ಇಂದಿನಿಂದ ಶಾಲೆ ಆರಂಭ…ಮಕ್ಕಳಿಗೆ ವಿಶೇಷ ಸ್ವಾಗತ…ಶುಭಹಾರೈಸಿದ ಹಿರಿಯರು…

ಇಂದಿನಿಂದ ಶಾಲೆ ಆರಂಭ…ಮಕ್ಕಳಿಗೆ ವಿಶೇಷ ಸ್ವಾಗತ…ಶುಭಹಾರೈಸಿದ ಹಿರಿಯರು…

ಮೈಸೂರು,ಮೇ31,Tv10 ಕನ್ನಡ

ಇಂದಿನಿಂದ 2024-25 ನೇ ಶೈಕ್ಷಣಿಕ ವರ್ಷದ ಶಾಲೆಗಳು ಆರಂಭವಾಗಿದೆ.ರಜೆ ಮುಗಿಸಿ ಮುಂದಿನ ತರಗತಿಗಳಿಗೆ ತೆರಳುತ್ತಿರುವ ವಿಧ್ಯಾರ್ಥಿಗಳು ಹೊಸ ಹುರುಪಿನಿಂದ ಸಮವಸ್ತ್ರಗಳನ್ನ ಧರಿಸಿ ಶಾಲೆಗಳಿಗೆ ತೆರಳಿದ್ದಾರೆ.ರಜೆಯಲ್ಲಿ ಆಟಗಳಲ್ಲಿ ತೊಡಗಿ ಮತ್ತೆ ಓದಿನತ್ತ ಗಮನಹರಿಸುವ ವಿಧ್ಯಾರ್ಥಿಗಳು ಇಂದು ತಮ್ಮ ಶಾಲೆಗಳ ಮೆಟ್ಟಿಲು ಹತ್ತುತ್ತಿದ್ದಾರೆ.ಹೊಸ ಚೈತನ್ಯ ತುಂಬಿಕೊಂಡು ಶಾಲೆಗಳಿಗೆ ಬಂದ ವಿಧ್ಯಾರ್ಥಿಗಳಿಗೆ ಗುಲಾಬಿ ಹೂವು, ಮೈಸೂರ್ ಪಾಕ್, ಪುಸ್ತಕ ಪೆನ್ನು ನೀಡಿ ಶಾಲೆಗೆ ಬರಮಾಡಿಕೊಳ್ಳಲಾಗಿದೆ.
ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ಅಪೂರ್ವ ಸ್ನೇಹ ಬಳಗ ಹಾಗೂ ಅರಿವು ಸಂಸ್ಥೆಯ ಸದಸ್ಯರಗಳು ಮಕ್ಕಳನ್ನ ವಿಶೇಷವಾಗಿ ಸ್ವಾಗತಿಸಿ ಶುಭ ಹಾರೈಸಿದ್ದಾರೆ.ಈ ಸಂಭ್ರಮದ ಕ್ಷಣಕ್ಕಾಗಿ ಶಾಲೆಯ ಶಿಕ್ಷಕರ ಜೊತೆಗೂಡಿ ಶಾಲೆಯನ್ನು ಮಾವಿನ ಸೊಪ್ಪಿನ ತಳಿರು ತೋರಣದಲ್ಲಿ ಅಲಂಕರಿಸಿ ಮಕ್ಕಳಿಗೆ ಆರತಿ ಬೆಳಗಿ , ಹೂವಿನ ಮೇಲೆ ನಡೆಸಿಕೊಂಡು , ಗುಲಾಬಿ ಹೂ ಹಾಗೂ ಮೈಸೂರು ಪಾಕ್ ಮತ್ತು ಪುಸ್ತಕ ಪೆನ್ನು ನೀಡಿ ಶಾಲೆಗೆ ವಿಶೇಷವಾಗಿ ಬರಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ,ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್, ಎಸ್ ಎನ್ ರಾಜೇಶ್, ಸುಚಿಂದ್ರ, ಯದುನಂದನ್, ಆದರ್ಶ್, ನಾಳೆಯ ಮುಖ್ಯೋಪಾಧ್ಯಾಯರಾದ ಸುಗುಣ, ಶಿಕ್ಷಕರಾದ ಶಿವಯ್ಯ, ನಾಗರತ್ನ, ಶಿಲ್ಪ, ಸಿಬ್ಬಂದಿ ಮಮತಾ ಹಾಗೂ ಇನ್ನಿತರರು ಮಕ್ಕಳಿಗೆ ಶುಭಹಾರೈಸಿದ್ದಾರೆ…

Spread the love

Related post

ಎಂಎಲ್ಸಿ ವಿಶ್ವನಾಥ್ ವಿರುದ್ದ FIR…ಸಾಲದ ಹಣ ಕೇಳಲು ಹೋದ ವ್ಯಕ್ತಿ ಮೇಲೆ ಹಲ್ಲೆ ಆರೋಪ…55 ಲಕ್ಷ ಹಿಂದಿರುಗಿಸದ ಆರೋಪ…

ಎಂಎಲ್ಸಿ ವಿಶ್ವನಾಥ್ ವಿರುದ್ದ FIR…ಸಾಲದ ಹಣ ಕೇಳಲು ಹೋದ ವ್ಯಕ್ತಿ ಮೇಲೆ…

ಎಂಎಲ್ಸಿ ವಿಶ್ವನಾಥ್ ವಿರುದ್ದ FIR…ಸಾಲದ ಹಣ ಕೇಳಲು ಹೋದ ವ್ಯಕ್ತಿ ಮೇಲೆ ಹಲ್ಲೆ ಆರೋಪ…55 ಲಕ್ಷ ಹಿಂದಿರುಗಿಸದ ಆರೋಪ… ಮೈಸೂರು,ಮೇ20,Tv10 ಕನ್ನಡ ಸಾಲದ ಹಣ ವಾಪಸ್ ಕೇಳಲು ಹೋದ…
ಮಂಡ್ಯದಲ್ಲಿ ಮತ್ತೊಂದು ಬರ್ಬರ ಹತ್ಯೆ..ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ…

ಮಂಡ್ಯದಲ್ಲಿ ಮತ್ತೊಂದು ಬರ್ಬರ ಹತ್ಯೆ..ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ…

ಮಂಡ್ಯದಲ್ಲಿ ಮತ್ತೊಂದು ಬರ್ಬರ ಹತ್ಯೆ..ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ… ಮಂಡ್ಯ,ಮೇ20,Tv10 ಕನ್ನಡ ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಕೊಲೆ ನಡೆದಿದೆ.ಮಾರಕಾಸ್ತ್ರಗಳಿಂದ ಯುವಕನನ್ನ ದುಷ್ಕರ್ಮಿಗಳು ಕೊಚ್ಚಿ ಹಾಕಿದ್ದಾರೆ.ಮಂಡ್ಯ ಜಿಲ್ಲೆ ಮದ್ದೂರು…
ಸರ್ಕಾರಿ ಗೋಮಾಳದಲ್ಲಿ ಅಕ್ರಮ ಗಣಿಗಾರಿಕೆ…ತಹಸೀಲ್ದಾರ್ ದಾಳಿ…ಸ್ಪೋಟಕ್ಕೆ ಬಳಸುವ ವಸ್ತುಗಳು ವಶ…

ಸರ್ಕಾರಿ ಗೋಮಾಳದಲ್ಲಿ ಅಕ್ರಮ ಗಣಿಗಾರಿಕೆ…ತಹಸೀಲ್ದಾರ್ ದಾಳಿ…ಸ್ಪೋಟಕ್ಕೆ ಬಳಸುವ ವಸ್ತುಗಳು ವಶ…

ಸರ್ಕಾರಿ ಗೋಮಾಳದಲ್ಲಿ ಅಕ್ರಮ ಗಣಿಗಾರಿಕೆ…ತಹಸೀಲ್ದಾರ್ ದಾಳಿ…ಸ್ಪೋಟಕ್ಕೆ ಬಳಸುವ ವಸ್ತುಗಳು ವಶ… ಶ್ರೀರಂಗಪಟ್ಟಣ,ಮೇ19,Tv10 ಕನ್ನಡ ಅಕ್ರಮ ಗಣಿಗಾರಿಕೆ ವಿರುದ್ಧ ಮಂಡ್ಯ ಜಿಲ್ಲಾಡಳಿತದ ಸಮರ ಸಾರಿದೆ.ನಿಷೇಧದ ನಡುವೆಯೂ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ…

Leave a Reply

Your email address will not be published. Required fields are marked *