ನಗರ ಪಾಲಿಕೆ ಆಯುಕ್ತೆ ಡಾ.ಮಧುಪಾಟೀಲ್ ರಿಂದ ಮತದಾನ ಜಾಗೃತಿ…ಬಲೂನ್ ಹಾರಿಸುವ ಮೂಲಕ ಚಾಲನೆ…
- TV10 Kannada Exclusive
- April 14, 2024
- No Comment
- 156
ಮೈಸೂರು,ಏ14,Tv10 ಕನ್ನಡ
ಲೋಕಸಭಾ ಚುನಾವಣೆ ಸನಿಹವಾಗುತ್ತಿದೆ.ಏಪ್ರಿಲ್ 26 ಮತದಾರರಿಗೆ ತಮ್ಮ ಹಕ್ಕನ್ನ ಚಲಾಯಿಸುವ ಮಹತ್ವದ ದಿನ.ಚುನಾವಣೆ ಹಿನ್ನಲೆ ಸ್ವೀಪ್ ಕಾರ್ಯಕ್ರಮದಡಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಮತದಾರರಿಗೆ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ವಲಯ ಕಚೇರಿ 06 ರ ವ್ಯಾಪ್ತಿ ಯಲ್ಲಿ ಬರುವ ಪುರಭವನದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಮುಂದೆ ಸಾರ್ವಜನಿಕರಿಗೆ ಮತದಾನ ಮಾಡುವಂತೆ ಪ್ರೇರೇಪಿಸುವ ಕಾರ್ಯಕ್ರಮಕ್ಕೆ ಪಾಲಿಕೆ ಆಯುಕ್ತರಾದ ಡಾ.ಮಧುಪಾಟೀಲ್ ಚಾಲನೆ ನೀಡಿದ್ದಾರೆ. ಮತದಾನ ಜಾಗೃತಿಯ ಬಲೂನ್ ಹಾರಿಸುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದ್ದಾರೆ.ಪ್ರಧಾನಿ ಮೋಧಿಯವರು ಚುನಾವಣೆಯನ್ನ ಹಬ್ಬದಂತೆ ಆಚರಿಸಲು ಕರೆ ನೀಡಿರುವ ಬೆನ್ನ ಹಿಂದೆಯೇ ಸರ್ಕಾರ ಸಹ ಮತದಾನದ ಜಾಗೃತಿ ಬಗ್ಗೆ ವಿವಿದ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿದ್ದು ಏಪ್ರಿಲ್ 26ರಂದು ಎಲ್ಲರೂ ಮತದಾನದ ಮಾಡುವಂತೆ ಡಾ.ಮಧುಪಾಟೀಲ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ
ವಲಯ ಆಯುಕ್ತರಾದ ವಾಣಿ. ವಿ .ಆಳ್ವ, ನಾಗರಾಜು, ಆನಂದ್, ಶಿವಕುಮಾರ್, ಸತ್ಯಮೂರ್ತಿ ಮಂಜುನಾಥ್ ರೆಡ್ಡಿ,ಅಭಿವೃದ್ಧಿ ಅಧಿಕಾರಿ ವೆಂಕಟೇಶ್,
ಸಹಾಯಕ ಕಂದಾಯ ಅಧಿಕಾರಿ ಸಿದ್ದರಾಜು,
ಹಿರಿಯ ಆರೋಗ್ಯ ನಿರೀಕ್ಷಕರು,
ಕಚೇರಿ ಸಿಬ್ಬಂದಿಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಸಾರ್ವಜನಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು…