ಮುಡಾ ಕಾರ್ಯದರ್ಶಿ ಸಹಿ ನಕಲು ಆರೋಪ…ಜಿಲ್ಲಾಧಿಕಾರಿಗೆ ದೂರು…
- TV10 Kannada Exclusive
- November 8, 2023
- No Comment
- 346

ಮೈಸೂರು,ನ5,Tv10 ಕನ್ನಡ
ವರ್ಗಾವಣೆಗೊಂಡ ಮುಡಾ ಕಾರ್ಯದರ್ಶಿ ಎಸ್.ಕುಸುಮಕುಮಾರಿ ರವರ ಸಹಿ ನಕಲು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.ಫೋರ್ಜರಿ ಮಾಡಿರುವ ಶಂಕಿತ ಇಬ್ಬರು ಮುಡಾ ಸಿಬ್ಬಂದಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಕುಸುಮ ಕುಮಾರಿ ಜಿಲ್ಲಾಧಿಕಾರಿಗಳಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕುಸುಮಕುಮಾರಿ ರವರನ್ನ ಸರ್ಕಾರ ವರ್ಗಾವಣೆ ಮಾಡಿದ್ದು ಇದೇ ಸ್ಥಳಕ್ಕೆ ಶೇಖರ್ ಜಿ.ಡಿ.ರವರನ್ನ ನಿಯುಕ್ತಿಗೊಳಿಸಲಾಗಿದೆ.ವರ್ಗಾವಣೆಯನ್ನ ಪ್ರಶ್ನಿಸಿ ಕುಸುಮಕುಮಾರಿ ರವರು ನ್ಯಾಯಾಲಯದ ಮೊರೆ ಹೋಗಿ ಆದೇಶಕ್ಕಾಗಿ ಕಾಯುತ್ತಿದ್ದಾರೆ.ಇಂತಹ ಸಂಧರ್ಭದಲ್ಲಿ ಪ್ರಾಧಿಕಾರದ ನೌಕರರಾದ ನಂದೀಶ್ ಹಾಗೂ ಗುರುದತ್ (out source) ರವರು ಡಿ.ಗ್ರೂಪ್ ನೌಕರ ರವಿ ಎಂಬಾತನ ಜೊತೆ ವಲಯ ಕಚೇರಿ 1 ರ ಮಹದೇವನಾಯಕ ಎಂಬವರ ಹೆಸರಿನ ಸರ್ವೆ ನಂ.96/96-A ದಾಖಲೆಗಳನ್ನ ಸಹಿ ಮಾಡುವಂತೆ ಕಳುಹಿಸಿದ್ದಾರೆ.ದಾಖಲೆಗಳಿಗೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಶೇಖರ್ ರವರ ಸಹಿ ಹಾಕಿಸಿಕೊಳ್ಳುವಂತೆ ತಿಳಿಸಿ ಕುಸುಮಕುಮಾರಿ ರವರು ತಿರಸ್ಕರಿಸಿ ವಾಪಸ್ ಕಳುಹಿಸಿರುತ್ತಾರೆ.ಹೀಗಿದ್ದೂ ದಾಖಲೆಗಳ ಮೇಲೆ ನನ್ನ ಸಹಿ ಮಾಡಲಾಗಿದೆ ಎಂದು ಆರೋಪಿಸಿರುವ ಕುಸುಮಕುಮಾರಿ ರವರು ನಂದೀಶ್ ಹಾಗೂ ಗುರುದತ್ ರವರ ವಿರುದ್ದ ದೂರು ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ…