![ಕರ್ನಾಟಕ್ ಬಂದ್…ತಮಿಳು ಸಂಘಟನೆಗಳ ಒಕ್ಕೂಟದಿಂದ ಬೆಂಬಲ…](https://tv10kannada.com/wp-content/uploads/2023/09/IMG-20230928-WA0004.jpg)
ಕರ್ನಾಟಕ್ ಬಂದ್…ತಮಿಳು ಸಂಘಟನೆಗಳ ಒಕ್ಕೂಟದಿಂದ ಬೆಂಬಲ…
- Politics
- September 28, 2023
- No Comment
- 469
ಮೈಸೂರು,ಸೆ28,Tv10 ಕನ್ನಡ
ನಾಳೆ ಕಾವೇರಿ ವಿಚಾರವಾಗಿ ಕರೆ ನೀಡಲಾಗಿರುವ ಕರ್ನಾಟಕ ಬಂದ್ ಗೆ
ಮೈಸೂರು ತಮಿಳು ಸಂಘಟನೆಗಳ ಒಕ್ಕೂಟದಿಂದ ಬೆಂಬಲ ಸೂಚಿಸಲಾಗಿದೆ.
ಒಕ್ಕೂಟದ ಅಧ್ಯಕ್ಷ ರಘುಪತಿ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ನಾವು ಕನ್ನಡ ನಾಡಿನ ನೆಲ ಜಲದ ವಿಚಾರವಾಗಿ ಸದಾ ಅವರ ಜೊತೆಯಿದ್ದೇವೆ.
ನಮ್ಮ ಬಳಿ ನೀರು ಇದ್ದಾಗ ನಾವು ನೀರು ಕೊಟ್ಟಿದ್ದೇವೆ.
ಈಗ ನಮ್ಮ ಬಳಿಯೇ ನೀರು ಇಲ್ಲ.ಈ ಪರಿಸ್ಥಿತಿಯಲ್ಲಿ ನೀರು ಕೊಡಲು ಸಾಧ್ಯವಿಲ್ಲ.
ಇದನ್ನು ತಮಿಳುನಾಡಿನಲ್ಲಿ ಇರುವವರು ಅರ್ಥ ಮಾಡಿಕೊಳ್ಳಬೇಕು.
ನಾವು ಹಿಂದಿನಿಂದಲೂ ಸದಾ ಕರ್ನಾಟಕದ ಪರ ಇರುತ್ತೇವೆ.
ಬರಗಾಲ ಬಂದಾಗ ಈ ರೀತಿ ಪರಿಸ್ಥಿತಿ ಬರುತ್ತದೆ.
ಇದಕ್ಕೆ ಶಾಶ್ವತವಾದ ಪರಿಹಾರ ಸರ್ಕಾರ ಕಂಡುಕೊಳ್ಳಬೇಕು.
ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಬಾಳಬೇಕು.
ತಮಿಳು ಸಂಘದ ಅಧ್ಯಕ್ಷ ರಘುಪತಿ ಮನವಿ ಮಾಡಿದ್ದಾರೆ…