ಫುಟ್ ಪಾತ್ ವ್ಯಾಪಾರಿಗೆ ಆಶ್ರಯವಾದ ಕಾವೇರಿ ಕ್ರಿಯಾ ಸಮಿತಿ ಪೆಂಡಾಲ್…ಹೋರಾಟಗಾರರಿಗೆ ಇದು ಬೇಕಿತ್ತೇ…?

ಮೈಸೂರು,ನ22,Tv10 ಕನ್ನಡ

ಕಾವೇರಿಗಾಗಿ ಹೋರಾಟಗಾರರು ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ನಿರಂತರ ಹೋರಾಟದ ಪೆಂಡಾಲ್ ಫುಟ್ ಪಾತ್ ವ್ಯಾಪಾರಿಗೆ ಆಶ್ರಯವಾಗಿದೆ.ಅನಿರ್ಧಿಷ್ಠಾವಧಿ ಧರಣಿ ಹಮ್ಮಿಕೊಂಡ ಕಾವೇರಿ ಕ್ರಿಯಾ ಸಮಿತಿ ಯಾವುದೇ ಮುನ್ಸೂಚನೆ ನೀಡದೆ ಹೋರಾಟಕ್ಕೆ ಎಳ್ಳುನೀರು ಬಿಟ್ಟಿದೆ.ಕೆಲವು ದಿನಗಳ ಕಾಲ ಇದೇ ಪೆಂಡಾಲ್ ಕೆಳಗೆ ಕುಳಿತು ತಮಿಳುನಾಡಿಗೆ ನೀರು ಬಿಟ್ಟ ರಾಜ್ಯ ಸರ್ಕಾರದ ವಿರುದ್ದ ಆಕ್ರೋಷ ವ್ಯಕ್ತಪಡಿಸಿ ರಕ್ತ ಕೊಟ್ಟೇವು ನೀರು ಬಿಡುವುದಿಲ್ಲವೆಂದು ಗಂಟಾಘೋಷವಾಗಿ ಸಿಡಿದೆದ್ದಿದ್ದ ಹೋರಾಟಗಾರರು ತಣ್ಣಗಾಗಿದ್ದಾರೆ.ತಮಿಳುನಾಡಿಗೆ ನೀರು ಹರಿಯುವುದು ಸ್ಥಗಿತವಾಗದಿದ್ರೂ ಹೋರಾಟ ಮಾತ್ರ ಸ್ಥಗಿತವಾಗಿದೆ.ಪ್ರತಿಭಟನೆ ನಿಲ್ಲಿಸಿದ ಹೋರಾಟಗಾರರು ಕನಿಷ್ಟಪಕ್ಷ ಪೆಂಡಾಲ್ ಹಾಗೂ ಫ್ಲೆಕ್ಸ್ ನಾದ್ರೂ ತೆರುವುಗೊಳಿಸದೆ ತಿಂಗಳಿಂದ ಮೂಕವೇದನೆ ಅನುಭವಿಸಿದೆ.ಸಧ್ಯಕ್ಕಂತೂ ಕಾವೇರಿ ಕ್ರಿಯಾ ಸಮಿತಿ ಹೋರಾಟದ ಪೆಂಡಾಲ್ ಫುಟ್ ಪಾತ್ ವ್ಯಾಪಾರಿಯೊಬ್ಬರಿಗೆ ಆಶ್ರಯ ನೀಡಿದೆ.ರಾತ್ರಿ ವೇಳೆ ಯಾರಿಗೆ ತಾಣವಾಗಲಿದೆ ಗೊತ್ತಿಲ್ಲ.ಇನ್ನಾದರೂ ಕಾವೇರಿ ಕ್ರಿಯಾ ಸಮಿತಿ ಮುಖ್ಯಸ್ಥರು ಇದನ್ನ ಗಮನಿಸಿ ಪೆಂಡಾಲ್ ತೆರುವುಗೊಳಿಸಬೇಕಿದೆ.ಇಲ್ಲದಿದ್ದಲ್ಲಿ ಸಾರ್ವಜನಿಕ ವಲಯದಲ್ಲಿ ಹೋರಾಟದ ಬಗ್ಗೆ ಅಪಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ…

Spread the love

Related post

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…
ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ… ಮೈಸೂರು,ಸೆ6,Tv10 ಕನ್ನಡ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಮೇಟಗಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ನಡೆದಿದೆ.ನೇಣು ಬಿಗಿದ ಸ್ಥಿತಿಯಲ್ಲಿ ಶವ…

Leave a Reply

Your email address will not be published. Required fields are marked *