ಮೊದಲ ಮತದಾನದ ನೆನಪಿಗಾಗಿ ಪ್ರತಿಯೊಬ್ಬರು ಗಿಡ ನೆಡಿ
- TV10 Kannada Exclusive
- April 25, 2024
- No Comment
- 200

ಮೈಸೂರು,ಏ25,Tv10 ಕನ್ನಡ
ಮೊದಲ ಮತದಾನದ ನೆನಪಿಗಾಗಿ ಪ್ರತಿಯೊಬ್ಬರು ಗಿಡವನ್ನು ನೆಡುವ ಮೂಲಕ ಹಬ್ಬದ ರೀತಿಯಲ್ಲಿ ಚುನಾವಣೆಯನ್ನು ಆಚರಿಸಬೇಕು.ಈ ನಿಟ್ಟಿನಲ್ಲಿ ಸೃಜನ್ ದಿನೇಶ್ ರವರು ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಮೊದಲ ಮತದಾನದ ನೆನಪಿಗಾಗಿ ತಮ್ಮ ಮನೆ ಆವರಣದಲ್ಲಿ ಸಂಪಿಗೆ ಗಿಡ ನೆಡುವ ಮೂಲಕ ತಮ್ಮ ಮೊದಲ ಮತದಾನವನ್ನು ಈ ರೀತಿಯಲ್ಲಿ ಸಂಭ್ರಮಿಸಿದರು.
ಈಗ ಮತ್ತೊಂದು ಲೋಕಸಭಾ ಚುನಾವಣೆ ಬಂದಿದೆ. ಆ ದಿನ ಅವರು ಹಾಕಿದ ಗಿಡ ಈಗ ಈ ಮಟ್ಟಿಗೆ ಬೆಳೆದಿದೆ. ಹಾಗಾಗಿ ಪ್ರತಿಯೊಬ್ಬರು ಈ ಚುನಾವಣೆಯಲ್ಲಿ ಯಾರು ಮೊದಲ ಮತದಾನ ಮಾಡುವರು ಅವರೆಲ್ಲರೂ ಕಡ್ಡಾಯವಾಗಿ ತಮ್ಮ ಮನೆಯ ಆವರಣ ಅಥವಾ ಎಲ್ಲಾದರೂ ಒಂದು ಗಿಡವನ್ನು ನೆಟ್ಟು ಆ ಗಿಡವನ್ನು ಪೋಷಿಸುವುದು ಆದ್ಯ ಕರ್ತವ್ಯ
ಏಕೆಂದರೆ ಪ್ರಸ್ತುತ ಸನ್ನಿವೇಶದಲ್ಲಿ ಪ್ರಕೃತಿ ಎಷ್ಟು ಮುಖ್ಯ ಎಂಬುದನ್ನು ಪದಗಳಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಭಾರತದ ಬಹುದೊಡ್ಡ ಪ್ರಜಾಪ್ರಭುತ್ವದಲ್ಲಿ ಕಡ್ಡಾಯವಾಗಿ ಮತ ಹಾಕುವ ಮೂಲಕ ಸದೃಢ ರಾಷ್ಟ್ರವನ್ನು ನಿರ್ಮಾಣ ಮಾಡುವ .ಜೊತೆಯಲ್ಲಿ ನಮ್ಮ ಪರಿಸರವನ್ನು ಮುಂದಿನ ತಲೆಮಾರಿಗೆ ಕಾದುಕೊಳ್ಳೋಣ .ಇದರ ಬಗ್ಗೆ ಯೋಚಿಸಿ ಚಿಂತಿಸಿ.
ಲಯನ್ ಸಿ.ಆರ್ .ದಿನೇಶ್
ಪ್ರಾಂಶುಪಾಲರು ಮೈಸೂರು