ಮೈಸೂರು:ಹೋಟೆಲ್ ಲೇಡಿ ಕ್ಯಾಶೀಯರ್ ಮೇಲೆ ಅತ್ಯಾಚಾರ…ಬೆತ್ತಲೆ ಫೋಟೋ,ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಕೃತ್ಯ…ಪ್ರತಿಷ್ಠಿತ ಹೋಟೆಲ್ ನಲ್ಲಿ ಘಟನೆ…

  • Crime
  • January 5, 2024
  • No Comment
  • 1878

ಮೈಸೂರು,ಜ4,Tv10 ಕನ್ನಡ

ಮದುವೆ ಆಗುವುದಾಗಿ ನಂಬಿಸಿ ಯುವತಿಯ ಬೆತ್ತಲೆ ಫೋಟೋ ಹಾಗೂ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಅತ್ಯಾಚಾರ ಮಾಡಿದ ಘಟನೆ ಮೈಸೂರು ಬೆಂಗಳೂರು ರಸ್ತೆಯ ರಿಂಗ್ ರೋಡ್ ಬಳಿ ಇರುವ ಏಟ್ರಿಯಂ ಹೋಟೆಲ್ ನಲ್ಲಿ ನಡೆದಿದೆ.ಹೋಟೆಲ್ ಮ್ಯಾನೇಜ್ಮೆಂಟ್ ನಡೆಸುವ ಪ್ರೀತಂ ಪುರಾಣಿಕ್ ಮೇಲೆ ಅತ್ಯಾಚಾರ ಆರೋಪ ಮಾಡಲಾಗಿದೆ.ಪ್ರೀತಂ ಪುರಾಣಿಕ್ ಹಾಗೂ ಆತನ ತಂದೆ ಕೃಷ್ಣದಾಸ್ ಪುರಾಣಿಕ್ ಎಂಬುವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಎನ್.ಆರ್.ಪೊಲೀಸ್ ಠಾಣೆಯಲ್ಲಿ
ನೊಂದ ಯುವತಿ ಪ್ರೇಮಾ(27)(ಹೆಸರು ಬದಲಿಸಲಾಗಿದೆ) ಪ್ರಕರಣ ದಾಖಲಿಸಿದ್ದಾಳೆ.

ಕೆಲವು ವರ್ಷಗಳಿಂದ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಪ್ರೇಮಾಳ ಜೊತೆ ಸಲುಗೆ ಬೆಳೆಸಿದ ಪ್ರೀತಂ ಪುರಾಣಿಕ್ ಮದುವೆ ಆಗುವುದಾಗಿ ನಂಬಿಸಿ ಬಲೆಗೆ ಹಾಕಿಕೊಂಡಿದ್ದ.ಹೋಟೆಲ್ ನಲ್ಲೇ ಇದ್ದ ಸ್ಪಾ ಒಂದರಲ್ಲಿ ಮದುವೆ ಆದ ಪ್ರೀತಂ ಪುರಾಣಿಕ್ ಯುವತಿಯ ಇಚ್ಛೆಗೆ ವಿರುದ್ದವಾಗಿ ದೈಹಿಕ ಸಂಪರ್ಕ ಬೆಳೆಸಿದ.ಇದರ ಫಲವಾಗಿ ಪ್ರೇಮ ಗರ್ಭವತಿಯಾಗಿದ್ದಳು.ಮದುವೆ ಆಗುವಂತೆ ಒತ್ತಾಯಿಸಿದಾಗ ಬಲವಂತವಾಗಿ ಮಾತ್ರೆ ತಿನ್ನಿಸಿ ಗರ್ಭಪಾತ ಮಾಡಿಸಿದ್ದ.ನಂತರದ ದಿನಗಳಲ್ಲಿ ಮತ್ತೆ ಮದುವೆ ಆಗುವ ನಾಟಕವಾಡಿ ಪ್ರೇಮಾಳ ಬೆತ್ತಲೆ ಫೋಟೋ ಹಾಗೂ ವಿಡಿಯೋಗಳನ್ನ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ದೈಹಿಕ ಸಂಪರ್ಕ ಬೆಳೆಸಿದ.ಪ್ರೇಮಾ ಮತ್ತೆ ಗರ್ಭವತಿಯಾಗಿದ್ದಾಳೆ.ಇದೀಗ ಮದುವೆ ಆಗುವಂತೆ ಒತ್ತಾಯಿಸಿದ ವೇಳೆ ಪ್ರೀತಂ ಪುರಾಣಿಕ್ ಹಾಗೂ ತಂದೆ ಕೃಷ್ಣದಾಸ್ ಪುರಾಣಿಕ್ ರವರು ಪ್ರೇಮಾಳಿಗೆ ಜಾತಿ ನಿಂದನೆ ಮಾಡಿ ಹೋಟೆಲ್ ನಿಂದ ಹೊರಗೆ ತಳ್ಳಿದ್ದಾರೆ.ಸಧ್ಯ ಗರ್ಭವತಿಯಾಗಿರುವ ಪ್ರೇಮಾ ತನ್ನನ್ನ ವಂಚಿಸಿದ ಪ್ರೀತಂ ಪುರಾಣಿಕ್ ಹಾಗೂ ಬೆಂಬಲ ನೀಡಿದ ತಂದೆ ಕೃಷ್ಣದಾಸ್ ಪುರಾಣಿಕ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಎನ್.ಆರ್.ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ…

Spread the love

Related post

ರಸ್ತೆ ಡಿವೈಡರ್ ಗೆ ಖಾಸಗಿ ಮಿನಿ ಬಸ್ ಢಿಕ್ಕಿ…ಅಯ್ಯಪ್ಪಸ್ವಾಮಿ ಭಕ್ತರು ಪ್ರಾಣಾಪಾಯದಿಂದ ಪಾರು…

ರಸ್ತೆ ಡಿವೈಡರ್ ಗೆ ಖಾಸಗಿ ಮಿನಿ ಬಸ್ ಢಿಕ್ಕಿ…ಅಯ್ಯಪ್ಪಸ್ವಾಮಿ ಭಕ್ತರು ಪ್ರಾಣಾಪಾಯದಿಂದ…

ರಸ್ತೆ ಡಿವೈಡರ್ ಗೆ ಖಾಸಗಿ ಮಿನಿ ಬಸ್ ಢಿಕ್ಕಿ…ಅಯ್ಯಪ್ಪಸ್ವಾಮಿ ಭಕ್ತರು ಪ್ರಾಣಾಪಾಯದಿಂದ ಪಾರು… ನಂಜನಗೂಡು,ಸೆ20,Tv10 ಕನ್ನಡ ರಸ್ತೆ ಡಿವೈಡರ್ ಗೆ ಢಿಕ್ಕಿ ಹೊಡೆದ ಮಿನಿಬಸ್ ಪಲ್ಟಿಯಾದ ಘಟನೆ ನಂಜನಗೂಡು…
ಮುಳುಗದೆ…ತೇಲದೆ…ಕರಗದೆ ಅತಂತ್ರವಾದ ಗಣಪತಿ ಮೂರ್ತಿಗಳು…ಸಂಪ್ರದಾಯಕ ವಿಸರ್ಜನೆಗೆ ಆಧ್ಯತೆ ನೀಡುವರೇ…?

ಮುಳುಗದೆ…ತೇಲದೆ…ಕರಗದೆ ಅತಂತ್ರವಾದ ಗಣಪತಿ ಮೂರ್ತಿಗಳು…ಸಂಪ್ರದಾಯಕ ವಿಸರ್ಜನೆಗೆ ಆಧ್ಯತೆ ನೀಡುವರೇ…?

ಮೈಸೂರು,ಸೆ20,Tv10 ಕನ್ನಡ ವಿಘ್ನನಿವಾರಕ ಗಣಪತಿ ಹಬ್ಬ ನಾಡಿನ ಮೂಲೆ ಮೂಲೆಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.ರಸ್ತೆ ರಸ್ತೆಗಳಲ್ಲೂ ವಿವಿಧ ಆಕಾರಗಳಲ್ಲಿ ವಿಗ್ರಹಗಳು ಭಕ್ತರನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.ವಿಸರ್ಜನೆಗಾಗಿ ಹಮ್ಮಿಕೊಳ್ಳುವ ಮೆರವಣಿಗೆಗಳಂತೂ ಜಂಬೂಸವಾರಿಯನ್ನೂ ನಾಚಿಸಯವಂತೆ…
ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು ಸಾಹಿತಿಗಳೇ ಆಗಲಿ :ಡಾ. ಸಿ ಪಿ ಕೆ.

ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು ಸಾಹಿತಿಗಳೇ ಆಗಲಿ :ಡಾ. ಸಿ ಪಿ…

ಮೈಸೂರು, ಸೆಪ್ಟೆಂಬರ್. 19-ಮಂಡ್ಯದಲ್ಲಿ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷರನ್ನಾಗಿ ಸಾಹಿತ್ಯೇತರ ವ್ಯಕ್ತಿಯನ್ನೂ ಅಧ್ಯಕ್ಷರನ್ನಾಗಿಸುವುದು ಬೇಡ ಎಂದು ಹಿರಿಯ ಸಾಹಿತಿ ಡಾ. ಸಿ. ಪಿ ಕೆ…

Leave a Reply

Your email address will not be published. Required fields are marked *