8 ತಿಂಗಳ ಗರ್ಭಿಣಿಯ ಕುತ್ತಿಗೆ ಕೊಯ್ದು ಕೊಂದ ಪಾಪಿ ಗಂಡ…ಹಣಕ್ಕಾಗಿ ಪೀಡಿಸಿ ಕೊಲೆ…ಹೆತ್ತ ತಾಯಿ ಮುಂದೆ ದಾರುಣ ಹತ್ಯೆ…

8 ತಿಂಗಳ ಗರ್ಭಿಣಿಯ ಕುತ್ತಿಗೆ ಕೊಯ್ದು ಕೊಂದ ಪಾಪಿ ಗಂಡ…ಹಣಕ್ಕಾಗಿ ಪೀಡಿಸಿ ಕೊಲೆ…ಹೆತ್ತ ತಾಯಿ ಮುಂದೆ ದಾರುಣ ಹತ್ಯೆ…

ನಂಜನಗೂಡು,ಸೆ14,Tv10 ಕನ್ನಡ

ಹಣಕ್ಕಾಗಿ ಪೀಡಿಸುತ್ತಿದ್ದ ಪತಿರಾಯ 8 ತಿಂಗಳ ಗರ್ಭಿಣಿಯಾಗಿದ್ದ ಪತ್ನಿಯ ಕುತ್ತಿಗೆಯನ್ನ ಬ್ಲೇಡ್ ನಿಂದ ಕೊಯ್ದು ಕೊಂದ ಘಟನೆ ನಂಜನಗೂಡು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮಲಾಪುರ ಹುಂಡಿಯಲ್ಲಿ ನಡೆದಿದೆ.ಹೆತ್ತ ತಾಯಿ ಮುಂದೆ ದಾರುಣವಾಗಿ ಕೊಂದ ಪಾಪಿ ಗಂಡನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಶೋಭಾ(26) ಮೃತ ದುರ್ದೈವಿ. ದಾರುಣವಾಗಿ ಹತ್ಯೆ ಮಾಡಿ ಪೊಲೀಸರ ಅತಿಥಿಯಾದ ಪತಿರಾಯ ಮಂಜು(27)
8 ವರ್ಷಗಳ ಹಿಂದೆ ಶೋಭಾ ಹಾಗೂ ಮಂಜು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು.ಒಂದು ಮಗುವಿನ ತಾಯಿ ಆಗಿದ್ದ ಶೋಭಾ ಎರಡನೇ ಮಗುವಿಗೆ 8 ತಿಂಗಳ ಗರ್ಭಿಣಿಯಾಗಿದ್ದರು.ಮದುವೆಯಾದ ಪ್ರಾರಂಭದಲ್ಲಿ ಶೋಭಾಳನ್ನ ಮಂಜು ಚೆನ್ನಾಗಿ ನೋಡಿಕೊಂಡಿದ್ದ.ನಂತರದ ದಿನಗಳಲ್ಲಿ ಹಣದ ವ್ಯಾಮೋಹಕ್ಕೆ ಬಿದ್ದ ಮಂಜು ಪತ್ನಿಗೆ ಕಿರುಕುಳ ನೀಡುತ್ತಿದ್ದ.ಆಗಾಗ ಪತ್ನಿಯನ್ನ ತವರು ಮನೆಗೆ ಕಳುಹಿಸಿ ಹಣ ತರಿಸಿಕೊಳ್ಳುತ್ತಿದ್ದ.5 ವರ್ಷಗಳ ಹಿಂದೆ ಪತಿಯನ್ನ ಕಳೆದುಕೊಂಡ ಶೋಭಾಳ ತಾಯಿ ಪದ್ಮಾ ಗೆ ವಿಮೆ ಹಣ ಬಂದಿತ್ತು.ಆ ಹಣದ ಮೇಲೆ ಕಣ್ಣು ಹಾಕಿದ ಮಂಜು 3 ಲಕ್ಷ ಪೀಕಿದ್ದ.ಹೀಗಿದ್ದೂ ಹಣದ ದಾಹ ತೀರಿರಲಿಲ್ಲ.

ತುಂಬು ಗರ್ಭಿಣಿಯಾಗಿದ್ದ ಶೋಭಾಳನ್ನ ಹೆರಿಗೆಗಾಗಿ ತಾಯಿ ಪದ್ಮ ಮನೆಗೆ ಕರೆತಂದಿದ್ದರು.ಇಂದು ಬೆಳಿಗ್ಗೆ ಮನೆಗೆ ಬಂದ ಮಂಜು ತಾಯಿ ಪದ್ಮಾ ಹಾಗೂ ನೆರೆಹೊರೆ ಜನರ ಮುಂದೆ ಹಣಕ್ಕಾಗಿ ಕ್ಯಾತೆ ತೆಗೆದಿದ್ದಾನೆ.ದುಡ್ಡು ತಗೊಂಡು ಬಾ ಅಂದ್ರೆ ಇಲ್ಲೇ ಇದ್ಯಾ ಎಂದು ಕೂಗಾಡಿ ತುಂಬು ಗರ್ಭಿಣಿಯನ್ನ ಎಳೆದಾಡಿ ತಾಯಿ ಪದ್ಮ ಮುಂದೆಯೇ ಬ್ಲೇಡ್ ನಿಂದ ಕುತ್ತಿಗೆ ಕುಯ್ದಿದ್ದಾನೆ.ತೀವ್ರ ರಕ್ತಸ್ರಾವದಿಂದ ಬಳಲಿದ ಶೊಭಾಳನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.ಚಿಕಿತ್ಸೆ ಫಲಕಾರಿಯಾಗದೆ 8 ತಿಂಗಳ ಗರ್ಭಿಣಿ ಶೋಭಾ ಮೃತಪಟ್ಟಿದ್ದಾರೆ. ಕೃತ್ಯವೆಸಗಿದ ಆರೋಪಿ ಮಂಜುವನ್ನ ನಂಜನಗೂಡು ಟೌನ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು… ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *