ಗಡೀಪಾರಾದ ಆರೋಪಿಯಿಂದ ಗಾಂಜಾ ಮಾರಾಟಕ್ಕೆ ಯತ್ನ…ಹೆಡೆಮುರಿ ಕಟ್ಟಿದ ಸಿಸಿಬಿ ಪೊಲೀಸರು…
- TV10 Kannada Exclusive
- April 7, 2024
- No Comment
- 197




ಮೈಸೂರು,ಏ7,Tv10 ಕನ್ನಡ
ಗಡೀಪಾರು ಶಿಕ್ಷೆಗೆ ಒಳಗಾಗಿದ್ದ ಆರೋಪಿಯೊಬ್ಬ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಗಾಂಜಾ ಮಾರಾಟ ಮಾಡಲು ಯತ್ನಿಸಿ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ.ಮಹಮದ್ ಕರೀಂ@ಕಾಲು ಬಂಧಿತ ಆರೋಪಿ.ಈ ಹಿಂದೆ ಈತನನ್ನ ಗಾಂಜಾ ಮಾರಾಟ ಆರೋಪದ ಹಿನ್ನಲೆ ಪೊಲೀಸರು ಹುಬ್ಬಳ್ಳಿ ನಗರಕ್ಕೆ ಗಡೀಪಾರು ಶಿಕ್ಷೆ ವಿಧಿಸಿದ್ದರು.ಚಾಲಾಕಿ ಮಹಮದ್ ಕರೀಂ ತನ್ನ ಗಡೀಪಾರು ಶಿಕ್ಷೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಮತ್ತೆ ಮೈಸೂರಿಗೆ ಎಂಟ್ರಿ ಕೊಟ್ಟು ತನ್ನ ಹಳೇ ಚಾಳಿ ಮುಂದುವರೆಸಿದ್ದಾನೆ.
ಸಿಸಿಬಿ ಠಾಣೆ ಪೊಲೀಸರು ಎರಡನೇ ಈದ್ಗಾ ಸಿವಿ ರಸ್ತೆ ಬಳಿ ಗಸ್ತಿನಲ್ಲಿದ್ದಾಗ ಮಹಮದ್ ಕರೀಂ.@.ಕಾಲು ಕೈನಲ್ಲಿ ಚೀಲ ಹಿಡಿದು ಅನುಮಾನಾಸ್ಪದವಾಗಿ ನಿಂತಿದ್ದಾನೆ.ಕೂಡಲೇ ಪೊಲೀಸರು ಬಳಿ ಬಂದಾಗ ಗಡಿಬಿಡಿಯಾಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.ಈ ವೇಳೆ ಈತನನ್ನ ವಶಕ್ಕೆ ಪಡೆದ ಪೊಲೀಸರು ಪರುಶೀಲನೆ ನಡೆಸಿದಾಗ ಬ್ಯಾಗ್ ನಲ್ಲಿ ಗಾಂಜಾ ಇರುವುದು ಬೆಳಕಿಗೆ ಬಂದಿದೆ.ವಿಚಾರಣೆ ನಡೆಸಿದಾಗ ರೆಹಮಾನ್ ಎಂಬಾತನಿಂದ 25 ಸಾವಿರ ಕೊಟ್ಟು ಗಾಂಜಾ ಖರೀದಿಸಿರುವುದಾಗಿ ತಿಳಿಸಿದ್ದಾನೆ.20 ಗ್ರಾಂ ನ ಪೊಟ್ಟಣಗಳನ್ನ ತಯಾರಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮಹಮದ್ ಕರೀಂ ಇದೀಗ ಪೊಲೀಸರ ಅತಿಥಿ.ಆರೋಪಿಯಿಂದ 1 ಕೆಜಿ 380 ಗ್ರಾಂ ಗಜಾ ಹಾಗೂ 20 ಗ್ರಾಂ ನ 5 ಪೊಟ್ಟಣಗಳನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಎನ್.ಆರ್.ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ.ಸಧ್ಯ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಮಹಮದ್ ಕರೀಂ ಹಾಗೂ ರೆಹಮಾನ್ ವಿರುದ್ದ ಇನ್ಸ್ಪೆಕ್ಟರ್ ರವರು ಪ್ರಕರಣ ದಾಖಲಿಸಿದ್ದಾರೆ.ಎರಡನೇ ಆರೋಪಿ ರೆಹಮಾನ್ ತಲೆಮರೆಸಿಕೊಂಡಿದ್ದಾನೆ.
ಸಿಸಿಬಿ ಪೊಲೀಸರ ಯಶಸ್ವಿ ಕಾರ್ಯಾಚರಣೆಯನ್ನ ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್,ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವರಾದ ಮುತ್ತುರಾಜ್ ಹಾಗೂ ಅಪರಾಧ ಮತ್ತು ಸಂಚಾರ ಡಿಸಿಪಿ ರವರಾದ ಜಾಹ್ನವಿ ರವರುಮತ್ತು ಸಿಸಿಬಿ ಎಸಿಪಿ ಸಂದೇಶ್ ಕುಮಾರ್ ರವರು ಶ್ಲಾಘಿಸಿದ್ದಾರೆ…