ಶ್ರೀರಂಗಪಟ್ಟಣ, ನ.07:- ತಾಲೂಕಿನ ಕೆ.ಆರ್.ಸಾಗರ ಗ್ರಾಮದ ಜನತಾ ಕಾಲೋನಿ ನಿವಾಸಿ ಚೆಲುವರಾಜು(೫೬) ತಾವು ಕೆಲಸ ಮಾಡುತ್ತಿದ್ದ ಹೊಸ ಹೊಳಲು ಗ್ರಾಮದ ಹಾಸ್ಟೆಲ್ ನಲ್ಲಿ ಮಲಗಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
- Uncategorized
- November 7, 2023
- No Comment
- 144
ಶ್ರೀರಂಗಪಟ್ಟಣ, ನ.07:- ತಾಲೂಕಿನ ಕೆ.ಆರ್.ಸಾಗರ ಗ್ರಾಮದ ಜನತಾ ಕಾಲೋನಿ ನಿವಾಸಿ ಚೆಲುವರಾಜು(೫೬) ತಾವು ಕೆಲಸ ಮಾಡುತ್ತಿದ್ದ ಹೊಸ ಹೊಳಲು ಗ್ರಾಮದ ಹಾಸ್ಟೆಲ್ ನಲ್ಲಿ ಮಲಗಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಮಂಗಳವಾರ ಬೆಳಗ್ಗೆ ಚೆಲುವರಾಜು ಎಂದಿನಂತೆ ತಾನು ಮಲಗಿದ್ದ ರೂಂ ನಿಂದ ಹೊರಗೆ ಬಾರದೆ ಇದ್ದ ಸಂದರ್ಭದಲ್ಲಿ ಸಹದ್ಯೋಗಿ ಹೋಗಿ ನೋಡಿದಾಗ ಮೃತರಾಗಿರುವುದು ಕಂಡು ಬಂದಿದೆ.
ಚೆಲುವರಾಜು ಪ್ರಸ್ತುತ ಕೆ.ಆರ್.ಪೇಟೆ ತಾಲ್ಲೋಕು ಹೊಸಹೊಳಲು ಗ್ರಾಮದಲ್ಲಿರುವ ಮೆಟ್ರಿಕ್ ನಂತರದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ನಲ್ಲಿ ವಾರ್ಡನ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಮೃತರು ತಂದೆ, ತಾಯಿ, ಪತ್ನಿ ಸಾಕಮ್ಮ , ಮೂವರು ಮಕ್ಕಳು ಸೇರದಿಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇಲಾಖೆ ಅಧಿಕಾರಿಗಳು ಸೇರಿದಂತ ಅನೇಕ ಗಣ್ಯರು, ಮುಖಂಡರು, ಗ್ರಾಮಸ್ಥರು ಮೃತರ ಅಂತಿಮ ದರ್ಶನ ಪಡೆದರು.
ಮೃತರ ಅಂತ್ಯಕ್ರಿಯೆ ಮಂಗಳವಾರ ಮದ್ಯಾಹ್ನ ಕೆ.ಆರ್.ಸಾಗರದ ಕಾವೇರಿ ನದಿ ತೀರದ ರುದ್ರಭೂಮಿಯಲ್ಲಿ ನಡೆಯಿತು.