ಮೈಸೂರು:ಗೌರಿ ಗಣೇಶ ಹಬ್ಬದಲ್ಲಿ ಭಾವೈಕ್ಯತೆ ಮೆರೆದ ಹಿಂದು- ಮುಸ್ಲಿಂ ಯುವಕರು…
- TV10 Kannada Exclusive
- September 18, 2023
- No Comment
- 329
ಮೈಸೂರು:ಗೌರಿ ಗಣೇಶ ಹಬ್ಬದಲ್ಲಿ ಭಾವೈಕ್ಯತೆ ಮೆರೆದ ಹಿಂದು- ಮುಸ್ಲಿಂ ಯುವಕರು…
ಮೈಸೂರು,ಸೆ18,Tv10 ಕನ್ನಡ
ಮೈಸೂರಿನ ಅಗ್ರಹಾರದಲ್ಲಿ ಗೌರಿಗಣೇಶ ಹಬ್ಬವನ್ನ ವಿಶೇಷವಾಗಿ ಆಚರಿಸಲಾಗಿದೆ.ಹಿಂದೂ ಮುಸ್ಲಿಂ ಯುವಕರು ಒಟ್ಟಾಗಿ ಸೇರಿ ಗೌರಿ ಗಣೇಶನ ಹಬ್ಬವನ್ನು ಆಚರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.ಕುಂದೂರು ಮಠದ ಬಳಿ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪಿಸಿ ಎರಡೂ ಸಮುದಾಯದವರು ಒಟ್ಟಾಗಿ ಸೇರಿ ಗೌರಿ ಗಣೇಶ ಹಬ್ಬವನ್ನ ಸಂಭ್ರಮದಿಂದ ಆಚರಿಸಿದ್ದಾರೆ.
ಕೆಲವೇ ದಿನಗಳಲ್ಲಿ ಈದ್ ಮಿಲಾದ್ ಹಬ್ಬ ಇರುವುದರಿಂದ ಪರಸ್ಪರ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.ಪರಸ್ಪರ ಸಿಹಿತಿನಿಸಿ ಹಿಂದೂ ಮುಸ್ಲಿಂ ಭಾಯಿ…ಭಾಯಿ.. ಎಂಬ ಸಂದೇಶವನ್ನು ರವಾನಿಸಿದ್ದಾರೆ.ಎರಡೂ ಸಮುದಾಯದ ಮುಖಂಡರು ಮಾತನಾಡಿ ಹಬ್ಬಗಳನ್ನು ಶಾಂತಿಯುತವಾಗಿ ಆಚರಣೆ ಮಾಡಿ ಸೌಹಾರ್ದತೆಯಿಂದ ಬಾಳುವಂತೆ ಕರೆ ನೀಡಿದ್ದಾರೆ.
ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್ , ಮೋಹನ್ ಕುಮಾರ್ ಗೌಡ,ಸಗೀರ್ ಅಹಮದ್, ಅಪ್ರೋಜ್ ಖಾನ್, ಸಾಹೇದ್ ಮುಗುದುಮ್, ನೂರ್ ಶರೀಫ್, ಸೈಯದ್ ಫಾಸಿಲ್, ಖಾಲಿದ್ ಅಹಮದ್, ನಾಗೇಂದ್ರ, ನಿಹಾಲ್, ಭುವನ್,ಪೈ.ವಿಶೃತ್.ಎಸ್,ಗೌಡ, ರಕ್ಷಿತ್, ಯಶಸ್.ಎಸ್.ಗೌಡ
ಹಾಗೂ ಇನ್ನಿತರರು ಸಂಭ್ರಮದಲ್ಲಿ ಭಾಗಿಯಾಗಿದ್ದರು…