ಜಿಲ್ಲಾಡಳಿತ ಕಾರ್ಯಾಚರಣೆ…ಕೋಟ್ಯಾಂತರ ಮೌಲ್ಯದ ಜಮೀನು ಸರ್ಕಾರದ ವಶಕ್ಕೆ…ಭೂಗಳ್ಳರಿಗೆ ಶಾಕ್…

ಜಿಲ್ಲಾಡಳಿತ ಕಾರ್ಯಾಚರಣೆ…ಕೋಟ್ಯಾಂತರ ಮೌಲ್ಯದ ಜಮೀನು ಸರ್ಕಾರದ ವಶಕ್ಕೆ…ಭೂಗಳ್ಳರಿಗೆ ಶಾಕ್…

  • Mysore
  • June 22, 2024
  • No Comment
  • 897

ಮೈಸೂರು,ಜೂ22,Tv10 ಕನ್ನಡ

ಜಿಲ್ಲಾಡಳಿತ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಸುಮಾರು 15 ಕೋಟಿ ಬೆಲೆಬಾಳುವ ಜಮೀನು ಭೂಗಳ್ಳರಿಂದ ರಕ್ಷಿಸಲಾಗಿದೆ.ಒತ್ತುವರಿ ಮಾಡಿಕೊಂಡು ದಾಖಲೆಯನ್ನ ಪರಿಶೀಲಿಸಿದ ಜಿಲ್ಲಾಡಳಿತ ಭೂಗಳ್ಳರಿಗೆ ಶಾಕ್ ನೀಡಿದೆ.ಒತ್ತುವರಿ ಮಾಡಿಕೊಂಡಿದ್ದ 10.28 ಎಕ್ರೆ ಜಮೀನು ಸರ್ಕಾರದ ವಶಕ್ಕೆ ಪಡೆಯಲಾಗಿದೆ.

ಸಿಎಂ ಸಿದ್ದರಾಮಯ್ಯ ತವರು ಮೈಸೂರು ಜಿಲ್ಲೆ ವರುಣಾ ಹೋಬಳಿ ಹಾರೋಹಳ್ಳಿ ಗ್ರಾಮ ಸರ್ವೆ ನಂ.274 ರಲ್ಲಿರುವ 10.28 ಎಕ್ರೆ ಜಮೀನು ಹುಲ್ಲುಬನ್ನಿಯಾಗಿದೆ.ಸದರಿ ಜಮೀನನ್ನ ಕರಿಗೌಡ,ನಾರಾಯಣಗೌಡ,ಚಿಕ್ಕಲಿಂಗಯ್ಯ,ತಿಮ್ಮೇಗೌಡ ಎಂಬುವರು ಒತ್ತುವರಿ ಮಾಡಿಕೊಂಡಿದ್ದರು. ಭೂಗಳ್ಳರಿಗೆ ಜಿಲ್ಲಾಡಳಿತ ಬಿಸಿ ಮುಟ್ಟಿಸಿದೆ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರವರ ನಿರ್ದೇಶನದ ಮೇರೆಗೆ ದಾಖಲೆಗಳನ್ನ ಪರಿಶೀಲಿಸಿದ ಉಪವಿಭಾಗಾಧಿಕಾರಿಗಳಾದ ಕೆ.ಆರ್.ರಕ್ಷಿತ್ ರವರು ಒತ್ತುವರಿ ಆಗಿರುವ ಜಮೀನು ತೆರವುಗೊಳಿಸಿ ರಕ್ಷಿಸುವಂತೆ ತಹಸೀಲ್ದಾರ್ ರವರಿಗೆ ಆದೇಶಿಸಿದ್ದಾರೆ.


ಇದರಂತೆ ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ತಾಲೂಕು ಸೂಪರ್ ವೈಸರ್ ಪ್ರವೀಣ್,ತಾಲೂಕು ಭೂಮಾಪಕರಾದ ವೆಂಕಟೇಶ್,ಮಹದೇವಸ್ವಾಮಿ,ಮಹದೇವಸ್ವಾಮಿ
ಎಂ.ಉಪತಹಸೀಲ್ದಾರ್ ಲತಾ.ಜೆ.ಶರಣಮ್ಮ,ರಾಜಸ್ವ ನಿರೀಕ್ಷಕರಾದ ಡಿ.ಎಸ್.ಶಂಕರ್,ಗ್ರಾಮ ಆಡಳಿತಾಧಿಕಾರಿಗಳಾದ ಅಬ್ದುಲ್ ರಶೀದ್,ಚಂದ್ರಮೌಳೇಶ್ವರ,ಮುಖೇಶ್,ಮಾರುತಿ ನಾಯಕ್,ಹೇಮಂತ್ ಕುಮಾರ್,ನಾಡಕಚೇರಿ ಗುಮಾಸ್ತ ಮಂಜು,ವರುಣಾ ಠಾಣೆ ಪಿಎಸ್ಸೈ ಚೇತನ್

ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿ ಒತ್ತಯವರಿಯನ್ನ ತೆರವುಗೊಳಿಸಿದ್ದಾರೆ…

Spread the love

Related post

ಮಹಿಳೆ ಬಗ್ಗೆ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್…ಅಪ್ ಲೋಡ್ ಮಾಡಿದ ಮಹಿಳೆ ಮೇಲೆ FIR…

ಮಹಿಳೆ ಬಗ್ಗೆ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್…ಅಪ್ ಲೋಡ್ ಮಾಡಿದ…

ಮೈಸೂರು,ಜು6,Tv10 ಕನ್ನಡ ಖಾಸಗಿ ಕಂಪನಿ ಉದ್ಯೋಗಿ ಬಗ್ಗೆ ಅಸಭ್ಯ ಹಾಗೂ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಹಿಳೆಯೊಬ್ಬರ ಮೇಲೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕ್ರಾಪಿನ್ ಕಂಪನಿಗೆ ಸೇರಿದ…
ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ…

ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ…

ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ… ಮೈಸೂರು,ಜು6,Tv10 ಕನ್ನಡ ಹುಚ್ಚುನಾಯಿ ಕಡಿತದಿಂದ ಮೃತಪಟ್ಟ ಮಹಾಲಿಂಗೇಶ್ವರ ದೇವಸ್ಥಾನದ ಬಸವನಿಗೆ ಮೇಟಗಳ್ಳಿ ಗ್ರಾಮಸ್ಥರು ಶ್ರದ್ದಾಂಜಲಿ ಅರ್ಪಿಸಿದ್ದಾರೆ.ಕೆಲವು…
ಮೂರು ಹಸುಗಳ ಮೇಲೆ ಹುಲಿ ದಾಳಿ…ಒಂದು ಸಾವು ಎರಡಕ್ಕೆ ಗಾಯ…ಅರಣ್ಯ ಇಲಾಖೆ ಕ್ಯಾಮರ ಕಣ್ಣಿಗೆ ಸೆರೆಯಾದ ವ್ಯಾಘ್ರ…

ಮೂರು ಹಸುಗಳ ಮೇಲೆ ಹುಲಿ ದಾಳಿ…ಒಂದು ಸಾವು ಎರಡಕ್ಕೆ ಗಾಯ…ಅರಣ್ಯ ಇಲಾಖೆ…

ನಂಜನಗೂಡು,ಜು4,Tv10 ಕನ್ನಡ ಒಂದೇ ದಿನ ಮೂರು ಹಸುಗಳ ಮೇಲೆ ದಾಳಿ ಮಾಡಿದ ವ್ಯಾಘ್ರ ಒಂದು ಸಾವನ್ನಪ್ಪಿದ್ದು ಎರಡು ಹಸುಗಳು ಗಾಯಗೊಂಡ ಘಟನೆ ನಂಜನಗೂಡು ತಾಲೂಕು ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.ಘಟನೆಯಿಂದ…

Leave a Reply

Your email address will not be published. Required fields are marked *