ಬಾಡಿಗೆಗೆ ಕಾರು ಪಡೆದು ಗಿರವಿ ಇಟ್ಟ ಭೂಪರು…ಮನನೊಂದ ಮಾಲೀಕ ನೇಣಿಗೆ ಶರಣು…ಡೆತ್ ನೋಟ್ ಬರೆದು ಆತ್ಮಹತ್ಯೆ…
- TV10 Kannada Exclusive
- April 5, 2024
- No Comment
- 200
ಮೈಸೂರು,ಏ5,Tv10 ಕನ್ನಡ
ಬಾಡಿಗೆಗೆ ಕಾರ್ ಪಡೆದ ಭೂಪರು ಗಿರವಿ ಇಟ್ಟ ಹಿನ್ನಲೆ ಮನನೊಂದ ಕಾರ್ ಮಾಲೀಕ ಡೆತ್ ನೋಟ್ ಬರೆದು ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ರಾಜೀವ್ ನಗರದಲ್ಲಿ ನಡೆದಿದೆ.ಮುಜಾಹಿದ್ ಪಾಷಾ ಮೃತ ದುರ್ದೈವಿ.ಪತಿಯ ಸಾವಿಗೆ ಕಾರಣರಾದ ಅಸ್ಗರ್ ಪಾಷಾ ಹಾಗೂ ಸಲ್ಲು ಎಂಬುವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮೃತನ ಪತ್ನಿ ಆಸ್ಮಾ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಾರು ಬಾಡಿಗೆ ಕೊಡುವ ವೃತ್ತಿಯಲ್ಲಿದ್ದ ಮುಜಾಹಿದ ಪಾಷಾ ತಮ್ಮ ಇನೋವಾ ಕಾರನ್ನ ಅಸ್ಗರ್ ಪಾಷಾ ಹಾಗೂ ಸಲ್ಲುಗೆ ಬಾಡಿಗೆಗಾಗಿ ನೀಡಿದ್ದಾರೆ.ಅಲ್ಲದೆ ಸ್ವಲ್ಪ ಸಾಲದ ಹಣವನ್ನೂ ಸಹ ನೀಡಿದ್ದಾರೆ.ಬಾಡಿಗೆಗೆ ಪಡೆದ ಕಾರನ್ನ ಅಸ್ಗರ್ ಪಾಷಾ ಹಾಗೂ ಸಲ್ಲು ರವರು ಗಿರವಿ ಇಟ್ಟಿದ್ದಾರೆ.ಜೊತೆಗೆ ಸಾಲದ ಹಣವನ್ನೂ ಸಹ ಹಿಂದಿರುಗಿಸದೆ ವಂಚಿಸಿದ್ದಾರೆ.ಇದರಿಂದ ಮನನೊಂದಿದ್ದ ಮುಜಾಹಿದ್ ಪಾಷಾ ಪತ್ನಿಯ ಜೊತೆ ತಮ್ಮ ನೋವನ್ನ ಹಂಚಿಕೊಂಡಿದ್ದಾರೆ.ರಂಜಾನ್ ಹಬ್ಬದ ಹಿನ್ನಲೆ ಮಕ್ಕಳಿಗೆ ಬಟ್ಟೆ ತರುವಂತೆ ಪತ್ನಿಗೆ ಹಣ ಕೊಟ್ಟು ಕಳುಹಿಸಿದ ಮುಜಾಹಿದ್ ಪಾಷಾ ತಮ್ಮ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಪತಿಯ ಸಾವಿಗೆ ಅಸ್ಗರ್ ಪಾಷಾ ಹಾಗೂ ಸಲ್ಲು ರವರೇ ಕಾರಣವೆಂದು ಆರೋಪಿಸಿರುವ ಪತ್ನಿ ಆಸ್ಮಾ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…