ಭೂಮಿ ಕಳೆದುಕೊಂಡ ರೈತನಿಗೆ ಉದ್ಯೋಗ ನೀಡದ ಕಂಪನಿ…ಡೆತ್ ನೋಟ್ ಬರೆದು ಅನ್ನದಾತ ಆತ್ಮಹತ್ಯೆ…

  • Crime
  • November 20, 2023
  • No Comment
  • 653

ನಂಜನಗೂಡು,ನ20,Tv10 ಕನ್ನಡ

KIADB ಗೆ ಭೂಮಿ ನೀಡಿದ ರೈತನಿಗೆ ಕೊಟ್ಟ ಮಾತಿನಂತೆ ಉದ್ಯೋಗ ನೀಡದ ಖಾಸಗಿ ಕಂಪನಿ ವಂಚಿಸಿದ ಆರೋಪದ ಹಿನ್ನಲೆ ಅನ್ನದಾತ ಡೆತ್ ನೋಟ್ ಬರೆದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಂಜನಗೂಡು ತಾಲೂಕು ಅಡಕನಹಳ್ಳಿ ಗ್ರಾಮದಲ್ಲಿ ನಡೆದಿದೆ.ಕಂಪನಿ ಅಧಿಕಾರಿಗಳ ದುಂಡಾವರ್ತನೆಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ ರೈತ ಸಿದ್ದರಾಜು(28).

ಸರ್ವೆ ನಂ 96/1 ರಲ್ಲಿ ಸಿದ್ದರಾಜು ಕುಟುಂಬಕ್ಕೆ ಸೇರಿದ ಜಮೀನುಗಳನ್ನ KIADB ಸ್ವಾಧೀನಪಡಿಸಿಕೊಂಡಿದೆ.ಈ ವೇಳೆ ಭೂಮಿ ನೀಡಿದ ಕುಟುಂಬದವರಿಗೆ ಉದ್ಯೋಗ ನೀಡುವ ಭರವಸೆ ನೀಡಿತ್ತು.ಸಿದ್ದರಾಜು ರವರ ಜಮೀನಿನಲ್ಲಿ ಪಾರ್ಲೆ ಆಗ್ರೋ ಪ್ರೈ.ಲಿ.ಕಂಪನಿ ತಲೆ ನಿರ್ಮಾಣವಾಗಿದೆ.ಕೊಟ್ಟ ಮಾತಿನಂ ಪಾರ್ಲೆ ಆಗ್ರೋ ಪ್ರೈ.ಲಿ.ನಲ್ಲಿ ಸಿದ್ದರಾಜು ಗೆ ಖಾಯಂ ಉದ್ಯೋಗ ದೊರೆತಿಲ್ಲ.ಕಳೆದ 4 ವರ್ಷಗಳಿಂದ ಉದ್ಯೋಗಕ್ಕಾಗಿ ಸಿದ್ದರಾಜು ಅಲೆದಾಡಿದ್ದಾರೆ.KIADB ಸಂಸ್ಥೆ ಅಧಿಕಾರಿಗಳು ಸಹ ಕಂಪನಿ ಮುಖ್ಯಸ್ಥರಿಗೆ ಉದ್ಯೋಗ ನೀಡುವಂತೆ ಆದೇಶಿಸಿದ್ದಾರೆ.ಹೀಗಿದ್ದರೂ ಸಿದ್ದರಾಜು ಗೆ ಉದ್ಯೋಗ ಲಭಿಸಿಲ್ಲ.ಈ ಮಧ್ಯೆ ಉದ್ಯೋಗಕ್ಕಾಗಿ ಸಾಕಷ್ಟು ಭಾರಿ ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.ಯಾವುದಕ್ಕೂ ಜಗ್ಗದ ಕಾರ್ಖಾನೆ ಮುಖ್ಯಸ್ಥರು ಸಿದ್ದರಾಜು ಮನವಿಯನ್ನ ತಿರಸ್ಕರಿಸಿದ್ದಾರೆ.ಇದರಿಂದ ಬೇಸತ್ತ ಸಿದ್ದರಾಜು ನಿನ್ನೆ ಕುಟುಂದವರೆಲ್ಲಾ ಮಹದೇಶ್ವರನ ಬೆಟ್ಟಕ್ಕೆ ತೆರಳಿದ ವೇಳೆ ಡೆತ್ ನೋಟ್ ಬರೆದು ಮನೆಯಲ್ಲೇ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಡೆತ್ ನೋಟ್ ನಲ್ಲಿ ಕಂಪನಿ ನೀಡಿದ ಕಿರುಕುಳವನ್ನ ಸವಿವರವಾಗಿ ಬರೆದು ನನ್ನ ಸಾವಿಗೆ ಪ್ಲಾಂಟ್ ಹೆಡ್ ರಾಮಪ್ರಸಾದ್ ಹಾಗೂ HR ಮುಷೀದ್ ಉಲ್ಲಾ ಖಾನ್ ಎಂದು ಉಲ್ಲೇಖಿಸಿ ನೇಣಿಗೆ ಶರಣಾಗಿದ್ದಾರೆ.ಇಬ್ಬರಿಗೂ ಶಿಕ್ಷೆ ನೀಡಿ ನ್ಯಾಯ ಕೊಡಿಸಬೇಕೆಂದು ಡೆತ್ ನೋಟ್ ನಲ್ಲಿ ಮನವಿ ಮಾಡಿದ್ದಾರೆ.ಡೆತ್ ನೋಟ್ ಆಧಾರದಂತೆ ನಂಜನಗೂಡು ಗ್ರಾಮಾಂತರ ಪೊಲೀಸರು ಪ್ಲಾಂಟ್ ಹೆಡ್ ರಾಮಪ್ರಸಾದ್ ಹಾಗೂ HR ಮುಷೀದ್ ಉಲ್ಲಾ ಖಾನ್ ವಿರುದ್ದ FIR ದಾಖಲಿಸಿದ್ದಾರೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು… ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *