ಹುಲಿ ಕಾರ್ಯಾಚರಣೆ ಯಶಸ್ವಿ…ಸೆರೆಸಿಕ್ಕ ನರಹಂತಕ ವ್ಯಾಘ್ರ…ಮೈಸೂರಿನ ಪುನರ್ವಸತಿ ಕೇಂದ್ರಕ್ಕೆ ರವಾನೆ…

ಹುಲಿ ಕಾರ್ಯಾಚರಣೆ ಯಶಸ್ವಿ…ಸೆರೆಸಿಕ್ಕ ನರಹಂತಕ ವ್ಯಾಘ್ರ…ಮೈಸೂರಿನ ಪುನರ್ವಸತಿ ಕೇಂದ್ರಕ್ಕೆ ರವಾನೆ…

ಒಂದೇ ತಿಂಗಳಲ್ಲಿ ಇಬ್ಬರನ್ನ ಬಲಿ ಪಡೆದು
ಭೀತಿ ಹುಟ್ಟಿಸಿದ್ದ ನರಹಂತಕ ಹುಲಿ ಕೊನೆಗೂ ಸೆರೆಸಿಕ್ಕಿದೆ.ಇಬ್ಬರು ದನಗಾಹಿಗಳನ್ನ ಕೊಂದು ಜಾನುವಾರಗಳನ್ನು ಹೊತ್ತೊಯ್ದು ಆತಂಕ ಸೃಷ್ಟಿಸಿದ್ದ ಹುಲಿಯನ್ನ ಅರಣ್ಯ ಇಲಾಖೆ ಅಧಿಕಾರಿಗಳು ಮಧ್ಯರಾತ್ರಿ ಸುಮಾರು 3 ಗಂಟೆ ವೇಳೆ ಸೆರೆಹಿಡಿದಿದ್ದಾರೆ.
ಸುಮಾರು ಹತ್ತು ವರ್ಷ ವಯಸ್ಸಿನ ಗಂಡು ಹುಲಿ.ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದ ರತ್ನಮ್ಮ ಎಂಬ ದನಗಾಯಿ ಮಹಿಳೆಯನ್ನು ಬಲಿ ಪಡೆದಿತ್ತು.ಮಹದೇವನಗರದಲ್ಲಿ ಓರ್ವ ದನಗಾಹಿಯನ್ನ ಕೊಂದಿತ್ತು.ಹೆಡಿಯಾಲ ಮತ್ತು ಸುತ್ತಮುತ್ತಲು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಬಳ್ಳೂರು ಹುಂಡಿ ಗ್ರಾಮದ ಕಲ್ಲಹಾರ ಖಂಡಿ ಎಂಬ ಸ್ಥಳದಲ್ಲಿ ಹುಲಿ ಸೆರೆಯಾಗಿದೆ.
ಸೆರೆಸಿಕ್ಕ ಹುಲಿಯನ್ನ ಮೈಸೂರಿನ ಕೂರ್ಗಳ್ಳಿಯಲ್ಲಿರುವ ಹುಲಿಗಳ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ.
ವೈದ್ಯಾಧಿಕಾರಿ ವಾಸಿಮ್ ನರಭಕ್ಷಕ ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಬಂಡಿಪುರ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕ ರಮೇಶ್ ಕುಮಾರ್ ಹಾಗೂ ಹೆಡಿಯಾಲ ಎಸಿ ಎಫ್ ಪರಮೇಶ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚುಮಂದಿ ಕಾರ್ಯಾಚರಣೆ ನಡೆಸಿದ್ದರು.ಹಲವು ಸಿಸಿ ಕ್ಯಾಮರಾಗಳನ್ನ ಬಳಕೆ ಮಾಡಲಾಗಿತ್ತು.ಸಿಸಿ ಕ್ಯಾಮರಾದಲ್ಲಿ ಎರಡು ಹುಲಿಗಳು ಪತ್ತೆಯಾಗಿತ್ತು.ಸಧ್ಯ ಒಂದು ಹುಲಿ ಸೆರೆಯಾಗಿದೆ…

Spread the love

Related post

ಮೂರು ಹಸುಗಳ ಮೇಲೆ ಹುಲಿ ದಾಳಿ…ಒಂದು ಸಾವು ಎರಡಕ್ಕೆ ಗಾಯ…ಅರಣ್ಯ ಇಲಾಖೆ ಕ್ಯಾಮರ ಕಣ್ಣಿಗೆ ಸೆರೆಯಾದ ವ್ಯಾಘ್ರ…

ಮೂರು ಹಸುಗಳ ಮೇಲೆ ಹುಲಿ ದಾಳಿ…ಒಂದು ಸಾವು ಎರಡಕ್ಕೆ ಗಾಯ…ಅರಣ್ಯ ಇಲಾಖೆ…

ನಂಜನಗೂಡು,ಜು4,Tv10 ಕನ್ನಡ ಒಂದೇ ದಿನ ಮೂರು ಹಸುಗಳ ಮೇಲೆ ದಾಳಿ ಮಾಡಿದ ವ್ಯಾಘ್ರ ಒಂದು ಸಾವನ್ನಪ್ಪಿದ್ದು ಎರಡು ಹಸುಗಳು ಗಾಯಗೊಂಡ ಘಟನೆ ನಂಜನಗೂಡು ತಾಲೂಕು ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.ಘಟನೆಯಿಂದ…
BTL ವಿಧ್ಯಾಸಂಸ್ಥೆಗೆ ದ್ರೋಹ…30 ಲಕ್ಷ ವಂಚನೆ…ಕಾರ್ಯದರ್ಶಿ ವಿರುದ್ದ FIR…

BTL ವಿಧ್ಯಾಸಂಸ್ಥೆಗೆ ದ್ರೋಹ…30 ಲಕ್ಷ ವಂಚನೆ…ಕಾರ್ಯದರ್ಶಿ ವಿರುದ್ದ FIR…

ಮೈಸೂರು,ಜು2,Tv10 ಕನ್ನಡ ವಿದ್ಯಾಸಂಸ್ಥೆಗೆ 30 ಲಕ್ಷ ವಂಚಿಸಿ ದ್ರೋಹಬಗೆದ ಕಾರ್ಯದರ್ಶಿ ವಿರುದ್ದ ಎನ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೈಸೂರಿನ ಕೆಸರೆ ಬಡಾವಣೆಯಲ್ಲಿರುವ ಬಿಟಿಎಲ್ ವಿದ್ಯಾವಾಹಿನಿ ಸ್ಕೂಲ್ ಮತ್ತು ಕಾಂಪೋಸಿಟ್ ಪಿಯು…
ನಾಡದೇವ ಚಾಮುಂಡೇಶ್ವರಿ ದರುಶನ ಪಡೆದ ಹ್ಯಾಟ್ರಿಕ್ ಹೀರೋ…

ನಾಡದೇವ ಚಾಮುಂಡೇಶ್ವರಿ ದರುಶನ ಪಡೆದ ಹ್ಯಾಟ್ರಿಕ್ ಹೀರೋ…

ಮೈಸೂರು,ಜು2,Tv10 ಕನ್ನಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ನಾಡದೇವತೆ ಚಾಮುಂಡೇಶ್ವರಿ ದರುಶನ ಪಡೆದರು.ಪತ್ನಿ ಗೀತಾ ಜೊತೆ ಚಾಮುಂಡಿಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದರು.ದೇವಸ್ಥಾನದ ಪ್ರಧಾನ ಅರ್ಚಕರಾದ…

Leave a Reply

Your email address will not be published. Required fields are marked *