ಸಿಕ್ರೇಟ್ ಪ್ಲೇಸ್ ನಲ್ಲಿದ್ದ ಕೀ ಬಳಸಿ ನಗದು ಚಿನ್ನಾಭರಣ ದೋಚಿದ ಖದೀಮರು…40 ಗ್ರಾಂ ಚಿನ್ನ 80 ಸಾವಿರ ನಗದು ಕಳುವು…

ಸಿಕ್ರೇಟ್ ಪ್ಲೇಸ್ ನಲ್ಲಿದ್ದ ಕೀ ಬಳಸಿ ನಗದು ಚಿನ್ನಾಭರಣ ದೋಚಿದ ಖದೀಮರು…40 ಗ್ರಾಂ ಚಿನ್ನ 80 ಸಾವಿರ ನಗದು ಕಳುವು…

ಟಿ.ನರಸೀಪುರ,ಜೂ12,Tv10 ಕನ್ನಡ

ಸಿಕ್ರೆಟ್ ಪ್ಲೇಸ್ ನಲ್ಲಿ ಇರಿಸಿದ್ದ ಕೀ ಬಳಸಿ 1.80 ಲಕ್ಷ ಮೌಲ್ಯದ 40 ಗ್ರಾಂ ಚಿನ್ನಾಭರಣ ಹಾಗೂ 80 ಸಾವಿರ ನಗದು ದೋಚಿ ಪರಾರಿಯಾದ ಘಟನೆ ಟಿ.ನರಸೀಪುರ ತಾಲೂಕು ತುಂಬಲ ಗ್ರಾಮದ ಬೆಳ್ಳಬೆಳಕು ಬಡಾವಣೆಯಲ್ಲಿ ನಡೆದಿದೆ.ಸುಮ ಎಂಬುವರ ಮನೆಯಲ್ಲಿ ಘಟನೆ ನಡೆದಿದೆ.ಗೋಲಕದಲ್ಲಿ ಇಡಲಾಗಿದ್ದ 80 ಸಾವಿರ ನಗದು ಹಾಗೂ ಬೀರುವಿನಲ್ಲಿದ್ದ 40 ಗ್ರಾಂ ಚಿನ್ನಾಭರಣ ದೋಚಿದ ಖದೀಮರು ಪರಾರಿಯಾಗಿದ್ದಾರೆ.

ಮನೆಯಿಂದ ಹೊರಗಡೆ ತೆರಳುವ ವೇಳೆ ಪತಿ ಅಥವಾ ಮಗನ ಅನುಕೂಲಕ್ಕಾಗಿ ಕೀಗಳನ್ನ ಸೀಕ್ರೆಟ್ ಜಾಗದಲ್ಲಿ ಸುಮ ಇರಿಸಿ ಹೋಗುತ್ತಿದ್ದರು.ಇದನ್ನ ಸೂಕ್ಷ್ಮವಾಗಿ ಗಮನಿಸಿಕೊಂಡಿದ್ದ ಖದೀಮರು ಸುಮ ಹಾಗೂ ಪತಿ ಮನೆಯಿಂದ ಹೊರಗಡೆ ತೆರಳಿದ ಸಂಧರ್ಭವನ್ನ ಬಳಸಿ ಸೀಕ್ರೆಟ್ ಪ್ಲೇಸ್ ನಲ್ಲಿದ್ದ ಕೀ ಬಳಸಿ ಕೃತ್ಯವೆಸಗಿದ್ದಾರೆ.ಮಾಜಿ ಶಾಸಕ ಅಶ್ವಿನ್ ಕುಮಾರ್ ರವರ ತೋಟದ ಮನೆಯ ಮುಂಭಾಗದಲ್ಲೇ ಕೃತ್ಯ ನಡೆದಿದೆ.ತೋಟದ ಮನೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು ಕಳ್ಳರ ಕೈಚಳಕ ಸೆರೆಯಾಗಿರುವ ಸಾಧ್ಯತೆ ಇದೆ ಎಂದು ಸುಮ ರವರು ಪೊಲೀಸರಿಗೆ ತಿಳಿಸಿದ್ದಾರೆ.ಸಿಸಿ ಕ್ಯಾಮರಾ ದೃಶ್ಯಗಳನ್ನ ಸಂಗ್ರಹಿಸಿರುವ ಟಿ.ನರಸೀಪುರ ಪೊಲೀಸರು ಖದೀಮರ ಸೆರೆಗೆ ಜಾಲ ಬೀಸಿದ್ದಾರೆ…

Spread the love

Related post

ಸರ್ಕಾರಿ ಜಾಗದಲ್ಲಿ ಅಕ್ರಮ ಹೋಟೆಲ್ ನಿರ್ಮಾಣ ಆರೋಪ – ಜಿಲ್ಲಾಧಿಕಾರಿ ಗಮನ ಹರಿಸಲು ರೈತರ ಮನವಿ

ಸರ್ಕಾರಿ ಜಾಗದಲ್ಲಿ ಅಕ್ರಮ ಹೋಟೆಲ್ ನಿರ್ಮಾಣ ಆರೋಪ – ಜಿಲ್ಲಾಧಿಕಾರಿ ಗಮನ…

ಸರ್ಕಾರಿ ಜಾಗದಲ್ಲಿ ಅಕ್ರಮ ಹೋಟೆಲ್ ನಿರ್ಮಾಣ ಆರೋಪ – ಜಿಲ್ಲಾಧಿಕಾರಿ ಗಮನ ಹರಿಸಲು ರೈತರ ಮನವಿ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗೇಟ್ ಸಮೀಪದ ಸರ್ವೇ ನಂ.218/1ಕ್ಕೆ ಸೇರಿದ ಸರ್ಕಾರಿ…
ಮೈಸೂರು, ಏಪ್ರಿಲ್ 13: ವಿಶ್ವಪ್ರಸಿದ್ಧ KRS Brindavan Gardens ನಲ್ಲಿ ಡಿಜಿಟಲ್ ಯುಗದಲ್ಲಿಯೂ “ಕ್ಯಾಶ್ ಮಾತ್ರ” ನಿಯಮ ಮುಂದುವರಿಯುತ್ತಿರುವುದು ಪ್ರವಾಸಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಮೈಸೂರು, ಏಪ್ರಿಲ್ 13: ವಿಶ್ವಪ್ರಸಿದ್ಧ KRS Brindavan Gardens ನಲ್ಲಿ ಡಿಜಿಟಲ್…

ಮೈಸೂರು, ಏಪ್ರಿಲ್ 13: ವಿಶ್ವಪ್ರಸಿದ್ಧ KRS Brindavan Gardens ನಲ್ಲಿ ಡಿಜಿಟಲ್ ಯುಗದಲ್ಲಿಯೂ “ಕ್ಯಾಶ್ ಮಾತ್ರ” ನಿಯಮ ಮುಂದುವರಿಯುತ್ತಿರುವುದು ಪ್ರವಾಸಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರವೇಶ ಟಿಕೆಟ್ ಪಡೆಯಲು ಬರುವವರಿಗೆ…
ಯುವಕನ ಕಿಡ್ನಾಪ್…ಮಂಗಳಮುಖಿ ವೇಷ ಹಾಕಿಸಿ ಕಲೆಕ್ಷನ್…ಸೆಕ್ಸ್ ವರ್ಕ್ ಗೆಯೂಸ್…ಕರಾಳದಂಧೆಯ ಮತ್ತೊಂದು ಮುಖ ಬಯಲು…

ಯುವಕನ ಕಿಡ್ನಾಪ್…ಮಂಗಳಮುಖಿ ವೇಷ ಹಾಕಿಸಿ ಕಲೆಕ್ಷನ್…ಸೆಕ್ಸ್ ವರ್ಕ್ ಗೆಯೂಸ್…ಕರಾಳದಂಧೆಯ ಮತ್ತೊಂದು ಮುಖ…

ಯುವಕನ ಕಿಡ್ನಾಪ್…ಮಂಗಳಮುಖಿ ವೇಷ ಹಾಕಿಸಿ ಕಲೆಕ್ಷನ್…ಸೆಕ್ಸ್ ವರ್ಕ್ ಗೆಯೂಸ್…ಕರಾಳದಂಧೆಯ ಮತ್ತೊಂದು ಮುಖ ಬಯಲು… ನಂಜನಗೂಡು,ಏ12,Tv10 ಕನ್ನಡ ಯುವಕನೊಬ್ಬನನ್ನ ಕಿಡ್ನಾಪ್ ಮಾಡಿ ಬಲವಂತವಾಗಿ ಮಂಗಳಮುಖಿ ವೇಷ ಹಾಕಿಸಿ ಕಲೆಕ್ಷನ್ ಹಾಗೂ…

Leave a Reply

Your email address will not be published. Required fields are marked *