ನಿವೃತ್ತ ಪೊಲೀಸ್ ಅಧಿಕಾರಿ ಕಟ್ಟಡದಲ್ಲಿ ವೇಶ್ಯಾವಟಿಕೆ…6 ಯುವತಿಯರ ರಕ್ಷಣೆ…
- Crime
- November 1, 2023
- No Comment
- 525

ಮೈಸೂರು,ನ1,Tv10 ಕನ್ನಡ

ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರಿಗೆ ಸೇರಿದ ಕಟ್ಟಡದಲ್ಲೇ ವೇಶ್ಯಾವಾಟಿಕೆ ಜಾಲ ಬಯಲಾದ ಘಟನೆ
ಮೈಸೂರು- ನರಸೀಪುರ ರಸ್ತೆಯ ಲಲಿತಮಹಲ್ ಬಳಿಯ ಮನೆಯೊಂದರಲ್ಲಿ ಬೆಳಕಿಗೆ ಬಂದಿದೆ.ಸಲೂನ್ ಮೇಲೆ
ಒಡನಾಡಿ ಸೇವಾ ಸಂಸ್ಥೆ ಹಾಗೂ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 6 ಯುವತಿಯರನ್ನ ರಕ್ಷಿಸಲಾಗಿದೆ.ಅಲ್ಲದೆ ಕಿಂಗ್ ಪಿನ್ ಎಂದು ಹೇಳಲಾದ ಬಾಣಲಿ ಮಹೇಶ್,ಹಾಗೂ ಮಧು ಮತ್ತು ಸುಧಾ ರನ್ನ ಪೊಲೀಸರು ಬಂಧಿಸಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ. ರಂಗಸ್ವಾಮಿ ಅವರಿಗೆ ಸೇರಿದ ವಾಸದ ಮನೆ ಮೇಲೆ ನಡೆಯುತ್ತಿದ್ದ ದಾನಿಯಾ ಸಲೂನ್ ನಲ್ಕಿ
ಕಳೆದ ಹಲವಾರು ತಿಂಗಳುಗಳಿಂದ ವೇಶ್ಯವಾಟಿಕೆ ದಂಧೆ ನಡೆಯುತ್ತಿ ಬಗ್ಗೆ ಬಂದ ಖಚಿತ ಮಾಹಿತಿ ಮೇಲೆ
ದಾಳಿ ನಡೆಸಲಾಗಿದೆ.ದಾಳಿ ವೇಳೆ ಇಬ್ಬರು ಗಿರಾಕಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಿರಾಕಿಯೊಬ್ಬರ ಜೊತೆ ಬಾಣಲಿ ಮಹೇಶ್ ಮಾತನಾಡಿರುವ ಆಡಿಯೋ ತುಣುಕು ಬಯಲಾಗಿದೆ.
ಇವತ್ತು ರೇಡ್ ಆಗುತ್ತೆ ಅಂತಾ ಮಾಲೀಕರು ಹೇಳಿದ್ದಾರೆ. ಹಾಗಾಗಿ ಸಲೂನ್ ಬಂದ್ ಮಾಡಿದ್ದೇವೆ ಎಂದು ಬಾಣಲಿ ಮಹೇಶ ಮಾತನಾಡಿದ್ದಾನೆ.
ಅಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…