ಮೈಸೂರು-ಬೆಂಗಳೂರು ಹೆದ್ದಾರಿ ಚೆಕ್ ಪೋಸ್ಟ್ ನಲ್ಲಿ ಒಂದು ಲಕ್ಷ ಸೀಜ್…
- TV10 Kannada Exclusive
- April 10, 2024
- No Comment
- 345

ಮೈಸೂರು,ಏ10,Tv10 ಕನ್ನಡ
ಲೋಕಸಭಾ ಚುನಾವಣೆ ಹಿನ್ನಲೆ ನಡೆಯುತ್ತಿರುವ ತಪಾಸಣೆ ವೇಳೆ ಮೈಸೂರು-ಬೆಂಗಳೂರು ಹೆದ್ದಾರಿಯ ಚೆಕ್ ಪೋಸ್ಟ್ ನಲ್ಲಿ ಇಂದು ಒಂದು ಲಕ್ಷ ನಗದು ಸೀಜ್ ಮಾಡಲಾಗಿದೆ. ಸುರೇಶ್ ಬಾಬು ಎಂಬುವರು ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಹಣ ಪತ್ತೆಯಾಗಿದೆ.ವ್ಯವಸಾಯದ ವಿಚಾರಕ್ಕೆ ಹಣ ಸಾಗಿಸುತ್ತಿದ್ದುದಾಗಿ ಸುರೇಶ್ ಬಾಬು ಹೇಳಿಕೆ ನೀಡಿದ್ದಾರೆ.ಆದರೆ ಈ ಸಂಭಂಧ ಯಾವುದೇ ದಾಖಲೆ ಇರಲಿಲ್ಲ.ಸಹಾಯಕ ಚುನಾವಣಾಧಿಕಾರಿಗಳು ಹಾಗೂ ತಹಸೀಲ್ದಾರ್ ನಿರ್ದೇಶನದಂತೆ ನೂಡಲ್ ಅಧಿಕಾರಿಗಳಾದ ಎಸ್.ವಿಶ್ವನಾಥ್ ಮತ್ತು ಸಿಬ್ಬಂದಿಗಳಾದ ಗುರುಚೇತನ್,ಸತೀಶ್ ಪಾಲ್ ರವರು ದಾಖಲೆ ಇಲ್ಕದ ಹಣವನ್ನ ವಶಕ್ಕೆ ಪಡೆದು ನಿಯಮಾನುಸಾರ ಜಿಲ್ಲಾ ಖಜಾನೆಗೆ ತಲುಪಿಸಿದ್ದಾರೆ…