ಮೈಸೂರು:ಶಾರದಾದೇವಿ ಜಯಂತಿ ಆಚರಣೆ…ಶಾರದಾಮಾತೆ ಪ್ರತಿಮೆ ಸ್ಥಾಪನೆಗೆ ಒತ್ತಾಯ…
- TV10 Kannada Exclusive
- January 3, 2024
- No Comment
- 321
ಮೈಸೂರು,ಜ3,Tv10 ಕನ್ನಡ
ಮೈಸೂರಿನ ಶಾರದಾ ದೇವಿ ನಗರ ವೃತ್ತದಲ್ಲಿ ಶ್ರೀ ಶಾರದಾದೇವಿ 171ನೇ ಜಯಂತಿಯನ್ನ ಆಚರಿಸಲಾಯಿತು. ಆಧ್ಯಾತ್ಮಿಕ ಲೋಕ ಕಾರ್ಯಕ್ರಮದಲ್ಲಿ ಶ್ರೀ ಶಾರದಾ ಮಾತೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಸಿಹಿ ವಿತರಿಸಲಾಯಿತು. ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ತಮ್ಮ ಸಾಧನೆ, ತ್ಯಾಗ ಮತ್ತು ಪರಿಶ್ರಮದಿಂದ ಶ್ರೀ ರಾಮಕೃಷ್ಣ ಪರಮಹಂಸರು ಹಾಗೂ ವೀರಸನ್ಯಾಸಿ ಸ್ವಾಮಿ ವಿವೇಕಾನಂದರನ್ನು ಆಧ್ಯಾತ್ಮಿಕವಾಗಿ ಬೆಳೆಸಿದ ಮಹಾನ್ ಶಕ್ತಿ ಶ್ರೀ ಶಾರದಾದೇವಿಯವರು ಎಂದು ಬಣ್ಣಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಬಿ ಎಂ ರಘು ಮಾತನಾಡಿ
ವಿವೇಕಾನಂದನಗರ, ರಾಮಕೃಷ್ಣನಗರದ ವೃತ್ತಗಳಲ್ಲಿರುವಂತೆ ಶಾರದಾದೇವಿನಗರದಲ್ಲಿಯೂ ಶಾರದಾಮಾತೆಯ ಪ್ರತಿಮೆ ನಿರ್ಮಾಣವಾಗಬೇಕು ತನ್ಮೂಲಕ ಮೂವರು ಮಹನೀಯರನ್ನು ಕೊಡುಗೆಯನ್ನು ಶಾಶ್ವತವಾಗಿ ನೆನೆಯುವ ಕೆಲಸವಾಗುತ್ತದೆ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್,
ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ,
ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷರಾದ ಕಡಕೋಳ ಜಗದೀಶ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಸ್ಥಳೀಯ ಮುಖಂಡರಾದ ಎಚ್ ಜಿ ರಾಜಮಣಿ, ಶ್ರೀಧರ್ ಶರ್ಮ, ವಿಜೇಂದ್ರ, ರಾಜಕುಮಾರ್ ಕಾಮತ್, ಪಾಂಡುರಂಗ ಶೆಟ್ಟಿ, ರವಿ ಅರಸ್, ವಿನುತಾ, ಹೇಮಲತಾ, ರಾಧಾ ಮುತಾಲಿಕ್, ಸುಮಾ ಪ್ರಾಣೇಶ್, ರಮಾಬಾಯಿ, ಮಂಜುಳ ,ನೇತ್ರಾವತಿ,ರಮೇಶ್, ತುಳಸಿ,
ಹಾಗೂ ಇನ್ನಿತರರು ಹಾಜರಿದ್ದರು..