ಗುರಾಯಿಸಿ ನೋಡಿದ್ದಕ್ಕೆ ಮರ್ಡರ್…ನಾಲ್ವರಿಂದ ಕೃತ್ಯ…
- CrimeTV10 Kannada Exclusive
- May 31, 2024
- No Comment
- 609
ಮೈಸೂರು,ಮೇ31,Tv10 ಕನ್ನಡ
ಗುರಾಯಿಸಿ ನೋಡಿದ ಯುವಕನನ್ನ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರದಲ್ಲಿ ನಡೆದಿದೆ.ಅರ್ಬಾಜ್ ಖಾನ್(18) ಮೃತ ಯುವಕ.ಶಾದಿಲ್,ಶಹಬಾಜ್,ಶೋಯಬ್ ಹಾಗೂ ಸಾಹಿಲ್ ಕೃತ್ಯವೆಸಗಿದೆ ಆರೋಪಿಗಳು.ಪರಸ್ಪರ ಗಲಾಟೆಯಲ್ಲಿ ಆರೋಪಿ ಶಹಬಾಜ್ ಸಹ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.ಶಾಂತಿನಗರದ ಲಾಲ್ ಮಸೀದಿ ಬಳಿ ಅರ್ಬಾಜ್ ಖಾನ್ ಗುರಾಯಿಸಿ ನೋಡಿದ್ದಾನೆ.ಈ ವಿಚಾರದಲ್ಲಿ ಗಲಾಟೆ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿದೆ.ಈ ಸಂಭಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…