ನಿರ್ಲಕ್ಷ್ಯಕ್ಕೆ ಒಳಗಾದ ಮೈಸೂರು ಮಹಾನಗರ ಪಾಲಿಕೆ ಕಟ್ಟಡಗಳು…ಕಾಯಕಲ್ಪ ಒದಗಿಸುವರೇ ಅಧಿಕಾರಿಗಳು…?

ನಿರ್ಲಕ್ಷ್ಯಕ್ಕೆ ಒಳಗಾದ ಮೈಸೂರು ಮಹಾನಗರ ಪಾಲಿಕೆ ಕಟ್ಟಡಗಳು…ಕಾಯಕಲ್ಪ ಒದಗಿಸುವರೇ ಅಧಿಕಾರಿಗಳು…?

ಮೈಸೂರು,ಫೆ1,Tv10 ಕನ್ನಡ

ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣಗೊಂಡ ಮೈಸೂರು ಮಹಾನಗರ ಪಾಲಿಕೆ ಕಟ್ಟಡಗಳು ಸಂಪೂರ್ಣ ನಿರ್ಲಕ್ಯಕ್ಕೆ ಒಳಗಾಗಿದೆ.ಸ್ವಂತ ಕಟ್ಟಡಗಳನ್ನ ನಿರ್ಲಕ್ಷಿಸಿ ಬಾಡಿಗೆ ಕಟ್ಟಡಗಳನ್ನ ಆಶ್ರಯಿಸಿರುವ ಅಧಿಕಾರಿಗಳ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ

ಆಕಾಶವಾಣಿ ಕಚೇರಿ ಬಳಿಯ ಚೆಲುವಾಂಬ ಪಾರ್ಕ್ ಮುಂಭಾಗ ಇರುವ ಮೈಸೂರು ಮಹಾನಗರ ಪಾಲಿಕೆ ಕಟ್ಟಡಗಳ ಸ್ಥಿತಿ ಶೋಚನೀಯವಾಗಿದೆ.ಇಲ್ಲಿ ಮೂರು ಕಟ್ಟಡಗಳಿದೆ.ಎಲ್ಲವನ್ನೂ ನಿರ್ಲಕ್ಷಿಸಲಾಗಿದೆ.ತೋಟಗಾರಿಕೆ,ಆಶ್ರಯ ಇಲಾಖೆಗೆ ಸೇರಿದ ಎರಡು ಕಚೇರಿಗಳು ಹಾಗೂ ಖಾಲಿ ಬಿದ್ದಿರುವ ಒಂದು ಕಟ್ಟಡ ಅಧಿಕಾರಿಗಳ ನಿರ್ಲಕ್ಷತೆಗೆ ಮೂಕ ಸಾಕ್ಷಿಯಾಗಿ ನಿಂತಿವೆ.ಶಿಥಿಲಗೊಂಡ ಗೋಡೆಗಳು,ತೆರುವಾಗದ ತೆಂಗಿನ ಗರಿಗಳು,ಕಸದ ರಾಶಿಯಾದ ಆವರಣ,ಬಿರುಕು ಬಿಟ್ಟ ಕಾಂಪೌಂಡ್,ಸೋರಿಕೆಯಾಗುತ್ತಿರುವ ಕುಡಿಯುವ ನೀರು,ಫಾಸ್ಟ್ ಫುಡ್ ವಾಹನಗಳಿಗೆ ಆಶ್ರಯವಾದ ಆವರಣ,ಸೋರಿಕೆಯಾಗುತ್ತಿರುವ ಯುಜಿಡಿ ಪೈಪ್ ಗಳು ಅಧಿಕಾರಿಗಳ ಬೇಜವಾಬ್ದಾರಿತನವನ್ನ ಎತ್ತಿ ಹಿಡಿಯುತ್ತಿದೆ.ಕಚೇರಿಗಳನ್ನ ಸಮರ್ಪಕವಾಗಿ ಬಳಸಿಕೊಳ್ಳದ ಹಿನ್ನಲೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.ಲಕ್ಷಾಂತರ ತೆರಿಗೆ ಹಣ ವೆಚ್ಚ ಮಾಡಿ ನಿರ್ಮಿಸಲಾದ ಕಟ್ಟಡಗಳಿ ಶಿಥಿಲವಾಗುವ ಹಂತ ತಲುಪಿದ್ದರೂ ಕಾಯಕಲ್ಪ ಒದಗಿಸಲು ಅಧಿಕಾರಿಗಳು ಗಮನ ಹರಿಸುತ್ತಿಲ್ಲ.ಸ್ವಂತ ಕಟ್ಟಡಗಳನ್ನ ನಿರ್ಲಕ್ಷಿಸಿ ಬಾಡಿಗೆ ಕಟ್ಟಡ ಆಶ್ರಯಿಸುವ ಪಾಲಿಕೆ ಅಧಿಕಾರಿಗಳ ಕೆಟ್ಟ ನಿರ್ಧಾರಕ್ಕೆ ಕಡಿವಾಣ ಹಾಕಬೇಕಿದೆ.ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಲಾದ ಕಟ್ಟಡಗಳನ್ನ ಯೋಗ್ಯ ರೀತಿಯಲ್ಲಿ ಬಳಕೆ ಮಾಡುವಂತಾಗಬೇಕಿದೆ.ಸಂಪೂರ್ಣ ನಶಿಸಿಹೋಗುವ ಮುನ್ನ ಅಧಿಕಾರಿಗಳು ಎಚ್ಚೆತ್ತು ಕಟ್ಟಡಗಳನ್ನ ಸುಸ್ತಿತಿಗೆ ತಂದು ಬಳಕೆ ಮಾಡುವರೇ…?

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *