ಅನ್ನದಾನ ವಿಚಾರದಲ್ಲಿ ಕಿರಿಕ್…ಪುರಸಭೆ ಸದಸ್ಯನಿಗೆ ಹಲ್ಲೆ…ಮೂವರ ವಿರುದ್ದ FIR ದಾಖಲು…
- Crime
- November 2, 2023
- No Comment
- 320

ಹುಣಸೂರು,ನ2,Tv10 ಕನ್ನಡ
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಅನ್ನದಾನ ಕಾರ್ಯಕ್ರಮದ ವಿಚಾರದಲ್ಲಿ ಕಿರಿಕ್ ತೆಗೆದ ಅಪ್ಪ ಮಕ್ಕಳು ಜಾತಿ ನಿಂದನೆ ಮಾಡಿ ಪುರಸಭಾ ಸದಸ್ಯನಿಗೆ ಹಲ್ಲೆ ನಡೆಸಿದ ಘಟನೆ ಹುಣಸೂರಿನಲ್ಲಿ ನಡೆದಿದೆ.ಪುರಸಭಾ ಸದಸ್ಯ ಮಂಜು ಮೇಲೆ ಹಲ್ಲೆ ನಡೆದಿದೆ.ಗಾಯಗೊಂಡ ಮಂಜು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಹಲ್ಲೆ ನಡೆಸಿದ ಕಾರು ಸ್ಟ್ಯಾಂಡ್ ಸಂಘಟನೆಯ ಅಧ್ಯಕ್ಷ ದೇವರಾಜ್ ಹಾಗೂ ಇವರ ಮಕ್ಕಳಾದ ರಾಕೇಶ್,ಶರತ್ ಮೇಲೆ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡ ರಾಜ್ಯೋತ್ಸವ ಹಿನ್ನಲೆ ಕಾರ್ ಸ್ಟ್ಯಾಂಡ್ ಸಂಘಟನೆಯಿಂದ ನವೆಂಬರ್ 1 ರಂದು ಸಾರ್ವಜನಿಕರಿಗೆ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಸಂಘಟನೆಯ ಉಪಾಧ್ಯಕ್ಷರಾದ ಮಂಜು ಅನ್ನದಾನ ಕಾರ್ಯಕ್ರಮಕ್ಕೆ ಸಿದ್ದತೆ ಮಾಡಿಕೊಂಡಿದ್ರು.ಈ ವೇಳೆ ಎಂಟ್ರಿ ಕೊಟ್ಟ ಅಧ್ಯಕ್ಷ ದೇವರಾಜ್ ಅನ್ನದಾನದ ವಿಚಾರದಲ್ಲಿ ಕಿರಿಕ್ ತೆಗೆದರು.ಜಾತಿ ವಿಚಾರ ಮುಂದಿಟ್ಟುಕೊಂಡು ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿತು.ಈ ವೇಳೆ ಸ್ಥಳಕ್ಕೆ ಬಂದ ದೇವರಾಜ್ ಮಕ್ಕಳಾದ ರಾಕೇಶ್ ಹಾಗೂ ಶರತ್ ಇಬ್ಬರು ಮಂಜು ಮೇಲೆ ಹಿಗ್ಗಾ ಮುಗ್ಗ ಹಲ್ಲೆ ನಡೆಸಿದ್ದಾರೆ.ಸ್ಥಳದಲ್ಲಿದ್ದ ಕೆಲವು ಮಂದಿ ಮಂಜು ನೆರವಿಗೆ ಬಂದಿದ್ದಾರೆ.ಗಾಯಗೊಂಡ ಮಂಜು ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ದೇವರಾಜ್,ರಾಕೇಶ್ ಹಾಗೂ ಶರತ್ ಮೇಲೆ ಹುಣಸೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ…