ಜಾತ್ರೆವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ…ಇಬ್ಬರು ಯುವಕರ ಬಂಧನ…
- TV10 Kannada Exclusive
- April 3, 2024
- No Comment
- 227
ನಂಜನಗೂಡು,ಏ3,Tv10 ಕನ್ನಡ
ಜಾತ್ರೆ ವೇಳೆ ಜಗಳವಾಡುತ್ತಿದ್ದ ಎರಡು ಯುವಕರ ಗುಂಪನ್ನ ಸಮಾಧಾನ ಪಡಿಸಲು ಹೋದ ಪೊಲೀಸ್ ಪೇದೆ ಮೇಲೆ ಇಬ್ಬರು ಯುವಕರು ಹಲ್ಲೆ ನಡೆಸಿದ ಘಟನೆ ನಂಜನಗೂಡು ತಾಲೂಕಿನ ಹಾಡ್ಯಾ ಗ್ರಾಮದಲ್ಲಿ ನಡೆದಿದೆ.ಘಟನೆ ಸಂಭಂಧ ಹಲ್ಲೆ ನಡೆಸಿದ ಸಂತೋಷ್ ಹಾಗೂ ಆನಂದ ಎಂಬ ಯುವಕರನ್ನ ಹುಲ್ಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಹಲ್ಲೆಗೆ ಕುಮ್ಮಕ್ಕು ನೀಡಿದ ಇತರರ ಮೇಲೂ FIR ದಾಖಲಾಗಿದೆ.
ಜಾತ್ರೆ ವೇಳೆ ಕಾಲಭೈರವೇಶ್ವರ ದೇವಸ್ಥಾನದ ಮುಂದೆ ಹುಲ್ಲಹಳ್ಳಿ ಠಾಣೆ ಪೇದೆ ಕುಮಾರ್ ಎಂಬುವರು ಕರ್ತವ್ಯ ನಿರ್ವಹಿಸುತ್ತಿದ್ದರು.ಈ ವೇಳೆ ಎರಡು ಯುವಕರ ಗುಂಪು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದೆ.ಜಗಳ ಬಿಡಿಸಲು ಪೇದೆ ಕುಮಾರ್ ತೆರಳಿದ್ದಾರೆ.ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಂತೋಷ್ ಹಾಗೂ ಆನಂದ ಮತ್ತು ಇತರರು ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ.ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಇತರ ಸಿಬ್ಬಂದಿಗಳು ಕುಮಾರ್ ನೆರವಿಗೆ ಬಂದಿದ್ದಾರೆ.ಹಲ್ಲೆಯಿಂದ ಗಾಯಗೊಂಡ ಪೇದೆ ಕುಮಾರ್ ಗೆ ಹುಲ್ಲಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಹಲ್ಲೆ ನಡೆಸಿದ ಸಂತೋಷ್ ಹಾಗೂ ಆನಂದ್ ರನ್ನ ಹುಲ್ಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ…