ಲಿ ಶೋಭಾಳನ್ನ ಮಂಜು ಚೆನ್ನಾಗಿ ನೋಡಿಕೊಂಡಿದ್ದ.ನಂತರದ ದಿನಗಳಲ್ಲಿ ಹಣದ ವ್ಯಾಮೋಹಕ್ಕೆ ಬಿದ್ದ ಮಂಜು ಪತ್ನಿಗೆ ಕಿರುಕುಳ ನೀಡುತ್ತಿದ್ದ.ಆಗಾಗ ಪತ್ನಿಯನ್ನ ತವರು ಮನೆಗೆ ಕಳುಹಿಸಿ ಹಣ ತರಿಸಿಕೊಳ್ಳುತ್ತಿದ್ದ.5 ವರ್ಷಗಳ ಹಿಂದೆ ಪತಿಯನ್ನ ಕಳೆದುಕೊಂಡ ಶೋಭಾಳ ತಾಯಿ ಪದ್ಮಾ ಗೆ ವಿಮೆ ಹಣ ಬಂದಿತ್ತು.ಆ ಹಣದ ಮೇಲೆ ಕಣ್ಣು ಹಾಕಿದ ಮಂಜು 3 ಲಕ್ಷ ಪೀಕಿದ್ದ.ಹೀಗಿದ್ದೂ ಹಣದ ದಾಹ ತೀರಿರಲಿಲ್ಲ.

ತುಂಬು ಗರ್ಭಿಣಿಯಾಗಿದ್ದ ಶೋಭಾಳನ್ನ ಹೆರಿಗೆಗಾಗಿ ತಾಯಿ ಪದ್ಮ ಮನೆಗೆ ಕರೆತಂದಿದ್ದರು.ಇಂದು ಬೆಳಿಗ್ಗೆ ಮನೆಗೆ ಬಂದ ಮಂಜು ತಾಯಿ ಪದ್ಮಾ ಹಾಗೂ ನೆರೆಹೊರೆ ಜನರ ಮುಂದೆ ಹಣಕ್ಕಾಗಿ ಕ್ಯಾತೆ ತೆಗೆದಿದ್ದಾನೆ.ದುಡ್ಡು ತಗೊಂಡು ಬಾ ಅಂದ್ರೆ ಇಲ್ಲೇ ಇದ್ಯಾ ಎಂದು ಕೂಗಾಡಿ ತುಂಬು ಗರ್ಭಿಣಿಯನ್ನ ಎಳೆದಾಡಿ ತಾಯಿ ಪದ್ಮ ಮುಂದೆಯೇ ಬ್ಲೇಡ್ ನಿಂದ ಕುತ್ತಿಗೆ ಕುಯ್ದಿದ್ದಾನೆ.ತೀವ್ರ ರಕ್ತಸ್ರಾವದಿಂದ ಬಳಲಿದ ಶೊಭಾಳನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.ಚಿಕಿತ್ಸೆ ಫಲಕಾರಿಯಾಗದೆ 8 ತಿಂಗಳ ಗರ್ಭಿಣಿ ಶೋಭಾ ಮೃತಪಟ್ಟಿದ್ದಾರೆ. ಕೃತ್ಯವೆಸಗಿದ ಆರೋಪಿ ಮಂಜುವನ್ನ ನಂಜನಗೂಡು ಟೌನ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ…

Spread the love

Related post

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ… ಮೈಸೂರು,ಜು13,Tv10 ಕನ್ನಡ ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಜಾನ್ಸನ್…
ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ… ಮೈಸೂರು,ಜುಲೈ11,Tv10 ಕನ್ನಡ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ…
ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ…

ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ…

ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ… ಮಂಡ್ಯ,ಆ7,Tv10 ಕನ್ನಡ ಸಕ್ಕರೆನಾಡು ಮಂಡ್ಯದಲ್ಲಿ ಮತ್ತೊಂದು ಕೊಲೆಯಾಗಿದೆ.ಕೆ ಆರ್ ಎಸ್ ನಲ್ಲಿ ಮಲಗಿದ್ದ ವ್ಯಕ್ತಿ ತಲೆ…

Leave a Reply

Your email address will not be published. Required fields are marked *