ಹುಲಿ ಕಾರ್ಯಾಚರಣೆ ಯಶಸ್ವಿ…ಸೆರೆಸಿಕ್ಕ ನರಹಂತಕ ವ್ಯಾಘ್ರ…ಮೈಸೂರಿನ ಪುನರ್ವಸತಿ ಕೇಂದ್ರಕ್ಕೆ ರವಾನೆ…

ಹುಲಿ ಕಾರ್ಯಾಚರಣೆ ಯಶಸ್ವಿ…ಸೆರೆಸಿಕ್ಕ ನರಹಂತಕ ವ್ಯಾಘ್ರ…ಮೈಸೂರಿನ ಪುನರ್ವಸತಿ ಕೇಂದ್ರಕ್ಕೆ ರವಾನೆ…

ಒಂದೇ ತಿಂಗಳಲ್ಲಿ ಇಬ್ಬರನ್ನ ಬಲಿ ಪಡೆದು
ಭೀತಿ ಹುಟ್ಟಿಸಿದ್ದ ನರಹಂತಕ ಹುಲಿ ಕೊನೆಗೂ ಸೆರೆಸಿಕ್ಕಿದೆ.ಇಬ್ಬರು ದನಗಾಹಿಗಳನ್ನ ಕೊಂದು ಜಾನುವಾರಗಳನ್ನು ಹೊತ್ತೊಯ್ದು ಆತಂಕ ಸೃಷ್ಟಿಸಿದ್ದ ಹುಲಿಯನ್ನ ಅರಣ್ಯ ಇಲಾಖೆ ಅಧಿಕಾರಿಗಳು ಮಧ್ಯರಾತ್ರಿ ಸುಮಾರು 3 ಗಂಟೆ ವೇಳೆ ಸೆರೆಹಿಡಿದಿದ್ದಾರೆ.
ಸುಮಾರು ಹತ್ತು ವರ್ಷ ವಯಸ್ಸಿನ ಗಂಡು ಹುಲಿ.ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದ ರತ್ನಮ್ಮ ಎಂಬ ದನಗಾಯಿ ಮಹಿಳೆಯನ್ನು ಬಲಿ ಪಡೆದಿತ್ತು.ಮಹದೇವನಗರದಲ್ಲಿ ಓರ್ವ ದನಗಾಹಿಯನ್ನ ಕೊಂದಿತ್ತು.ಹೆಡಿಯಾಲ ಮತ್ತು ಸುತ್ತಮುತ್ತಲು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಬಳ್ಳೂರು ಹುಂಡಿ ಗ್ರಾಮದ ಕಲ್ಲಹಾರ ಖಂಡಿ ಎಂಬ ಸ್ಥಳದಲ್ಲಿ ಹುಲಿ ಸೆರೆಯಾಗಿದೆ.
ಸೆರೆಸಿಕ್ಕ ಹುಲಿಯನ್ನ ಮೈಸೂರಿನ ಕೂರ್ಗಳ್ಳಿಯಲ್ಲಿರುವ ಹುಲಿಗಳ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ.
ವೈದ್ಯಾಧಿಕಾರಿ ವಾಸಿಮ್ ನರಭಕ್ಷಕ ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಬಂಡಿಪುರ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕ ರಮೇಶ್ ಕುಮಾರ್ ಹಾಗೂ ಹೆಡಿಯಾಲ ಎಸಿ ಎಫ್ ಪರಮೇಶ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚುಮಂದಿ ಕಾರ್ಯಾಚರಣೆ ನಡೆಸಿದ್ದರು.ಹಲವು ಸಿಸಿ ಕ್ಯಾಮರಾಗಳನ್ನ ಬಳಕೆ ಮಾಡಲಾಗಿತ್ತು.ಸಿಸಿ ಕ್ಯಾಮರಾದಲ್ಲಿ ಎರಡು ಹುಲಿಗಳು ಪತ್ತೆಯಾಗಿತ್ತು.ಸಧ್ಯ ಒಂದು ಹುಲಿ ಸೆರೆಯಾಗಿದೆ…

Spread the love

Related post

Tv10 ಇಂಪ್ಯಾಕ್ಟ್…ತ್ಯಾಜ್ಯಮುಕ್ತವಾದ ನುಗುನಾಲೆ…ಕೊನೆಗೂ ಎಚ್ಚೆತ್ತ ಅಧಿಕಾರಿಗಳು…

Tv10 ಇಂಪ್ಯಾಕ್ಟ್…ತ್ಯಾಜ್ಯಮುಕ್ತವಾದ ನುಗುನಾಲೆ…ಕೊನೆಗೂ ಎಚ್ಚೆತ್ತ ಅಧಿಕಾರಿಗಳು…

ನಂಜನಗೂಡು,ಫೆ5,Tv10 ಕನ್ನಡ ಕೊನೆಗೂ ನಂಜನಗೂಡು ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.ತ್ಯಾಜ್ಯ ಹಾಗೂ ಮಧ್ಯದ ಪ್ಯಾಕೆಟ್ ಗಳಿಂದ ತುಂಬಿತುಳುಕುತ್ತಿದ್ದ ನುಗು ನಾಲೆಯನ್ನ ಸ್ವಚ್ಛಗೊಳಿಸಿದ್ದಾರೆ.Tv10 ಕನ್ನಡ ಮಾಡಿದ ವರದಿಗೆ ಸ್ಪಂದಿಸಿದ ಅಧಿಕಾರಿಗಳು ನುಗುನಾಲೆಯನ್ನ…
ನಾಲೆ ನೀರು ಹರಿಯಲು ಬಿಡದ ತ್ಯಾಜ್ಯ…ಅಧಿಕಾರಿಗಳನ್ನ ನಾಚಿಸುತ್ತಿರುವ ರಾಶಿ ರಾಶಿ ಮಧ್ಯದ ಪ್ಯಾಕೆಟ್ ಗಳು…ಧಾರ್ಮಿಕ ಪುಣ್ಯಕ್ಷೇತ್ರದಲ್ಲಿ ಇದೆಂತಹ ದುರ್ವ್ಯವಸ್ಥೆ

ನಾಲೆ ನೀರು ಹರಿಯಲು ಬಿಡದ ತ್ಯಾಜ್ಯ…ಅಧಿಕಾರಿಗಳನ್ನ ನಾಚಿಸುತ್ತಿರುವ ರಾಶಿ ರಾಶಿ ಮಧ್ಯದ…

… ನಂಜನಗೂಡು,ಫೆ4,Tv10 ಕನ್ನಡ ದಕ್ಷಿಣಕಾಶಿ ನಂಜನಗೂಡು ಧಾರ್ಮಿಕ ಪುಣ್ಯಕ್ಷೇತ್ರವೆಂದೇ ಪ್ರಖ್ಯಾತಿ ಹೊಂದಿದೆ.ಇಲ್ಲಿಗೆ ಬರುವ ಭಕ್ತರು ಕಪಿಲೆಯಲ್ಲಿ ಮಿಂದು ಪಾಪ ಕಳೆಯಲು ಬರುತ್ತಾರೆ.ಆದ್ರೆ ಕಪಿಲೆಯ ಒಡಲಲ್ಲಿ ಸೇರುತ್ತಿರುವ ತ್ಯಾಜ್ಯ ಭಕ್ತರನ್ನ…
ಕೇಂದ್ರ ಸರ್ಕಾರದ ಬಜೆಟ್ ವಿರುದ್ದ ಆಕ್ರೋಷ…ಮೈಸೂರು ಕನ್ನಡ ವೇದಿಕೆ ವತಿಯಿಂದ ತೆಂಗಿನ ಚಿಪ್ಪು ಹಿಡಿದು ಪ್ರತಿಭಟನೆ

ಕೇಂದ್ರ ಸರ್ಕಾರದ ಬಜೆಟ್ ವಿರುದ್ದ ಆಕ್ರೋಷ…ಮೈಸೂರು ಕನ್ನಡ ವೇದಿಕೆ ವತಿಯಿಂದ ತೆಂಗಿನ…

… ಮೈಸೂರು,ಫೆ4,Tv10 ಕನ್ನಡ ಉತ್ತರ ಭಾರತಕ್ಕೆ ಬೆಣ್ಣೆ ದಕ್ಷಿಣ ಭಾರತದ ಬಿಜೆಪಿ ಹೆಚ್ಚಾಗಿರುವ ಕರ್ನಾಟಕಕ್ಕೆ ಸುಣ್ಣ ಕೈಗೆ ಚಿಪ್ಪು ನೀಡಿರುವ ಕೇಂದ್ರ ಬಜೆಟಿನ ವಿರುದ್ಧ ಮೈಸೂರು ಕನ್ನಡ ವೇದಿಕೆ…

Leave a Reply

Your email address will not be published. Required fields are marked *